ಕೊರಟಗೆರೆ :  ಮದುವೆಗೆ ಸಾಲ : ಯುವಕ ಆತ್ಮಹತ್ಯೆಗೆ ಶರಣು !!

ಕೊರಟಗೆರೆ : 

     ಮದುವೆಗಾಗಿ ಕೈಸಾಲ ಮಾಡಿದ್ದ ಯುವಕನೋರ್ವ ಸಾಲ ತೀರಿಸಲಾಗದೆ ಮದುವೆಯಾದ ಐದೇ ತಿಂಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

     ತಾಲ್ಲೂಕಿನ ತೋವಿನಕೆರೆ ಗ್ರಾಮದಲ್ಲಿ ದುರ್ಘಟನೆ ಜರುಗಿದ್ದು, ಚಿಕ್ಕಪ್ಪಯ್ಯನ ಮಗ ಹನುಮಂತರಾಜು (26) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ಮೃತ ಹನುಮಂತರಾಜು ಕಳೆದ 5 ತಿಂಗಳುಗಳ ಹಿಂದೆ ಕೈ ಸಾಲ ಮಾಡಿ ಮದುವೆಯಾಗಿದ್ದು, ಸಾಲದವರ ಕಾಟ ತಾಳಲಾರದೆ ಮದುವೆಯಾಗಿ ಕೇವಲ 5 ತಿಂಗಳಲ್ಲಿಯೇ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

     ಮೃತ ಯುವಕ ಕಳೆದ 5 ತಿಂಗಳುಗಳ ಹಿಂದೆ ಶಿರಾ ತಾಲ್ಲೂಕಿನ ಮೆಕೇರಹಳ್ಳಿ ಭೂಮಿಕಾ ಎಂಬುವರನ್ನು ವಿವಾಹವಾಗಿದ್ದು, ಮದುವೆಗಾಗಿ ಕೈ ಸಾಲ ಮಾಡಿಕೊಂಡಿದ್ದರು. ಪೋಷಕರಿಗೆ ಹಲವು ಬಾರಿ ಕೈ ಸಾಲದ ಬಗ್ಗೆ ತಿಳಿಸಿದಾಗ, ಈ ಬಾರಿ ಅಡಕೆ ತೋಟದ ಬೆಳೆ ಮಾರಿ ಹಣ ಹೊಂದಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೂ ಮೃತ ಯುವಕ ಧೃತಿಗೆಟ್ಟು ಶನಿವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

      ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್‍ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap