ಕೊರಟಗೆರೆ
ಮುಖ್ಯಮಂತ್ರಿ ಯಡಿಯೂರಪ್ಪ ಮಾ. 5 ರಂದು ಮಂಡಿಸಲಿರುವ ಆಯವ್ಯಯದಲ್ಲಿ ರೈತರ ಬದುಕನ್ನು ಹಸನಾಗಿಸುವ ಯೋಜನೆಗಳನ್ನು ನೀಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗು ಕೊರಟಗೆರೆ ವಿಧಾನಸಭಾ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಜೋನಿಗರಹಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ, ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನದಡಿ ಮಣ್ಣು ಆರೋಗ್ಯ ಚೀಟಿ ಹಾಗೂ ರೈತರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾ .5 ರಂದು ಮುಖ್ಯಮಂತ್ರಿ ಮಂಡಿಸುವ ಆಯವ್ಯಯದಲ್ಲಿ ರೈತರಿಗೆ ನೀರಾವರಿ ಯೋಜನೆಗಳು, ಸಾ¯ಮನ್ನಾ ಭಾಗ್ಯ, ಕೃಷಿ ಪ್ರಧಾನ ಆದ್ಯತೆ, ನದಿ ನೀರಿನ ಜೋಡಣೆಗಳಿಗೆ ವಿಶೇಷವಾದ ಆದ್ಯತೆಗಳನ್ನು ನೀಡುವರು ಎಂಬ ಭರವಸೆ ಇಟ್ಟುಕೊಂಡಿದ್ದೇನೆ. ಅದನ್ನು ಅವರು ಪರಿಪೂರ್ಣವಾಗಿ ರಾಜ್ಯದ ರೈತರಿಗೆ ನೆರವೇರಿಸಬೇಕು ಎಂದರು.
ಈಗಾಗಲೆ ಬಯಲುಸೀಮೆಯ ಜನರಿಗೆ ಮಹತ್ವದ ಕುಡಿಯುವ ನೀರಿನ ಯೋಜನೆಯಾದ ಎತ್ತಿನಹೊಳೆ ಯೋಜನೆಯು 13.5 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ರೂಪಗೊಂಡಿದ್ದು, ಪ್ರಸ್ತುತ ಮುಖ್ಯ ಎಂಜಿನಿಯರ್ ಪ್ರಕಾರ 24 ಸಾವಿರ ಕೋಟಿ ರೂ.ಗೆ ವೆಚ್ಚ ತಲುಪಲಿದೆ. ಆದರೆ ಇದರಿಂದ ಖುಷ್ಕಿ ಮಳೆ ಆಧಾರಿತ ರೈತರ ಜೀವನ ಮಹತ್ತರ ಮಟ್ಟಿಗೆ ಸುಧಾರಣೆಯಾಗುತ್ತದೆ. ರೈತರಿಗೆ ನಾವು ಸರಿಯಾದ ಸಮಯಕ್ಕೆ ನೀರು ಮತ್ತು ಗೊಬ್ಬರ ಬೀಜವನ್ನು ಒದಗಿಸಿದರೆ, ಅವರು ಯಾವುದೇ ಕಾರಣಕ್ಕೂ ಸಾ¯ವನ್ನು ಪಡೆಯುವುದಿಲ್ಲ ಮತ್ತು ಮನ್ನಾವನ್ನು ಕೇಳುವುದಿಲ್ಲ.
ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಿಗೆ 10 ಸಾವಿರ ಕೋಟಿ ರೂ. ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 10 ಸಾವಿರ ಕೋಟಿ ರೂ. ಸಾಲಗಳನ್ನು ಮನ್ನಾ ಮಾಡಿದ್ದರು. ಆದರೆ ಯಡಿಯೂರಪ್ಪ ಸಹ ರೈತರ ಸಾ¯ವನ್ನು ಮನ್ನಾವನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಆಧುನಿಕ ಜಗತ್ತು ವೇಗವಾಗಿ ಬೆಳೆಯುತ್ತಿದ್ದು, ಎಕರೆಗೆ 3 ಕ್ವಿಂಟಾಲ್ ಬೆಳೆಯುತ್ತಿದ್ದ ರಾಗಿಯು ಇಂದು 30 ಕ್ವಿಂಟಾಲ್ ತಲುಪಿದೆ. ಆಧುನಿಕ ಕೃಷಿ ಬೇಸಾಯದಿಂದ ರಾಸಾಯನಿಕ ಗೊಬ್ಬರ, ಕ್ರಿಮಿ ನಾಶಕಗಳನ್ನು ಹೆಚ್ಚು ಬಳೆಸುತ್ತಿರುವುದರಿಂದ ಮಣ್ಣು ಸತ್ವವನ್ನು ಕಳೆದುಕೊಂಡು ಅಪೌಷ್ಟಿಕತೆಯಿಂದ ಜನರು ಬಳಲುತ್ತಿದ್ದಾರೆ. ರೈತರು ಕೃಷಿಯಲ್ಲಿ ಪ್ರಾಮಾಣಿಕ ರೀತಿಯಲ್ಲಿ ಸಾವಯವ ಗೊಬ್ಬರವ್ನನು ಹೆಚ್ಚು ಬಳಸುವಂತಾಗಬೇಕು.
ನಮ್ಮ ಹಿಂದಿನ ಸಂಸ್ಕತಿ ರಾಗಿಯನ್ನು ಬೀಸುವ ಕೆಲಸವನ್ನು ಇಂದು ರೈತ ಮಹಿಳೆಯರೊಂದಿಗೆ ಮಾಡಿರುವುದು ತಂತ್ರಜ್ಞಾನದಲ್ಲೂ ಸಹ ಇದು ಉತ್ತಮವಾದ ಕೆಲಸವಾಗಿದೆ. ಇಂತಹ ಕೃಷಿ ಮೇಳಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ನಡೆಯಬೇಕು. ಸಂಬಂಧಪಟ್ಟ ಇಲಾಖೆಗಳು ಸಹ ರೈತರಿಗೆ ವಸ್ತು ಪ್ರದರ್ಶನದ ಮೂಲಕ ಮಾರ್ಗದರ್ಶನ ನೀಡಿರುವುದು ಸಂತಸದ ವಿಷಯ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷೆ ನಾಜೀಮಾಭಿ, ಉಪಾಧ್ಯಕ್ಷ ವೆಂಕಟಪ್ಪ, ಸದಸ್ಯರಾದ ಜ್ಯೋತಿ, ಶ್ಯಾಮಲ, ಸುಮಾ, ಪ.ಪಂ ಸದಸ್ಯ ಎ.ಡಿ.ಬಲರಾಮಯ್ಯ, ಕೆ.ಪಿ.ಸಿ.ಸಿ ಕಾರ್ಯರ್ಶಿ ದಿನೇಶ್, ಜೆ.ಡಿ.ಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಮಾಜಿ ಜಿಪಂ ಸದಸ್ಯ ಪ್ರಸನ್ನ ಕುಮಾರ್, ಉಪಕೃಷಿ ನಿರ್ದೇಶಕ ಅಶೋಕ್, ಸಹಾಯಕ ಕೃಷಿ ನಿರ್ದೇಶಕ ನಾಗರಾಜು ಎಚ್, ಕೃಷಿ ವಿಜ್ಞಾನಿಗಳಾದ ಡಾ.ಬಿ.ಪಿ.ಶಶಿಕಾಂತ್, ಡಾ.ಹನುಮಂತೇಗೌಡ, ಡಾ. ರಾಜಶೇಖರ್, ಯಂದೊರೆ ರಘು, ಬ್ಯಾಂಕ್ ವ್ಯವಸ್ಥಾಪಕ ಧನಂಜಯ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಹನುಮಂತೇಗೌಡ ಸೇರಿದಂತೆ ಇನ್ನಿತರರು ಇದ್ದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರುಗಳಾದ ಸಿದ್ದಬಸಪ್ಪ, ಗೌರಮ್ಮ, ಜವರೇಗೌಡ, ದೊಡ್ಡಯ್ಯ, ಬಸವರಾಜು ರವರನ್ನು ಗೌರವಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
