ಉಮೇಶ್ ಜಾಧವ್‍ಗೆ ಬಿಜೆಪಿ ಟಿಕೆಟ್ : ಹೈಕಮಾಂಡ್ ನಿರ್ಧಾರವೇ ಅಂತಿಮ

ಬೆಂಗಳೂರು:

       ಇತ್ತೀಚೆಗೆ ಪ್ರಧಾನಿ ಎದುರೇ ಕಾಂಗ್ರೆಸ್‍ಶಾಸಕ ಡಾ.ಉಮೇಶ್ ಜಾಧವ್‍ಬಿಜೆಪಿ ಸೇರ್ಪಡೆಗೊಂಡಿದ್ದರು. ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜಾಧವ್, ಬಿಜೆಪಿ ಟಿಕೆಟ್ ಮೇಲೆ ಕಲಬುರಗಿ ಲೋಕಸಭೆಗೆ ನಿಲ್ಲಲು ತಯಾರಿ ನಡೆಸಿದ್ದಾರೆ.

        ಸೋಲಿಲ್ಲದ ಸರದಾರ ಎಂದೇ ಪ್ರಸಿದ್ಧಿಗಳಿಸಿರುವ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಹೋರಾಡಲು ಉಮೇಶ್ ಜಾಧವ್‍ ನಿರ್ಧರಿಸಿದ್ದಾರೆ. ಈ ಸಂಬಂಧ ಬಿಜೆಪಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

         ಸ್ವತಃ ಬಿ.ಎಸ್.ಯಡಿಯೂರಪ್ಪ ಅವರೇ ಮುಂದೆ ನಿಂತು ಉಮೇಶ್ ಜಾಧವ್‍ರನ್ನ ಪಕ್ಷಕ್ಕೆ ಕರೆ ತಂದಿದ್ದಾರೆ.ಆದರೆ ,ಉಮೇಶ್‍ಜಾಧವ್ ಅವರ ರಾಜೀನಾಮೆಯನ್ನ ಸ್ಪೀಕರ್‍ರಮೇಶ್ ಕುಮಾರ್ ಇನ್ನೂ ಅಂಗೀಕರಿಸಿಲ್ಲ.ಇನ್ನೊಂದೆಡೆ ಜಾಧವ್ ಮೇಲೆ ಅನರ್ಹತೆಯ ತೂಗುಗತ್ತಿ ನೇತಾಡುತ್ತಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap