ವಿಶ್ವವ ಮಾನವ ದಿನಾಚರಣೆ

ಹಾವೇರಿ

        ಕುವೆಂಪುರವರು ಕನ್ನಡ ಸಾಹಿತ್ಯವನ್ನು ಮೇರು ಶಿಖಕರಕ್ಕೇರಿಸಿದ ಮಹಾನ್ ಚೇತನ ಹಾಗೂ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಷ್ಟ್ರಕವಿ ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು.

       ಶನಿವಾರ ನಗರದ ಶ್ರೀ ಬಸವೇಶ್ವರ ಬಿ.ಎಡ್.ಕಾಲೇಜಿನಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಮಾನವ ದಿನಾಚರಣೆ (ರಾಷ್ಟ್ರ ಕವಿ ಕುವೆಂಪು ಜನ್ಮದಿನ) ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

         ಕುವೆಂಪು ಅವರು ಸಣ್ಣ ಗ್ರಾಮದಲ್ಲಿ ಜನಿಸಿದರೂ ಸಹ ತಮ್ಮ ಪ್ರಯತ್ನ ಹಾಗೂ ಸಾಧನೆಯಿಂದ ವಿಶ್ವಮಾನವರಾದರು. ಡಾ.ಬಿ.ಆರ್.ಅಂಬೇಡ್ಕರ, ಶಾಸ್ತ್ರೀಜಿ ಹೀಗೆ ಹಲವು ನಾಯಕರೂ ಸಹ ತಮ್ಮ ಪರಿಶ್ರಮದಿಂದ ನಾಡಿಗೆ ಹಾಗೂ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ.

         ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ಸತತ ಪರಿಶ್ರಮ ಹಾಗೂ ಪ್ರಯತ್ನದಿಂದ ಸಾಧನೆ ಮಾಡಬೇಕು. ಸಾಧನೆಗೆ ಚಲಬೇಕು, ಚಲ ಇಲ್ಲದಿದ್ದರೆ ನಿಶಕ್ತಿ ಬರುತ್ತದೆ. ಜೀವನದಲ್ಲಿ ಬದಲಾವಣೆ ಬೇಕು, ಬಡತನದಲ್ಲಿ ಹುಟ್ಟಿದರೂ ಸಾಧನೆ ಮೂಲಕ ಶ್ರೀಮಂತನಾಗಿ ಸಾಯಬೇಕು. ಒಳ್ಳೆಯ ಸಂಸ್ಕಾರವನ್ನು ರೂಢಿಸಿಕೊಂಡು ಸಮಾಜದಲ್ಲಿ ಒಳ್ಳೆಯ ಕೆಲಸಕಾರ್ಯಗಳನ್ನು ಮಾಡಬೇಕು, ಕುವೆಂಪು ಅವರು ರಚಿಸಿದ ಕೃತಿಗಳು ನಮಗೆ ದಾರಿದೀಪವಾಗಿವೆ ಎಂದು ಹೇಳಿದರು.

         ಉಪನ್ಯಾಸಕರಾಗಿ ಭಾಗವಹಿಸಿದ ಸತೀಶ ಕುಲಕರ್ಣಿ ಅವರು ಮಾತನಾಡಿ, ವಿಶ್ವಮಾನವ ಹೇಗೆ ಆಗಬೇಕು ಎಂಬುದನ್ನು ಕುವೆಂಪು ಅವರು ತೋರಿಸಿದ್ದಾರೆ. ಅವರು ನಾಟಕ, ಕವನ ಸಂಕಲನ, ಕಾದಂಬರಿ, ಮಹಾಕಾವ್ಯ, ಲೇಖನಗಳನ್ನು ಸಹ ರಚಿಸಿದ್ದಾರೆ. ಮಲೆನಾಡಿನಲ್ಲಿ ಹುಟ್ಟಿಬೆಳೆದ ಅವರು ತಮ್ಮ ಕಾವ್ಯಗಳಲ್ಲಿ, ಕವಿತೆಗಳಲ್ಲಿ ಮಲೆನಾಡಿನ ಸೊಬಗನ್ನು ಎಳೆಎಳೆಯಾಗಿ ಬಣ್ಣಿಸಿದ್ದಾರೆ ಹಾಗೂ ಪ್ರಕೃತಿಯನ್ನು ಬಹಳ ಪ್ರೀತಿಸುತ್ತಿದ್ದರು ಎಂದರು.

        ಮಹಿಳೆಯರ ಬಗ್ಗೆ ಗೌರವಹೊಂದಿದ್ದ ಅವರು ಮಹಿಳೆಯರ ಕುರಿತು ಅನೇಕ ಕವನಗಳನ್ನು ಸಹ ಬರೆದಿದ್ದಾರೆ. ಅವರು ಬರೆದ ನಾಡಗೀತೆ ನಾಡಿನ ಚಿತ್ರಣ, ಸಂಸ್ಕತಿಯ ದರ್ಶನಮಾಡಿಸುತ್ತದೆ ಹಾಗೂ ಮನಸ್ಸಿಗೆ ಮುದನೀಡುತ್ತದೆ. ಬದುಕಿನಲ್ಲಿ ಎಲ್ಲವೂ ಶ್ರೇಷ್ಠ ಎಂಬ ಭಾವನೆ ಹೊಂದಿದ್ದರು. “ದೃಷ್ಟಿಯಲ್ಲಿ ಸೃಷ್ಟಿ ಇದೆ” ನಿಮ್ಮ ಮನಸ್ಸು ಹೇಗೆ ನೋಡುತ್ತದೆ ಹಾಗೆ ಕಾಣುತ್ತದೆ ಎಂದು ತೋರಿಸಿದ ಕುವೆಂಪುರವರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ನಾಡಿನ ಈ ಶತಮಾನದ ದೊಡ್ಡ ಮಾದರಿಯಾಗಿದ್ದಾರೆ. ಶ್ರೇಷ್ಠ ಕವಿ ಹಾಗೂ ಕನ್ನಡಕ್ಕೆ ಎಷ್ಟು ಆದ್ಯತೆ ನೀಡಬೇಕು ಹಾಗೂ ಬೇರೆ ಭಾಷೆ ಹೇಗೆ ಕಲಿಯಬೇಕು ಎಂಬುದನ್ನು ತಿಳಿಸಿದ ಕುವೆಂಪು ಅವರು ಸ್ಮರಿಸಬೇಕು ಎಂದು ಹೇಳಿದರು.

       ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಬಸನಗೌಡ ಹಾಗೂ ಕುಲಕಣಿ, ಕವಿ ಲಿಂಗರಾಜ ಶೆಟ್ಟೆಪ್ಪನವರ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕತ ಬಡೆಪ್ಪನವರ ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ಅವರು ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link