ಕೊರಟಗೆರೆ:-
ರಾಜ್ಯದ ಪ್ರತೀಷ್ಟಿತ ಕ್ಷೇತ್ರದಲ್ಲೊಂದಾದ ಕೊರಟಗೆರೆ ತಾಲ್ಲೂಕಿನಲ್ಲಿ ಅಧಿಕಾರಿಗಳ ನಿರ್ಲಕ್ಷ ಹಾಗೂ ಗೈರು ಹಾಜರಿಂದ ನಾಡಹಬ್ಬ ಆಚರಣೆ ಕಳೆ ಗುಂದಲು ಕಾರಣವಾಗಿದೆ, ಇದೇ ಪ್ರವೃತ್ತಿಅಧಿಕಾರಿ ವರ್ಗದಿಂದ ಮುಂದುವರೆದರೆ ಮುಂದಿನ ದಿನಗಳಲ್ಲಿ ನಿರ್ದಾಕ್ಷೀಣ್ಯ ಕ್ರಮಜರುಗಿಸಲು ಡಿಸಿಎಂ ಪರಮೇಶ್ವರ್ರವರಿಗೆ ಶಿಫಾರಸ್ಸು ಮಾಡಲಾಗುವುದುಎಂದುತಾಲ್ಲೂಕ್ ಪಂಚಾಯ್ತಿ ಅದ್ಯಕ್ಷ ಕೆಂಪರಾಮಯ್ಯ ತಾಲ್ಲೂಕ್ ಮಟ್ಟದ ಅಧಿಕಾರಿಗಳ ವಿರುದ್ದ ಹರಿಹಾಯ್ದರು.
ಅವರು ಪಟ್ಟಣದ ಪದವಿಪೂರ್ವಕಾಲೇಜು ಮೈದಾನದಲ್ಲಿತಾಲೂಕು ಆಡಳಿತದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ 63ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಅಧಿಕಾರಿಗಳ ಸಾಮರಸ್ಯ ಕೊರತೆಯಿಂದ ನಾಡಹಬ್ಬಗಳಿಗೆ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಇಡೀ ಕಾರ್ಯಕ್ರಮ ಕಳೆಗೊಂಡಂತಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ವಿಧ್ಯಾರ್ಥಿಗಳು ಬಿಸಿಲಿನಲ್ಲಿ ಅಧಿಕಾರಿಗಳು ಬರುವಿಕೆಗೆ ಕಾಯಬೇಕಾಗಿದೆ.ಗಣ್ಯ ವ್ಯಕ್ತಿಗಳಿಗೆ ನೀಡಿದ ಗೌರವವನ್ನು ಕಾರ್ಯಕ್ರಮಕ್ಕೆ ಬರುವಂತಹ ವಿದ್ಯಾರ್ಥಿಗಳಿಗೆ ನೀಡಬೇಕು.ಮುಂದಿನ ವರ್ಷ ಇದೇ ರೀತಿಯಲ್ಲಿ ಆದರೇ ಡಿಸಿಎಂ ಗಮನಕ್ಕೆ ತಂದು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಭಾರತ ದೇಶದಲ್ಲಿಯೇ 8 ಜ್ಞಾನ ಪೀಠ ಪ್ರಶಸ್ತಿ ಪಡೆದಿರುವ ಕನ್ನಡ ಭಾಷೆಯನ್ನು ರಾಜ್ಯದಲ್ಲಿ ಉಳಿಸಿ ಬೆಳೆಸಬೇಕಾದ ಕರ್ತವ್ಯ ನಮ್ಮೇಲ್ಲರ ಮೇಲಿದೆ . ಸರಕಾರಿ ಶಾಲೆಗಳನ್ನು ಮುಚ್ಚುವಂತಹ ಪ್ರಯತ್ನ ಮಾಡದೇಇನ್ನಷ್ಟು ಶಾಲೆಗಳನ್ನು ಅಭಿವೃದ್ದಿ ಪಡೆಸಬೇಕು . ಯುವ ಸಮೂಹ ಕನ್ನಡ ನೆಲ, ಜಲ, ಸಂಸ್ಕತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದುಕರೆ ನೀಡಿದರು.
ತಹಶೀಲ್ದಾರ್ ನಾಗರಾಜು ಧ್ವಜಾರೋಹಣ ನೇರವೆರಿಸಿ ಮಾತನಾಡಿ ಹೋರಾಟಗಾರರ ಪರಿಶ್ರಮದಿಂದ ಕನ್ನಡನಾಡು 1956ರ ನಂ.1ರಂದು ಒಂದುಗೊಡಿದ್ದ ಕನ್ನಡ ಭಾಷೆ ಇಂದು ಅನ್ಯ ಭಾಷಿಗರ ವಲಸೆಯಿಂದ ಮತ್ತೆ ಕನ್ನಡ ಕಣ್ಮರೆ ಆಗುತ್ತೀದೆ. ನಾಡಿನ ಹಿರಿಮೆಯನ್ನು ಹೆಚ್ಚಿಸುವಂತಹ ನಾಡಿನ ಕಲೆ, ಸಾಹಿತ್ಯ, ಸಂಸ್ಕತಿ ಮತ್ತು ಪರಂಪರೆಯ ಮೂಲಕ ಕನ್ನಡದ ಘನತೆಯನ್ನು ಹೆಚ್ಚಿಸುವ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗ ಮಾಡಬೇಕು ಎಂದು ತಿಳಿಸಿದರು.
