ಶ್ರೀ ಕೆಂಪಮ್ಮದೇವಿಯವರ ರಥೋತ್ಸವ

ತಿಪಟೂರು

    ನಗರದ ಗ್ರಾಮ ದೇವತೆಯಾದ ಶ್ರೀ ಕೆಂಪಮ್ಮದೇವಿಯವರ ಜಾತ್ರಾ ಮಹೋತ್ಸವ ಇದೇ ತಿಂಗಳ 30 ರಿಂದ ಮೇ 06ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ.

     30ನೇ ಮಂಗಳವಾರ ಶ್ರೀ ಗಣಪತಿಪೂಜೆ, ಕಂಕಣದಾರಣೆ, ಮದವಣಗಿತ್ತಿ ಉತ್ಸವ, ಮಹಾಮಂಗಳಾರತಿ ನಡೆಯಲಿದೆ. ಬುಧವಾರ ರಥೋತ್ಸವದ ಅಂಗವಾಗಿ ಕಳಶಪೂಜೆ ಧ್ವಜ ಪ್ರತಿಷ್ಟಾಪನೆ, ಮಹಾಮಂಗಳಾರತಿ ನಡೆಯಲಿದೆ. ಗುರುವಾರ ಶ್ರೀ ಚಕ್ರಪೂಜೆ, ಸುಹಾಸಿನಿಯರಿಂದ ಕುಂಕುಮಾರ್ಚನೆ ಅನ್ನಸಂತರ್ಪಣೆ, ಮಹಾಮಂಗಳಾರತಿ ಜರುಗಲಿದೆ. ಅಂದೇ ರಾತ್ರಿ ಉತ್ಸವ ನಡೆಯಲಿದೆ. ಶುಕ್ರವಾರ ಆರತಿಬಾನ, ಮಹಾಮಂಗಳಾರತಿ ಸಂಜೆ ಪೂಜಾ ಕಾರ್ಯಕ್ರಮ ಜರುಗಲಿದೆ.

      ಶನಿವಾರ ರಥೋತ್ಸವದ ಅಂಗವಾಗಿ ಗಂಗಸ್ನಾನ, ಕಲಶ ಪ್ರತಿಷ್ಟಾಪನೆ, ಪೂಜಾ ಮಂಗಳಾರತಿ ಮತ್ತು ಭಾನುವಾರ ಮಧ್ಯಾಹ್ನ 1.00 ಗಂಟೆಗೆ ಶ್ರೀ ಕೆಂಪಮ್ಮದೇವಿಯವರ ರಥೋತ್ಸವ ಹಾಗೂ ಸಂಜೆ 6:30 ರಿಂದ “ಸಿಡಿ ಉತ್ಸವ, ಉಯ್ಯಾಲೋತ್ಸವ, ಮಹಾಮಂಗಳಾರತಿ” ನಡೆಯಲಿದೆ. ಸೋಮವಾರ ಬೆಳ್ಳಿಗೆ “ಹಾಲು ಪಲ್ಲಕ್ಕಿ ಉತ್ಸವ” ನಡೆಯಲ್ಲಿದ್ದು ಸಂಜೆ ಹಾವೇನಹಳ್ಳಿ ಗ್ರಾಮಸ್ಥರಿಂದ ಗಂಗಾಸ್ನಾನ, ಕಂಕಣ ವಿಸರ್ಜನೆ, ಓಕಳಿ ಉತ್ಸವ ಮತ್ತು ರಾತ್ರಿ 10:30 ಗಂಟೆಗೆ ಮಹಾಮಂಗಳಾರತಿಯ ಜೊತೆಗೆ ನಾದಸ್ವರ, ಅರೆವಾದ್ಯ ವೀರಭದ್ರಕುಣಿತ, ವೀರಗಾಸೆ, ಡೊಳ್ಳುಕುಣಿತ, ನಾಸಿಕ್ ಡೋಲ್ ಇತ್ಯಾದಿ ಮನರಂಜನಾ ಕಾರ್ಯಕ್ರಮಗಳೊಂದಿಗೆ ರಾತ್ರಿ 10:30 ಗಂಟೆಗೆ ವಿಶೇಷ ಹಂಸ ದರ್ಬಾರ್ ಹೂವಿನ ಅಲಂಕಾರದೊಂದಿಗೆ ನಗರದ ರಾಜಬೀದಿಗಳಲ್ಲಿ ಉತ್ಸವ ಜರುಗಲಿದೆ.

        ಶಕ್ತಿದೇವತೆಯಾಗಿದ್ದು ಬೇಡಿದ ವರಗಳನ್ನು ಕರುಣಿಸುವ ಕರುಣಾಮಯಿ ಎನಿಸಿಕೊಂಡಿರುವ ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮದೇವಿಯವರ ಮೂಲ ದೇವಸ್ಥಾನಕ್ಕೆ ರಾಜಗೋಪುರ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಈ ಕಾರ್ಯ ಸುಗಮವಾಗಿ ನೆರೆವೇರಲು ಭಕ್ತಾದಿಗಳ ಸಹಕಾರ ಅಗತ್ಯವಾಗಿದೆ. ಭಕ್ತಾದಿಗಳು ಮುಕ್ತ ಹಸ್ತದಿಂದ ಉದಾರವಾಗಿ ಧನಸಹಾಯ ಮಾಡಿ ಸಹಕರಿಸುವ ಮೂಲಕ ಶ್ರೀ ಕೆಂಪಮ್ಮದೇವಿಯವರ ಕೃಪೆಗೆ ಹಾಗೂ ಜಾತ್ರಾ ಮಹೋತ್ಸವಕ್ಕೆ ಪಾತ್ರರಾಗಬೇಕೆಂದು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link