ಡಾ.ಬಾಬು ಜಗಜೀವನ್ ರಾಮ್ ಅವರ 112ನೇ ಜನ್ಮ ದಿನ

ಹರಪನಹಳ್ಳಿ:

     ಪಟ್ಟಣದ ಮಿನಿ ವಿಧಾನಸೌಧಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ, ರಾಷ್ಟೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಶ್ರಯದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ 112ನೇ ಜನ್ಮ ದಿನವನ್ನು ಆಚರಿಸಲಾಯಿತು.

     ಡಾ.ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪವಿಭಾಗಾಧಿಕಾರಿ ಡಾ.ಮಂಜುನಾಥಸ್ವಾಮಿ ಮಾತನಾಡಿ, `ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಸರಳವಾಗಿ ಆಚರಿಸಲಾಗುತ್ತಿದೆ. ಬಾಬೂಜಿ ಹಸಿರು ಕ್ರಾಂತಿ ಮೂಲಕ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಶೋಷಿತ ವರ್ಗದ ದನಿಯಾಗಿ, ಬಡವರ ಆಶಾಕಿರಣವಾಗಿ ಬೆಳಗಿದ ಬಾಬೂಜಿ ಅವರು, ದೇಶದ ಜನತೆ ಸ್ವಾವಲಂಬಿ ಜೀವನ ನಡೆಸಲು ಹಲವು ಯೋಜನೆ ಜಾರಿಗೆ ತಂದಿದ್ದರು’ ಎಂದರು.

      ತಹಶೀಲ್ದಾರ್ ಪ್ರಸಾದ ಮಾತನಾಡಿ, ದೇಶ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಾಕಷ್ಟು ಯುವಜನತೆಯ ಪಾತ್ರ ಅಪಾರವಾಗಿದೆ. ಮಹನೀಯರ ನಡೆ-ನುಡಿ, ಅವರ ತತ್ವಾದರ್ಶಗಳನ್ನು ಅರ್ಥೈಸಿಕೊಂಡು ಭವಿಷ್ಯದ ಭಾರತಕ್ಕೆ ಯುವಕರು ಕಂಕಣಬದ್ಧರಾಗಬೇಕಿದೆ. ಜಗಜೀವನ್ ರಾಮ್ ಅವರ ಜೀವನ ಸಂದೇಶ ಅರಿಯುವುದು ಅಗತ್ಯವಾಗಿದೆ ಎಂದರು.

      ಸಮಾಜ ಕಲ್ಯಾಣಾಧಿಕಾರಿ ಆನಂದ ಡೊಳ್ಳಿನ ಮಾತನಾಡಿ, ಡಾ.ಬಾಬುಜಿ ಅವರು ಸಣ್ಣ ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಹಸಿರು ಕ್ರಾಂತಿ ಹರಿಕಾರ ಎನಿಸಿಕೊಂಡವರು ಅಂಬೇಡ್ಕರ್, ಬಾಬೂಜಿ ಅವರು ಒಂದೇ ಸಮುದಾಯಕ್ಕೆ ಸೀಮಿತವಾಗದೇ ಎಲ್ಲ ವರ್ಗದವರ ಏಳ್ಗೆಗೆ ಶ್ರಮಿಸಿದ್ದಾರೆ. ಡಾ.ಬಾಬೂಜಿ ಸಾಮಾಜಿಕ ಸ್ಥರದ ಬೇರೂರಿದ್ದ ಸಮಸ್ಯೆಗಳ ನಿವಾರಣೆಗಾಗಿ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು’ ಎಂದರು.

      ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ವಿವಿಧ ಇಲಾಖೆಯ ಅಧಿಕಾರಿಗಳಾದ ಉದಶಂಕರ ಬಂಕಾಪುರ, ಎನ್.ಜಿ.ಬಸವರಾಜ, ಚಂದ್ರಶೇಖರ ಪುರದ, ಮಹಮ್ಮದ ಸೈಯ್ಯದ್, ಕೆ.ಸುನಿತಾ, ಡಿ.ಆಸ್ಮೀನ್, ದೇವೇಂದ್ರಪ್ಪ, ಸಿ.ಆರ್.ಮುಂಡಾಸದ ಹಾಗೂ ನಾಗರಿಕರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link