ನಾಡಗೀತೆ ಹಾಡು ವಾಗ ಕರೆಂಟ್ ಕಟ್:-
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಪ್ರಾರಂಭ ಆಗುವ ಮುನ್ನ ವಿದ್ಯಾರ್ಥಿಗಳು ನಾಡಗೀತೆ ಮತ್ತು ರಾಷ್ಟ್ರಗೀತೆ ಆಡುವ ವೇಳೆ ವಿದ್ಯುತ್ ಸಂಪರ್ಕಕಡಿತವಾಯಿತು. ಪ್ರತಿವರ್ಷದಂತೆ ಈ ವರ್ಷವು ವಿದ್ಯುತ್ಕೈಕೊಟ್ಟ ಹಿನ್ನಲೆವಿದ್ಯಾರ್ಥಿಗಳು ನಾಡಗೀತೆಯನ್ನು ಹಾಗೇಯೇ ಹಾಡಿ ಮುಗಿಸಿದರು .ನಂತರ ಜನರೇಟರ್ ಸಹಾಯದಿಂದ ಕಾರ್ಯಕ್ರಮ ಮುಗಿಯುವ ವರೇಗೆ ವಿದ್ಯುತ್ ವ್ಯವಸ್ಥೆ ಮಾಡಲಾಯಿತು.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗೈರು ಹಾಜರಿ:-
ಕಾರ್ಯಕ್ರಮ ಆಹ್ವಾನ ಪತ್ರಿಕೆ ನೀಡಿದ್ದರೂ ಸಹ ತಾಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿ ನಿರ್ಲಕ್ಷ ತೋರಿದ್ದಾರೆ. ಕೊರಟಗೆರೆ ತಾಲೂಕಿನ ಬಹುತೇಕ ಜಿಪಂ ಮತ್ತು ತಾಪಂ ಸದಸ್ಯರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಮೂಲಕ ತಾಲೂಕು ಆಡಳಿತ ಮತ್ತು ಜನಪ್ರತಿನಿಧಿಗಳು ನಾಡಹಬ್ಬಕ್ಕೆ ಅಗೌರವ ತೋರಿಸಿದ್ದಾರೆ ಎಂದು ಕೆಲವು ಸಾರ್ವಜನಿಕರು ಕಾರ್ಯಕ್ರಮದ ಸಂದರ್ಭದಲ್ಲಿ ಅಸಮಧಾನ ವ್ಯಕ್ತಪಡಿಸುತ್ತಿದ್ದದ್ದು ಕಂಡು ಬಂತು.
ಕನ್ನಡ ಭಾವುಟ ಹಾರಿಸದ ಕಛೇರಿಗಳು :-
ಪಟ್ಟಣದ ಪ್ರತೀಷ್ಟಿತ ಕಛೇರಿಗಳು ಎನಿಸಿಕೊಂಡಿರುವಂತಹ ಅಬಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಉಪನೋಂದಣ ಇಲಾಖೆ (ಸಬ್ರೆಜಿಸ್ಟ್ರರ್) ಸೇರಿದಂತೆ ಮೀನುಗಾರಿಕೆ ಇಲಾಖೆಯಲ್ಲಿ ಕನ್ನಡ ಭಾವುಟ ಹಾರಿಸದೇ ನಾಡಹಬ್ಬ ಕನ್ನಡರಾಜ್ಯೋತ್ಸವಕ್ಕೆ ಅವಮಾನ ಎಸಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮುಂದೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ದಆಕ್ರೋಶ ವ್ಯಕ್ತಪಡಿಸಿ ಈ ಇಲಾಖಾ ಅಧಿಕಾರಿಗಳ ವಿರುದ್ದ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮಕ್ಕೂ ಮುನ್ನಾ ಶಾಲಾ ಮಕ್ಕಳಿಂದ ಕನ್ನಡ ನಾಡು ನುಡಿಗೆ ಸಂಬಂಧಿಸಿದ ವಿವಿಧ ಕಲಾ ತಂಡಗಳೊಂದಿಗೆ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಕನ್ನಡಧ್ವಜದೊಂದಿಗೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಪ್ರಧಾನರಸ್ತೆಯಲ್ಲಿ ಮೆರವಣಿಗೆ ಮೂಲಕ ಕಾರ್ಯಕ್ರಮದ ವೇದಿಕೆಗೆ ತಾಯಿ ಭುವನೇಶ್ವರಿ ಭಾವಚಿತ್ರವನ್ನುಕರೆತರಲಾಯಿತು. ವೇದಿಕೆ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮ ಜರುಗಿದವು.
ಕಾರ್ಯಕ್ರಮದಲ್ಲಿ ಪಪಂ ಸದಸ್ಯ ಬಲರಾಮಯ್ಯ, ಓಬಳರಾಜು, ನಟರಾಜು, ಸಿಪಿಐ ಮುನಿರಾಜು, ಇಓ ಶಿವಪ್ರಕಾಶ್,ಜಿಪಂ ಎಇಇ ರಂಗಪ್ಪ, ಬಿಇಓ ಚಂದ್ರಶೇಖರ್, ಅಕ್ಷರದಾಸೋಹದರಘು, ಕನ್ನಡ ಸಾಹಿತ್ಯ ಪರಿಷತಅಧ್ಯಕ್ಷ ಮಲ್ಲಿಕಾರ್ಜುನ್, ಮುಖಂಡರಾದ ಮೈಲಾರಪ್ಪ, ಗೋವಿಂದರಾಜು, ಸೇರಿದಂತೆಇತರರುಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
