ಕನ್ನಡ ಕಾವ್ಯ ಕೌಸ್ತುಭ ಪ್ರಶಸ್ತಿಗೆ ಆಯ್ಕೆ

ಹಾನಗಲ್ಲ :

       ಆಡೂರಿನ ಪೊಲೀಸ ಕವಿ ಆನಂದ ದೊಡ್ಡಕುರುಬರ ಬೆಂಗಳೂರಿನ ಎಚ್‍ಎಸ್‍ಆರ್‍ಎ ಪ್ರಕಾಶನ ಹಾಗೂ ರಾಜ್ಯ ಕವಿವೃಕ್ಷ ಬಳಗ ಬೆಂಗಳೂರು ಅವರು ನೀಡುವ ಕನ್ನಡ ಕಾವ್ಯ ಕೌಸ್ತುಭ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ

        ಬೆಂಗಳೂರಿನ ಎಚ್‍ಎಸ್‍ಆರ್‍ಎ ಪ್ರಕಾಶನ ಹಾಗೂ ರಾಜ್ಯ ಕವಿವೃಕ್ಷ ಬಳಗ ಬೆಂಗಳೂರು ಜನೇವರಿ 6 ರಂದು ಸಂಕ್ರಾತಿ ಪ್ರತಿಭಾ ಪುರಸ್ಕಾರ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಯನ್ನು ಆಯೋಜಿನೆ ಮಾಡಿದೆ. ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಕನ್ನಡ ಕಾವ್ಯ ಕೌಸ್ತುಭ ಪ್ರಶಸ್ತಿ ನೀಡುತ್ತಿದ್ದು, ಹಾನಗಲ್ಲ ತಾಲೂಕಿನ ಹಿರೇಕಣಗಿ ಗ್ರಾಮದ ಯುವಕ, ಆಡೂರು ಪೊಲೀಸ್ ಠಾಣೆಯಲ್ಲಿ ಪೊಲೀಸ ಆಗಿರುವ ಕವಿ ಆನಂದ ಅವರಿಗೆ ಪ್ರಶಸ್ತಿ ನೀಡಲಿದ್ದಾರೆ.

        ಈಗಾಗಲೇ “ಕಾವ್ಯ ಸ್ಪೂರ್ತಿ” ಕವನ ಸಂಕಲನ ಬಂದಿತ್ತು. “ಬರಡಾದೀತೆನ್ನ ಮನ” ಎಂಬೆರಡು ಕವನ ಸಂಕಲನಗಳನ್ನು ಬಿಡುಗಡೆಗೊಳಿಸಿದ್ದಾರೆ. ಕಾರ್ಕಳದ ಜೇಸಿಆಯ್ “ಯುವ ಜೇಸಿ ಪ್ರಶಸ್ತಿ” ನೀಡಿ ಗೌರವಿಸಿದೆ. ಕಾರ್ಕಳ ತಾಲೂಕು ಅಜೇಕಾರಿನ ಪೊಲೀಸ್ ಠಾಣೆಯಲ್ಲಿ ತಮ್ಮ ಸೇವೆಯ ಜೊತೆಗೆ ಸಾಹಿತ್ಯ ಸೇವೆಯಲ್ಲಿರುವುದನ್ನು ಕಂಡು ಭರವಸೆಯ ಕವಿಗೆ ಜೆಸಿ ಸಪ್ತಾಹದ ಸಂದರ್ಭದಲ್ಲಿ “ಗ್ರ್ಯಾಂಡ್ ಪ್ರಿಕ್ಸ – 2015” ರ “ಯುವ ಸಾಧಕ” ಪ್ರಶಸ್ತಿ ದೊರೆತಿದೆ. ಬೆಳಕು ಶೈಕ್ಷಣಿಕ, ಸಾಹಿತ್ಯಕ, ಸಾಂಸ್ಕತಿಕ ಟ್ರಸ್ಟ ಶಿಗ್ಗಾಂವಿಯಲ್ಲಿ ಹಾವೇರಿ, ಧಾರವಾಡ, ಗದಗ ತ್ರಿವಳಿ ಜಿಲ್ಲಾ ಸಮ್ಮೇಳನ – 2018 ಸಂದರ್ಭದಲ್ಲಿ “ಬೆಳಕು ಕನ್ನಡದ ಕಣ್ಮಣಿ” ಪ್ರಶಸ್ತಿ ನೀಡಿ ಗೌರವಿಸಿದೆ.

         ಧಾರವಾಡದ ರೇವಣಸಿದ್ಧೇಶ್ವರ ಗುರುಪೀಠದಿಂದ ಕೊಡ ಮಾಡುವ “ಕನಕ ಪ್ರಶಸ್ತಿ”ಗೆ ಭಾಜನರಾಗಿದ್ದಾರೆ. ಶಿಗ್ಗಾಂವಿಯ ಡಿಎಸ್‍ಪಿ ಎಲ್.ವಾಯ್.ಶಿರಕೋಳ ಅವರು ಆನಂದ ಅವರ ಸಾಹಿತ್ಯ ಸೇವೆ ಮೆಚ್ಚಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗೌರವಿಸಿದ್ದಾರೆ. ಸದಾ ಪೊಲೀಸ ಸೇವೆಯಲ್ಲಿರುವ ನಿಷ್ಠೆ, ಆರೋಪಿ ಪತ್ತೆ ಕಾರ್ಯದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿರುವುದಕ್ಕೆ ಹಾವೇರಿ ಜಿಲ್ಲಾ ಪೊಲೀಸ ಅಧೀಕ್ಷಕ ಕೆ.ಪರಶುರಾಮ ಅವರು ಅಭಿನಂದಿಸಿ ನಗದು ಬಹುಮಾನ ನೀಡಿದ್ದಾರೆ.

         ಪೊಲೀಸ ಸೇವೆಯಲ್ಲಿದ್ದು ಕನ್ನಡದ ಸೃಜನಶೀಲ ಬರಹರಾರರಾಗಿರುವ ಆನಂದ ದೊಡ್ಡಕುರುಬರ ಅವರ ಸಾಹಿತ್ಯ ಸೇವೆಗೆ ಸಂದ ಗೌರವಗಳು ಇವಾಗಿವೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link