ಸಿದ್ಧರಾಮರಾಮೇಶ್ವರರ ತತ್ವಗಳು ಸಮಾಜದ ಎಲ್ಲರಿಗೂ ಆದರ್ಶ -ಪಿ.ಎಸ್.ಕುಂಬಾರ

ಹಾವೇರಿ

        ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರರ ತತ್ವಾದರ್ಶಗಳು ಸಮಾಜದ ಎಲ್ಲ ಸಮುದಾಯಕ್ಕೂ ಆದರ್ಶವಾಗಿವೆ ಎಂದು ಹಾವೇರಿ ಉಪ ತಹಶೀಲ್ದಾರ ಪಿ.ಎಸ್.ಕುಂಬಾರ ಅವರು ಹೇಳಿದರು.

       ಕನ್ನಡ ಮತ್ತು ಸಂಸ್ಕತಿ ಇಲಾಖೆ, ಹಾವೇರಿ ತಾಲೂಕು ಆಡಳಿತದ ಸಹಯೋಗದಲ್ಲಿ ಸೋಮವಾರ ನಗರದ ನಾಗೇಂದ್ರನಮಟ್ಟಿ ಬಡಾವಣೆಯ ಸಿದ್ಧರಾಮೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಿದ ಶ್ರೀ ಸಿದ್ಧರಾಮೇಶ್ವರ ಅವರ 847ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

        ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸದಾನಂದ ದೊಡ್ಡಮನಿ ಅವರು ಮಾತನಾಡಿ, ಸಮಾಜದ ಸುಧಾರಣೆಗಾಗಿ ದ್ವೇಷವನ್ನು ತೊರೆದು ಪ್ರೀತಿಯಿಂದ ಒಗ್ಗೂಡಬೇಕು. ಶರಣರ ಹಾದಿಯಲ್ಲಿ ಸಮಾಜವನ್ನು ಮುನ್ನೆಡಸಲು ನಾವೆಲ್ಲ ಬದ್ಧರಾಗಬೇಕು ಎಂದು ಕರೆ ನೀಡಿದರು.

        ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಕೆರೆಮತ್ತಿಹಳ್ಳಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಡಾ.ವಿರೇಶ ಪೂಜಾರ ಅವರು ಮಾತನಾಡಿ, ಕಾಯಕಯೋಗಿ ಸಿದ್ಧರಾಮೇಶ್ವರರು ಬಸವಾದಿ ಶರಣರ ಹಾದಿಯಲ್ಲಿ ನಡೆದು ಸಮ ಸಮಾಜದ ಸುಧಾರಣೆಗೆ ಶ್ರಮಿಸಿದವರು. ಇವರ ಜೀವನ ಹಾಗೂ ಆದರ್ಶಗಳು ಎಲ್ಲ ಸಮಾಜಕ್ಕೂ ಸ್ಪೂರ್ತಿದಾಯಕವಾಗಿದೆ ಎಂದು ಬಣ್ಣಿಸಿದರು.

        ಕಾರ್ಯಕ್ರಮದಲ್ಲಿ ವೆಂಕಟೇಶ ಬಿಜಾಪುರ, ಸತೀಶ ಹಾವೇರಿ, ಹನುಮಂತಪ್ಪ ದೇವಗಿರಿ, ಜಗದೀಶ ಹಾಗೂ ಶಾಂತಪ್ಪ ಇತರರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೂ ಮುನ್ನ ಸಿದ್ಧರಾಮೇಶ್ವರ ಭಾವಚಿತ್ರವನ್ನು ದೇವಸ್ಥಾನದಿಂದ ಕಾರ್ಯಕ್ರಮದ ಸಭಾಂಗಣವರೆಗೆ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ ಶಿವಕುಮಾರ, ನಗರಸಭೆ ಸದಸ್ಯ ಐ.ಯು.ಪಠಾಣ ಇತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link