ಚುನಾಯಿತ ಪ್ರತಿನಿಧಿಗಳು ದಕ್ಷತೆ ಪ್ರಾಮಾಣಿಕತೆ, ನೈತಿಕೆಯಿಂದ ನೆಡೆದುಕೊಳ್ಳಬೇಕು: ಗುರುಕುಲ ಶ್ರೀ

ತಿಪಟೂರು :

     ಪ್ರಾಮಾಣಿಕತೆ, ದಕ್ಷತೆ, ನೈತಿಕೆಯಿಂದ ಎಲ್ಲಾ ವರ್ಗದ ಜನರನ್ನು ಸಮಾನವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಕೊಳ್ಳಬೇಕು ಎಂದು ಗುರುಕುಲಾನಂದಶ್ರಮದ ಶ್ರೀ ಇಮ್ಮಡಿ ಕರಿಬಸವದೇಶೀಕೇಂದ್ರ ಮಹಾಸ್ವಾಮಿಜಿಯವರು ತಿಳಿಸಿದರು.

     ನಗರದ ಗುರುಕುಲಾನಂದಶ್ರಮದ ಆವರಣದಲ್ಲಿರುವ ಪಟ್ಟದ ಕರಿಬಸವದೇಶಿಕೇಂದ್ರ ಸ್ವಾಮಿಜಿಯವರ ಗದ್ದುಗೆಯಲ್ಲಿ ವೀರಶೈವ ಲಿಂಗಾಯಿತ ಯುವ ವೇದಿಕೆ (ನೊ) ತಿಪಟೂರು ಇವರ ವತಿಯಿಂದ ನಗರಸಭೆಯ ಚುನಾವಣೆಯಲ್ಲಿ ಚುನಾಯಿತ ವೀರಶೈವ ಲಿಂಗಾಯಿತ ನಗರಸಭಾ ಸದಸ್ಯರಿಗೆ ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತಾನಾಡಿದರು.

     ಪ್ರಸ್ತುತ ದಿನಗಳಲ್ಲಿ ರಾಜಕೀಯಕ್ಕೆ ಜನರು ಬರುತ್ತಿರುವುದು ಹಣ ಮಾಡುವುದಕ್ಕೆ ಎಂಬುದಾಗಿ ಕಾಣುತ್ತಿದ್ದು ಆದರೆ ರಾಜಕೀಯ ವ್ಯಕ್ತಿಗಳನ್ನು ಕೇಳಿದರೆ ನಾವು ಒಂದು ರೂಪಾಯಿ ತಿಂದಿಲ್ಲ ಎಂದು ಹೇಳುತ್ತಾ ಲಕ್ಷ ಕೋಟಿ ರೂಗಳನ್ನು ದೋಜುತ್ತಾರೆ, ಇವುಗಳನ್ನು ಹೋರತು ಪಡಿಸಿ ರಾಜಕೀಯ ವ್ಯಕ್ತಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆಯಿಂದ ಯಾವುದೇ ಜಾತಿ ಭೇಧ ಪಂಥಗಳು ಅನ್ನದೆ ಎಲ್ಲರನ್ನು ಸರಿ ಸಮಾನವಾಗಿ ಕಾಣುವ ಮನಸ್ಥಿತಿಯನ್ನು ಬೆಳಸಿಕೊಂಡು, ಜನಸಾಮಾನ್ಯರ ಸಮಸ್ಯೆಗಳನ್ನು ಅಲಿಸಿ ಅದಕ್ಕೆ ಪರಿಹಾರವನ್ನು ನೀಡುತ್ತಾ ಸಮಾಜಿಕವಾಗಿ, ದಕ್ಷತೆಯಿಂದ ಕೆಲಸ ಮಾಡಬೇಕು ಎಂದರು.

     ನಗರಸಭಾ ಸದಸ್ಯ ಯೋಗೀಶ್ ಮಾತನಾಡಿ ಸಮಾಜದ ಸಹಕಾರದಿಂದ ನಾವುಗಳು ಬೆಳೆದುಕೊಂಡಿದ್ದು, ಸಮಾಜದ ಸಂಘಟನೆಗಾಗಿ ಎಲ್ಲರೂ ಜೋತೆಯಲ್ಲಿ ದುಡಿದು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ವೀರಶೈವ ಲಿಂಗಾಯಿತ ಯುವ ವೇದಿಕೆಯ ಗೌರವಾಧ್ಯಕ್ಷ ವಿನಯ್ ಮಡೆನೂರು ಮಾತಾನಾಡಿ ನಾವುಗಳು ಕಳೆದ ನಾಲ್ಕು ವರ್ಷಗಳ ಹಿಂದೆ ಒಂಬತ್ತು ಯುವಕರ ಪ್ರಯತ್ನದಿಂದ ಒಂದು ವೇದಿಕೆಯನ್ನು ಪ್ರಾರಂಬಿಸಿದ್ದು, ಆಚಾರ-ವಿಚಾರಗಳ ಜೊತೆಯಲ್ಲಿಯೇ ಇಂದು ಸಾಮಾಜಿಕ ಜವಾಬ್ದಾರಿಗಳ ಕೆಲಸಗಳನ್ನು ಮಾಡುತ್ತಾ ನಾವೆಲ್ಲರೂ ಸಮಾಜದ ಏಳಿಗೆಗಾಗಿ ಹಾಗೂ ಸಂಘಟನೆಗಾಗಿ ಎಲ್ಲರೂ ಒಟ್ಟಾಗಿ ದುಡಿಯೋಣ ಎಂದು ತಿಳಿಸಿದರು.

     ನಗರಸಬಾ ಸದಸ್ಯ ಸಂಗಮೇಶ್ ಮಾತನಾಡಿ ಸಮಾಜ ಹಾಗೂ ಯುವ ವೇಧಿಕೆಯ ಜೊತೆ ನಾವುಗಳು ಸದಾ ಜೊತೆಯಲ್ಲಿದ್ದು ಸಮಾಜದ ಕೆಲಸವನ್ನು ಮಾಡಲು ನಾವು ಸಹ ಸಿದ್ದರಾಗಿರುತ್ತೇವೆ ಎಂದು ತಿಳಿಸಿದರು.

     ಅದ್ಯಕ್ಷತೆಯನ್ನು ವೀರಶೈವ ಲಿಂಗಾಯಿತ ಯುವ ವೇದಿಕೆಯ ತಾಲ್ಲೂಕು ಅದ್ಯಕ್ಷ ಅಶೋಕ್ ಬನ್ನಿಹಳ್ಳಿ ಮಾತನಾಡಿ ನಮ್ಮ ಸಮಾಜಕ್ಕೆ ಒಂದು ಸಮುದಾಯ ಭವನದ ಅವಶ್ಯಕತೆಯಿದ್ದು, ನಗರದ ಪ್ರಮುಖ ಸ್ಥಳದಲ್ಲಿ ಬಸವೇಶ್ವರ ಪುತ್ಥಳಿಯನ್ನು ನಿರ್ಮಿಸಲು ನಮ್ಮ ಸಮಾಜದ ಪ್ರಮುಖರು, ಮುಖಂಡರು, ರಾಜಕೀಯ ಪ್ರತಿನಿಧಿಗಳು ಸಹಕಾರ ನೀಡಬೇಕೆಂದು ಹಾಗೂ ಯುವಕರಿಗೆ ಸರಕಾರ ನೀಡುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳ ಬೇಕೆಂದು ತಿಳಿಸಿದರು. ನೂತನ ನಗರಸಬಾ ಸದಸ್ಯರಾದ ಸಂಗಮೇಶ್, ಶಶಿಕಿರಣ್, ಯೋಗೀಶ್, ಪದ್ಮತಿಮ್ಮೇಗೌಡರವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

      ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಸುದರ್ಶನ್ ಗೊರಗೊಂಡನಹಳ್ಳಿ, ಉಮೇಶ್, ಮನು, ಜನಾರ್ಧನ, ಶಶಿ ಈಚನೂರು, ದೀಪು ಹಿಂಡಿಸ್ಕೆರೆ, ಮತ್ತಿತರರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link