ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ ..!!

ಬೆಂಗಳೂರು

       ಕೇರಳ, ವಿಶಾಖಪಟ್ಟಣದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಂಜಿನಿರ್ ವಿದ್ಯಾರ್ಥಿ ಸೇರಿ ಮೂವರು ಪದವೀಧರರ ಗ್ಯಾಂಗ್‍ನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು ಗ್ಯಾಂಗ್‍ನಲ್ಲಿದ್ದ ಇನ್ನಿಬ್ಬರ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ.

       ಆವಲಹಳ್ಳಿಯ ಶ್ಯಾಂದಾಸ್ (25), ಹರೀಶ್ ಕುಮಾರ್ (24) ಹಾಗೂ ಜಿಬಿನ್‍ಜಾನ್ (21) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರ ಗ್ಯಾಂಗ್‍ನಲ್ಲಿದ್ದು ಪರಾರಿಯಾಗಿರುವ ಮತ್ತಿಬ್ಬರ ಬಂಧನಕ್ಕೆ ವಿಶೇಷ ತಂಡ ರಚಿಸಿ ಗ್ಯಾಂಗ್‍ನಿಂದ 4 ಲಕ್ಷ 6 ಸಾವಿರ ಮೌಲ್ಯದ 23 ಕೆಜಿ 300 ಗ್ರಾಂ ಗಾಂಜಾ, 2 ತೂಕದ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

       ಬಿಎ ಪದವಿ ಸಾಹಿತ್ಯ ವಿದ್ಯಾರ್ಥಿಯಾಗಿದ್ದ ಶ್ಯಾಂದಾಸ್ ಹಾಗೂ ಸಿವಿಲ್ ಡಿಪ್ಲೋಮೊ ಪದವೀಧರನಾಗಿದ್ದ ಹರೀಶ್ ಕುಮಾರ್ ಹಾಗೂ ಅಂತಿಮ ವರ್ಷದ ಬಿಟೆಕ್ ಇಂಜಿನಿಯರಿಂಗ್ ಓದುತ್ತಿದ್ದ ಜಿಬಿನ್‍ಜಾನ್ ಮೂವರು ಕೇರಳ ಮೂಲದವರಾಗಿದ್ದು, ಕಳೆದ 3 ತಿಂಗಳಿನಿಂದ ನಗರಕ್ಕೆ ಬಂದು ಆವಲಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು.

      ಕೇರಳ, ವಿಶಾಖಪಟ್ಟಣದಿಂದ ಗಾಂಜಾವನ್ನು ತಂದು ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದರು. ಪ್ಲಾಸ್ಟಿಕ್ ಚೀಲದಲ್ಲಿ ಯಾರಿಗೂ ಗೊತ್ತಾಗದಂತೆ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳು, ತಮ್ಮ ಬಳಿಯಲ್ಲೇ ತೂಕದ ಯಂತ್ರಗಳನ್ನಿಟ್ಟುಕೊಂಡು ಅದರಿಂದ ಗಿರಾಕಿಗಳಿಗೆ ತೂಕ ಮಾಡಿ ಮಾರಾಟ ಮಾಡುತ್ತಿದ್ದರು.

      ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳನ್ನು ಕೇಂದ್ರೀಕರಿಸಿಕೊಂಡು ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದು, ಇವರ ಗ್ಯಾಂಗ್‍ನಲ್ಲಿದ್ದ ಇನ್ನೂ ಇಬ್ಬರು ಪರಾರಿಯಾಗಿದ್ದು, ಅವರ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.ಆರೋಪಿಗಳನ್ನು ಸುದ್ದಗುಂಟೆ ಪೊಲೀಸ್ ಇನ್ಸ್‍ಪೆಕ್ಟರ್ ಮೊಹ್ಮದ್ ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap