ಕರಿನಾ ಬಗ್ಗೆ ಶಾಕಿಂಗ್‌ ಟೀಕೆ ಮಾಡಿದ ನಿರ್ದೇಶಕ

ಮುಂಬೈ :

    ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆದ ದಾಳಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅವರ ಮನೆಯಲ್ಲಿ ಭದ್ರತಾ ಸಿಬ್ಬಂದಿಯೂ ಇರಲಿಲ್ಲವೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ಹೀಗಿರುವಾಗಲೇ ನಿರ್ದೇಶಕ ಆಕಾಶ್​ದೀಪ್ ಸಬೀರ್ ಹಾಗೂ ಅವರ ಪತ್ನಿ ಶೀಬಾ ಅವರು ಇತ್ತೀಚೆಗೆ ಸಂದರ್ಶನ ನೀಡಿದಿದ್ದು, ಕರೀನಾ ಬಗ್ಗೆ ಟೀಕೆ ಮಾಡಿದ್ದಾರೆ. ‘ಮನೆಗೆ ವಾಚ್​​ಮನ ಇಟ್ಟುಕೊಳ್ಳಲು ಪಾಪ ಹಣ ಇಲ್ಲ’ ಎಂದು ಟೀಕಿಸಿದ್ದಾರೆ.

   ‘ನಾನು ಕರೀನಾ ಅವರನ್ನು ಭೇಟಿ ಮಾಡಿದಾಗ ಅವರಿನ್ನೂ ಚಿಕ್ಕವರು. ಸೈಫ್ ಹಾಗೂ ಕರೀನಾ ಮದುವೆ ಆದಾಗ ನಾನು ಟಿವಿ ಡಿಬೇಟ್​ನಲ್ಲಿ ಕುಳಿತು ಅವರ ಪರ ಮಾತನಾಡಿದ್ದೆ. ನಾನು ಕರೀಷ್ಮಾ ಕಪೂರ್ ಅವರ ಮೊದಲ ಚಿತ್ರ ‘ಸಹಾರ’ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೆ. ಆಗ ಕರೀನಾ ನಟಿ ಆಗಿರಲಿಲ್ಲ, ಮಗುವಾಗಿದ್ದಳು’ ಎಂದು ಆಕಾಶ್​ದೀಪ್ ಹೇಳಿದ್ದಾರೆ.

   ‘ಕರೀನಾ ಮನೆಯಲ್ಲಿ ಭದ್ರತಾ ಸಿಬ್ಬಂದಿ ಏಕಿಲ್ಲ ಎಂಬುದು ನನ್ನ ಪ್ರಶ್ನೆ. ಮನೆಯಲ್ಲಿ 30 ಸಿಸಿಟಿವಿ ಇರಬಹುದು. ಆದರೆ, ಅವುಗಳು ಕಳ್ಳನನ್ನು ತಡೆದು ನಿಲ್ಲಿಸುತ್ತವೆಯೇ? ನಡೆದ ಅಪರಾಧವನ್ನು ಪತ್ತೆಹಚ್ಚಲು ಮಾತ್ರ ಅದು ಸಹಕಾರಿ ಆಗುತ್ತದೆಯೇ ಹೊರತು, ಅಪರಾಧ ನಡೆಯದಂತೆ ಸಿಸಿಟಿವಿ ತಡೆಯುವುದಿಲ್ಲ. ಕರೀನಾ ದಂಪತಿ ಯಾಕೆ ಫುಲ್ ಟೈಮ್ ಡ್ರೈವರ್​ನ ತಮ್ಮ ಬಳಿ ಇರಿಸಿಕೊಂಡಿಲ್ಲ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. 

   ಸದ್ಯ ಆಕಾಶ್​ದೀಪ್ ನೀಡಿದ ಹೇಳಿಕ ಚರ್ಚೆ ಆಗುತ್ತಿದೆ. ಅವರು ಕರೀನಾ ಅವರನ್ನು ಸರಿಯಾಗಿ ಪ್ರಶ್ನಿಸಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

Recent Articles

spot_img

Related Stories

Share via
Copy link