ಬೆಂಗಳೂರು:
ಪ್ರತಿ ವರ್ಷ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನ (ಏ.14) ಮತ್ತು ಬುದ್ಧ ಪೂರ್ಣಿಮೆಯಂದು (ಮೇ 12) ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಸಿಹಿ ವಿತರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.2014ರಿಂದ ವಿಶೇಷ ದಿನಗಳಲ್ಲಿ ಬಂದಿಗಳಿಗೆ ಸಿಹಿ ವಿತರಿಸುವ ಪದ್ಧತಿ ಜಾರಿಯಲ್ಲಿದೆ. ಗಣರಾಜ್ಯೋತ್ಸವ, ಯುಗಾದಿ, ರಂಜಾನ್, ಕ್ರಿಸ್ಮಸ್ ಸೇರಿ ರಾಷ್ಟ್ರೀಯ ಹಬ್ಬಗಳು ಹಾಗೂ ಪ್ರಮುಖ ಹಬ್ಬಗಳಂದು ಕೈದಿಗಳಿಗೆ ಸಿಹಿ ವಿತರಿಸಲಾಗುತ್ತಿದೆ.
ಇದರಂತೆ ಅಂಬೇಡ್ಕರ್ ಜಯಂತಿ, ಬುದ್ಧ ಪೂರ್ಣಿಮೆಯಂದೂ ಕಾರಾಗೃಹಗಳಲ್ಲಿ ಸಿಹಿ ವಿತರಣೆಗೆ ಆದೇಶ ಹೊರಡಿಸಲು ಸಾಮಾಜಿಕ ಹೋರಾಟಗಾರ ಟಿ.ನರಸಿಂಹಮೂರ್ತಿ ಅವರು ಸಿ.ಎಂ ಅವರಿಗೆ ಮನವಿ ಸಲ್ಲಿಸಿದ್ದರು.ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಸಿ.ಎಂ ಟಿಪ್ಪಣಿ ಹೊರಡಿಸಿದ್ದರು. ಇದೀಗ ಗೃಹ ಇಲಾಖೆ ಅಂಬೇಡ್ಕರ್ ಜಯಂತಿ, ಬುದ್ಧ ಪೂರ್ಣಿಮೆಯಂದೂ ಕೈದಿಗಳಿಗೆ ಸಿಹಿ ವಿತರಿಸುವಂತೆ ಆದೇಶ ಹೊರಡಿಸಿದೆ.
