ಕೊರಟಗೆರೆ :
ಕೊರೋನಾ ಸಂಕಷ್ಟದ ಲಾಕ್ಡೌನ್ ಸಮಯದಲ್ಲಿ ಕಡು ಬಡಕುಟುಂಬ, ಕೂಲಿ ಕಾರ್ಮಿಕರ ಕುಟುಂಬ ಹಸಿವಿನಿಂದ ಬಳಲಬಾರುದು ಎಂಬ ದೃಷ್ಟಿಯಿಂದ ತಾಲ್ಲೂಕಿನ ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿಗಳು ಮತ್ತು ದಾನಿಗಳ ಸಹಕಾರದಿಂದ ದಿನಸಿ ಸಾಮಗ್ರಿಗಳ ಕಿಟ್ಗಳನ್ನು ವಿತರಿಸುತ್ತಿದ್ದು, ಅರ್ಹ ಫಲಾನುಭವಿಗಳು ಸಹಾಯವಾಣಿಗೆ ಕರೆ ಮಾಡಿ ಆಹಾರ ಕಿಟ್ ಪಡೆಯುವಂತೆ ಮನವಿ ಮಾಡಿದ್ದಾರೆ.
ದೇಶದಲ್ಲಿ ಆವರಿಸಿರುವ ಮಹಾಮಾರಿ ಕೊರೋನಾ ರೋಗ ತಾಲ್ಲೂಕಿನಲ್ಲೂ ವ್ಯಾಪಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರೋಗದ ಹತೋಟಿಗೆ ಲಾಕ್ಡೌನ್ ಘೋಷಿಸಿದ್ದು, ಲಾಕ್ಡೌನ್ನಿಂದ ಅದೆಷ್ಟೋ ಜನರು ಎರಡು ಹೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ. ಕೈಯಲ್ಲಿ ಹಣವಿಲ್ಲದೆ, ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಬಡವರ ನೆರವಿಗೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ಲಾಕ್ಡೌನ್ ಆರಂಭದಿಂದಲೂ ತಾಲ್ಲೂಕಿನ ಕೆಲ ಸಂಘ ಸಂಸ್ಥೆಗಳು ಈಗಾಗಲೆ ಆಹಾರ ನೀಡುತ್ತಿವೆ. ಅದರೊಂದಿಗೆ ಶ್ರೀಮಠವು ಮಠದ ಭಕ್ತರ ಸಹಕಾರದಲ್ಲಿ ತಾಲ್ಲೂಕಿನಲ್ಲಿ ಪ್ರತಿ ನಿತ್ಯ ಕೂಲಿ ಮಾಡಿ ಜೀವನ ನಡೆಸುವ ಕೂಲಿ ಕಾರ್ಮಿಕರಿಗೆ, ತಾಲ್ಲೂಕಿನಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ದಿನಸಿ ಸಾಮಗ್ರಿಗಳನ್ನು ನೀಡಲು ತೀರ್ಮಾನಿಸಿದ್ದೇವೆ. ದಿನಸಿ ಸಾಮಗ್ರಿಗಳ ಅವಶ್ಯಕತೆಯಿರುವ ಬಡ ಜನತೆ ಸಹಾಯವಾಣಿಗೆ ಕರೆ ಮಾಡಿ ಮನೆಯ ವಿಳಾಸ ತಿಳಿಸಿದರೆ, ನಮ್ಮ ಮಠದ ಭಕ್ತರು ನಿಮ್ಮ ಮನೆಗೆ ಸಾಮಗ್ರಿಗಳನ್ನು ತಲುಪಿಸುವ ಕೆಲಸ ಮಾಡುವರು. ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ ಕೆ.ಎನ್.ರಘು ಸಹಾಯವಾಣಿ ಸಂಖ್ಯೆ 80508 16950 ಕ್ಕೆ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕರೆ ಮಾಡಿ ತಿಳಿಸಬೇಕಾಗಿ ಶ್ರೀಗಳು ಕೋರಿದ್ದಾರೆ.
ಸಹಕಾರಕ್ಕೆ ಮನವಿ:-
ಬಡಜನತೆಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಕಾರ್ಯಕ್ಕೆ ಸಹಕಾರ ನೀಡುವ ಭಕ್ತರು ನೇರವಾಗಿ ದಿನಸಿ ಸಾಮಗ್ರಿಗಳನ್ನು ನೀಡಲು ಶ್ರೀ ವೀರಭದ್ರಶಿವಾಚಾರ್ಯ ಸ್ವಾಮಿಗಳನ್ನಾಗಲ್ಲಿ ಅಥವಾ ಕೊರಟಗೆರೆ ಕರ್ನಾಟಕ ಬ್ಯಾಂಕ್ ಖಾತೆ ಸಂಖ್ಯೆ 4112000100022201, ಐಎಫ್ಸಿ ಕೋಡ್ ಕೆಎಆರ್ಬಿ 0000411, ಯೂನಿಫೈಡ್ ಸೌಹಾರ್ಧ ಕ್ರೆಡಿಟ್ ಕೋ-ಆಪರೇಟಿಂಗ್ ಲಿ. ಹೆಸರಿನ ಖಾತೆಗೆ ಜಮಾ ಮಾಡುವಂತೆ ಶ್ರೀಗಳು ಕೋರಿದ್ದಾರೆ. ಜೊತೆಗೆ ಶ್ರೀಗಳು ಕೊರೋನಾ ನಿರ್ಮೂಲನೆ ಬಗ್ಗೆ ಜನರು ವ್ಯಕ್ತಿಗತ ಅಂತರ ಕಾಯ್ದುಕೊಂಡು, ಕೈಗಳನ್ನು ಸ್ಯಾನಿಟೈಸಿಂಗ್ ಮಾಡಿಕೊಂಡು ಕಡ್ಡಾಯವಾಗಿ ಮಾಸ್ಕ್ನ್ನು ಧರಿಸುವಂತೆ ಸಲಹೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
