ಕುಣಿಗಲ್ : ಗ್ರಾ.ಪಂ. ಚುನಾವಣೆ : ಗ್ರಾಮಗಳಿಗೆ ಎಸ್ಪಿ ಭೇಟಿ

 ಕುಣಿಗಲ್ :

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ವಂಶಿಕೃಷ್ಣ ಅವರು ಕುಣಿಗಲ್ ತಾಲೂಕಿನ ಹೈಪರ್ ಸೆನ್ಸಿಟಿವ್ ಗ್ರಾಮ ಪಂಚಾಯಿತಿ ಚುನಾವಣೆಯ ಬೂತ್ ಕೇಂದ್ರಗಳಿಗೆ ಭೇಟಿ ನೀಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದ ಹಾಗೆ ಪಾರದರ್ಶಕವಾಗಿ ನಿರ್ಭೀತಿಯಿಂದ ಮತ ಚಲಾವಣೆ ಮಾಡುವಂತೆ ಸಾರ್ವಜನಿಕರಿಗೆ ತಿಳಿಸಿದರು.

     ಕುಣಿಗಲ್ ಠಾಣಾ ವ್ಯಾಪ್ತಿಯ ಸೊಬಗುಗಾನಹಳ್ಳಿ, ಯಲಿಯೂರು, ಕೆಂಪನಹಳ್ಳಿ, ಇಪ್ಪಾಡಿ, ಅಮೃತೂರು ಠಾಣಾ ವ್ಯಾಪ್ತಿಯ ನಾಗಸಂದ್ರ, ಯಡಿಯೂರು, ಜಿನ್ನಾಗರ ಗ್ರಾ ಪಂ ಗೆ ಭೇಟಿ ನೀಡಿ ಸ್ಥಳೀಯ ಮಟ್ಟದಲ್ಲಿ ನಡೆಯುವ ಚುನಾವಣೆಯಲ್ಲಿ ಗ್ರಾಮದ ಪ್ರಮುಖರು ಸಣ್ಣಪುಣ್ಣ ಘಟನೆಗಳೇನಾದರೂ ಸಂಭವಿಸಿದರೆ ಮುಂದೆ ನಿಂತು ಸಮಾಧನಪಡಿಸುವ ಮೂಲಕ ಘಟನೆಗಳನ್ನು ತಿಳಿಗೊಳಿಸಬೇಕೆಂದು ಹೇಳಿದರು.

     ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap