ತಿಪಟೂರು:
ಸಂಗೀತಕ್ಕೆ ಭಾμÉಯ ಹಂಗಿಲ್ಲ, ಸಂಗೀತಕ್ಕೆ ತಲೆಬಾಗದವರಿಲ್ಲ. ಮನಸ್ಸಿಗೆ ಸಂತೋಷ, ನೆಮ್ಮದಿ ನೀಡುವಲ್ಲಿ ಸಂಗೀತ ಪ್ರಮುಖ ಪಾತ್ರವಹಿಸುತ್ತದೆ. ಇಂತಹ ಸಂಗೀತದಿಂದಲೇ ದೇಶ-ವಿದೇಶದಲ್ಲಿ ಹೆಚ್ಚಿನ ಮನ್ನಣೆಗಳಿಸಿದ್ದ ಭಾರತದ ಕೋಗಿಲೆ ಲತಾ ಮಂಗೇಶ್ಕರ್ ಅವರ ಸಾವು ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಿವಕುಮಾರ್ ತಿಳಿಸಿದರು.
ತಾಲ್ಲೂಕು ಕಸಾಪ ಮತ್ತು ನಿವೃತ್ತ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಗಾನ ಕೋಗಿಲೆ ಲತಾ ಮಂಗೇಶ್ಕರ್ ಮತ್ತು ಕರ್ನಾಟಕದ ಕಬೀರರೆಂದೆ ಖ್ಯಾತರಾದ ಇಬ್ರಾಹಿಂ ಸುತಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, 30 ಸಾವಿರಕ್ಕೂ ಹೆಚ್ಚು ಜನಪ್ರಿಯ, ದೇಶಭಕ್ತಿ ಗೀತೆಗಳನ್ನು 36 ಭಾμÉಗಳಲ್ಲಿ ಹಾಡಿದ ಮಂಗೇಶ್ಕರ್ ಅವರು ಕನ್ನಡದಲ್ಲೂ ಎರಡು ಗೀತೆಗಳನ್ನು ಹಾಡಿದ್ದಾರೆ. ಯೇ ಮೇರಿ ವತನ್ ಕಿ ಲೋಗೊ ಗೀತೆಯಂತೂ ಭಾರತೀಯರ ಹೃನ್ಮನಗಳನ್ನು ಗೆದ್ದಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಷಣ್ಮುಖಸ್ವಾಮಿ ಮಾತನಾಡಿ, ಲತಾ ಮಂಗೇಶ್ಕರ್ ಅವರು ಸಂಗೀತ ಲೋಕದ ಅದ್ಭುತ. ಭಾರತರತ್ನ ಪ್ರಶಸ್ತಿಯನ್ನೂ ಒಳಗೊಂಡಂತೆ ದೇಶದ ಎಲ್ಲ ಗಣ್ಯ ಪ್ರಶಸ್ತಿಗಳೂ ಇವರನ್ನು ಅರಸಿಕೊಂಡು ಬಂದಿವೆ. ಜನ ಸಾಮಾನ್ಯರು ಇವರು ಹಾಡಿದ ಹಾಡುಗಳನ್ನು ಗುನುಗುಟ್ಟುವಂತೆ ಮಾಡಿದ್ದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಸಂಗೀತದ ಗಂಧ ಗಾಳಿ ಇಲ್ಲದವರೂ ಸಹ ಇವರ ಹಾಡುಗಳಿಗೆ ಮನಸೋತಿದ್ದು, ಇವರ ಗಾನ ಮಾಧುರ್ಯದಿಂದಾಗಿಯೆ ಹಲವು ಸಿನಿಮಾಗಳು ಯಶಸ್ವಿಯೂ ಆಗಿವೆ ಎಂದರು.
ಸಭೆಯಲ್ಲಿ ನಿವೃತ್ತ ನೌಕರರ ಸಹಕಾರಿಯ ಅಧ್ಯಕ್ಷ ಮಹದೇವಯ್ಯ, ಪಿ.ಆರ್.ಗುರುಸ್ವಾಮಿ, ಚಂದ್ರರಾಜ ಅರಸ್, ಶಿವಶಂಕರ್, ನಂ.ಶಿವಗಂಗಯ್ಯ, ಶಾಮಾಚಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾಲ್ಲೂಕು ಕಸಾಪ ಮತ್ತು ನಿವೃತ್ತ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಿಧನರಾದ ಲತಾ ಮಂಗೇಶ್ಕರ್ ಹಾಗೂ ಇಬ್ರಾಹಿಂ ಸುತಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೊನೆಯವರೆಗೂ ಸ್ನೇಹಿತರಾಗೆ ಉಳಿದ ಪ್ರೇಮಿಗಳು :
ಹೆಚ್.ಎಸ್.ಮಂಜಪ್ಪ ಮಾತನಾಡಿ, ಕ್ರಿಕೆಟ್ ಕ್ಷೇತ್ರದ, ಪ್ರತಿಷ್ಠಿತ ಭರತ್ಪುರ ರಾಜ ಮನೆತನದ ರಾಜ್ಸಿಂಗ್ ಡುಂಗರಗಪುರ್ ಅವರನ್ನು ಪ್ರೀತಿಸಿ ಮದುವೆಯಾಗಲು ಇಷ್ಟಪಟ್ಟರೂ ರಾಜ್ಸಿಂಗ್ರ ತಂದೆ ಒಪ್ಪದ ಕಾರಣ ಕುಮಾರಿಯಾಗೆ ಉಳಿಯಲು ಲತಾಜಿ ನಿರ್ಧರಿಸುತ್ತಾರೆ.
ಅದರಂತೆ ಡುಂಗರ್ಪುರ್ ಅವರು ಸಹ ಬೇರೆ ಯಾರನ್ನೂ ಮದುವೆಯಾಗದೆ ಕೊನೆಯ ತನಕ ಇಬ್ಬರೂ ಉತ್ತಮ ಸ್ನೇಹಿತರಾಗೆ ಉಳಿಯುತ್ತಾರೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಗಣರಾಜ್ಯೋತ್ಸವ ದಿನದಂದು ಇಂಗ್ಲಿμïನ ಅಬೈಡ್ ಗೀತೆಗೆ ಬದಲಾಗಿ ಲತಾಜಿ ಅವರ ಯೆ ಮೇರಿ ವತನ್ ಕಿ ಲೋಗೊ ಹಾಡನ್ನು ಸೇರ್ಪಡೆ ಮಾಡಿದ್ದು, ಲತಾ ಅವರಿಗೆ ನೀಡಿದ ಬಹು ದೊಡ್ಡ ಗೌರವವಾಗಿದೆ ಎಂದರು.
ಕರ್ನಾಟಕದ ಕಬೀರರೆಂದೆ ಪ್ರಸಿದ್ಧರಾಗಿದ್ದ ಇಬ್ರಾಹಿಂ ಸುತಾರ ಅವರನ್ನು 2011 ರಲ್ಲಿ ಗುರುಕುಲ ಮಠದ ಸಮಾರಂಭವೊಂದಕ್ಕೆ ಆಹ್ವಾನಿಸಲಾಗಿತ್ತು. ಅಂದಿನ ಅವರ ಎರಡು ಗಂಟೆಗಳ ಉಪನ್ಯಾಸ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಅಂತಹ ಮಾನವ ಶ್ರೇಷ್ಠರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ತಂದಿದೆ.
-ಷಣ್ಮುಖಸ್ವಾಮಿ, ನಿವೃತ್ತ ಪ್ರಾಂಶುಪಾಲರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
