ಶಾಸಕ ಶ್ರೀರಾಮುಲು ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹ??

ಕೊಪ್ಪಳ :

    ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಶಾಸಕ ಬಿ.ಶ್ರೀರಾಮುಲು ಅವರು ವಿಂಗ್​ ಕಮಾಂಡರ್​ ಅಭಿನಂದನ್ ಹೆಸರು ಬಳಕೆ ಮಾಡಿಕೊಂಡಿದ್ದಾರೆ. ಅಭಿನಂದನ್​ ಹೆಸರನ್ನು ಬಳಕೆ ಮಾಡದಂತೆ ಚುನಾವಣಾ ಆಯೋಗ ಈ ಮೊದಲು ಆದೇಶ ಹೊರಡಿಸಿತ್ತು. ಆದರು ಶ್ರೀರಾಮುಲು ಪ್ರಚಾರದ ವೇಳೆ ಅಭಿನಂದನ್​ ಹೆಸರು ಉಲ್ಲೇಖಿಸಿದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

   ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಡಾದಲ್ಲಿ‌ ಶ್ರೀರಾಮುಲು ಪ್ರಚಾರದಲ್ಲಿ ತೊಡಗಿದ್ದರು. ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಪರ ಶ್ರೀರಾಮುಲು‌ ಭಾಷಣ ಮಾಡುತ್ತಿದ್ದರು. ಈ ವೇಳೆ ಅಭಿನಂದನ್​ ಅವರನ್ನು ತಾಯ್ನಾಡಿಗೆ ಮರಳಿ ತಂದಿದ್ದಕ್ಕೆ ಅವರು ಭಾರತ ಸರ್ಕಾರವನ್ನು ಹೊಗಳಿದ್ದಾರೆ.

   ಶುಕ್ರವಾರ ರಾತ್ರಿ ಶ್ರೀರಾಮುಲು ಸಂಡೂರಿನ ಪ್ರಚಾರದಲ್ಲೂ ಅಭಿನಂದನ್​ ಹೆಸರು ಬಳಕೆ ಮಾಡಿದ್ದರು. “ಮನಮೋಹನ್ ಸಿಂಗ್ ಅವರಂಥ ಪ್ರಧಾನಿ ಇದ್ದಿದ್ದರೆ ವಿಂಗ್​ ಕಮಾಂಡರ್​ ಅಭಿನಂದನ್‌ ಅವರನ್ನು ಪಾಕಿಸ್ತಾನದಿಂದ ವಾಪಸು ಕರೆತರಲು ಸಾಧ್ಯವಾಗುತ್ತಿರಲಿಲ್ಲ. ಮನಮೋಹನ್‌ ಸಿಂಗ್ ಪ್ರಧಾನಿ ಆಗಿದ್ದರೆ ನಮ್ಮ ಸೈನಿಕರು ಅಲ್ಲೇ ಸತ್ತು ಹೋಗುತ್ತಿದ್ದರು. ಗಂಡು ಮೆಟ್ಟಿದ ನಾಯಕ ಮೋದಿ ಪ್ರಧಾನಿ ಆಗಿರುವುದಕ್ಕೆ ಪಾಕ್ ಹೆದರಿ ಒಂದೇ‌ದಿನದಲ್ಲಿ ಅಭಿನಂದನ್​ ಅವರನ್ನು ಬಿಡುಗಡೆ ಮಾಡಿದೆ,” ಎಂದಿದ್ದರು.

  ಅವರ ಭಾಷಣದಲ್ಲಿ ಎರಡು-ಮೂರು ಬಾರಿ ಅಭಿನಂದನ್ ಹೆಸರು ಬಳಕೆ ಮಾಡಿದ್ದರು. ಈ ಮೊದಲು ಅಭಿನಂದನ್ ಹೆಸರು, ಭಾವಚಿತ್ರ ಬಳಸದಂತೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಎಚ್ಚರಿಸಿತ್ತು. ಈಗ ಶ್ರೀರಾಮುಲು ಈ ನಿಯಮ  ಮೀರಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಪಕ್ಷಗಳು ಆಗ್ರಹಿಸಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

  

 

Recent Articles

spot_img

Related Stories

Share via
Copy link