ಮಧುಗಿರಿ :
ಕುಷ್ಲಕ್ಯ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದು ಒಬ್ಬನಿಗೆ ಚಾಕು ಇರಿದಿರುವ ಘಟನೆ ವರದಿಯಾಗಿದೆ.ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದಂಡೀಪುರದ ವಾಸಿ ಚಂದ್ರ ಎನ್ನುವವನು ಕೊಡಿಗೇನಹಳ್ಳಿ ಗ್ರಾಮದ ನಂದಕುಮಾರ್ (18) ಎನ್ನುವವರ ನಡುವೆ ಬುಧವಾರ ರಾತ್ರಿ ಯಾವುದೊ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದು ಗುರುವಾರ ಬೆಳಗ್ಗೆ ಸುಮಾರು ಬೆ. 9ರ ಸಮಯದಲ್ಲಿ ಚಂದ್ರ ಎನ್ನುವವನು ನಂದಾ ನ ಮೇಲೆ ಗಲಾಟೆ ಮಾಡಿ ಚಾಕುವಿನಿಂದ ಹೊಟ್ಟೆ , ತಲೆ ಮತ್ತು ಕೈ ಭಾಗಗಳಿಗೆ ಇರಿದು ರಕ್ತ ಘಾಯಪಡಿಸಿದ್ದಾನೆ ಆರೋಪಿ ಚಂದ್ರ ಸ್ಥಳದಿಂದ ಪರಾರಿಯಾಗಿದ್ದಾನೆಂದು ತಿಳಿದು ಬಂದಿದ್ದು ಮಧುಗಿರಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ನಂದ ಕುಮಾರ್ ಎನ್ನುವವನು ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದು ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
