ತಿಪಟೂರು:
ಕೊರೊನಾ ವೈರಸ್ ದಿನೇದಿನೇ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತಿರುವಾಗ ಇದು ಹಬ್ಬಗಳ ಸಂದರ್ಭದಲ್ಲಿ ಇನ್ನು ಹೆಚ್ಚುವ ಭಯದಿಂದ ಪೌರಾಯುಕ್ತರು ವಿಶೇಷ ತಂಡಗಳನ್ನು ಕಟ್ಟಿ ಕೊರೊನಾ ನಿಯಂತ್ರಿಸಲು ಹರಸಾಹಸಪಡುವ ಸಂದರ್ಭದಲ್ಲೇ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿರುವುದು ಕೊರೊನಾ ವಾರಿಯರ್ಗೆ ರಕ್ಷಣೆಯೇ ಇಲ್ಲದಂತಾಗಿದೆ.
ಆಯುದ ಪೂಜೆ ಮತ್ತು ವಿಜಯದಶಮಿಯ ಹಂಗವಾಗಿ ನಗರದ ತುಂಬೆಲ್ಲಾ ಬೂದಗುಂಬಳ ಕಾಯಿ, ಮಾವಿನಸೊಪ್ಪು, ಬಾಳೆಕಂದು ಹಾಗೂ ಹಣ್ಣುಗಳನ್ನು ಮಾರಾಟಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ವರ್ತಕರುಗಳು ರಸ್ತೆಬದಿಯಲ್ಲಿ ಹಾಕುತ್ತಾರೆ. ಇವರನ್ನು ನಿಯಂತ್ರಿಸಲು ನಗರಸಭೆಯ ವಿಶೇಷ ತಂಡಗಳನ್ನು ರಚಿಸಿದ್ದು ಇಂತಹ ಒಂದು ತಂಡವು ನೆನ್ನೆ ಸಂಜೆ 5.30ರ ವೇಳೆಯಲ್ಲಿ ಎ.ಪಿ.ಎಂ.ಸಿ ತರಕಾರಿ ಮಾರುಕಟ್ಟೆಯ ಹೊರಬಾಗದಲ್ಲಿ ಬೂದುಗುಂಬಳಕಾಯಿ ಮಾರಾಟಗಾರನು ಮಾಸ್ಕ್ ಧರಿಸದೇ ವ್ಯಾಪಾರಿಗಳು ಕುಂಬಳಕಾಯಿ ವ್ಯಾಪಾರ ಮಾಡುತ್ತಿದನ್ನು ಪ್ರಶ್ನಿಸಿದ ನಗರಸಭೆಯ ವ್ಯವಸ್ಥಾಪಕ ವೆಂಕಟೇಶ್ ಮೇಲೆ ನಗರದ ಕೋಟೆಯ ವಾಸಿಯಾದ ರಘು ಬಿನ್ ರಾಜಣ್ಣಹಾಗೂ ಸದಾಶಿವಪ್ಪ ನಗರ ವಾಸಿಯಾದ ತರಕಾರಿ ಗಿರಿ ಬಿನ್ ಶಿವಣ್ಣ ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಈ ಸಂಬಂಧ ನಗರ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಹಾಗೂ ಪ್ರಾಣಬೆದರಿಕೆ ಹಾಕಿದ ಬಗ್ಗೆ ಠಾಣಾ ಮೊಕದ್ದಮೆ ಸಂಖ್ಯೆ : 131/2020 ಕಲಂ : 353, 323, 504, 506 ಆರ್.ಡಬ್ಯೂ 34ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
