ಮಾನವೀಯತೆ ಮೆರೆದ ಬಿಎಂಟಿಸಿ ಬಸ್ಸ್ ಚಾಲಕ ….!!

ಬೆಂಗಳೂರು

       ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಪೊಲೀಸ್ ಪೇದೆಯನ್ನು ಸಕಾಲಕ್ಕೆ ಅಂಬುಲೆನ್ಸ್ ಇಲ್ಲದೆ ಬಿಎಂಟಿಸಿ ಬಸ್‍ನಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹ್ಯಾಡಾಳು ಬಳಿ ನಡೆದಿದೆ.
ಗಾಯಗೊಂಡಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ(ಕೆಎಸ್‍ಐಎಸ್‍ಎಫ್)ಪೇದೆ ಸಿದ್ದರಾಜು ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

        ಕೆಲಸ ಮುಗಿಸಿಕೊಂಡು ಹ್ಯಾಡಾಳು ಬಳಿಯ ಮನೆಗೆ ಸಿದ್ದರಾಜು ಬೈಕ್‍ನಲ್ಲಿ ಬರುತ್ತಿದ್ದಾಗ ಮಾರ್ಗ ಮಧ್ಯೆ ಹಿಂತಿರುಗಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ ಅಪಘಾತವಾಗಿ ಒಂದೂವರೆ ಗಂಟೆಯಾದರೂ ಸ್ಥಳಕ್ಕೆ 108 ಅಂಬ್ಯುಲೆನ್ಸ್ ಬರಲಿಲ್ಲ.
ರಕ್ತದ ಮಡುವಿನಲ್ಲಿ ರಸ್ತೆಯಲ್ಲಿನರಳಾಡುತ್ತಿದ್ದರೂ ಗಾಯಾಳು ನೆರವಿಗೆ ಸ್ಥಳೀಯರು ಬರದಿರುವುದನ್ನು ನೋಡಿದ ಬಿಎಂಟಿಸಿ ಚಾಲಕ ಗಂಗಾಧರ್ ಹಾಗೂ ನಿರ್ವಾಹಕ ಶ್ರೀನಿವಾಸ್ ಅವರು ಮಾನವೀಯತೆ ಮೆರೆದು ಬಸ್‍ನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅಪಘಾತವೆಸಗಿದ ವಾಹನ ಪರಾರಿಯಾಗಿದ್ದು ಶೋಧ ನಡೆಸಲಾಗಿದೆ ಚಾಲಕ ಗಂಗಾಧರ್ ಹಾಗೂ ನಿರ್ವಾಹಕ ಶ್ರೀನಿವಾಸ್ ಅವರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link