ಒಂದೇ ದಿನ 328 ಜನರಿಗೆ ಪಾಸಿಟಿವ್: 6 ಸೋಂಕಿತರು ಸಾವು

ತುಮಕೂರು

     ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ ದಾಖಲೆಯ 328 ಕೊರೊನಾ ಸೋಂಕು ಪ್ರಕರಣ ವರದಿಯಾಗಿವೆ. ಅಲ್ಲದೆ, ಸೋಂಕಿತರ ಸಂಖ್ಯೆ 9 ಸಾವಿರ ದಾಟಿದೆ, ಇದರೊಂದಿಗೆ ಸೋಂಕಿತರ ಸಂಖ್ಯೆ 9215ಕ್ಕೆ ಏರಿದೆ. ಜೊತೆಗೆ ಸೋಂಕು ತಗುಲಿದ್ದ ಆರು ಜನ ಜನ ಮೃತಪಟ್ಟಿದ್ದು, ಸೋಂಕಿನಿಂದ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 200ಕ್ಕೆ ಏರಿಕೆಯಾಗಿದೆ.

    ತುಮಕೂರು ನಗರದ ಉಪ್ಪಾರಹಳ್ಳಿ ಬಡಾವಣೆಯ 53 ವರ್ಷದ ಗಂಡಸು, ತುಮಕೂರು ತಾಲ್ಲೂಕು ಹೊನ್ನುಡಿಕೆಯ 62 ವರ್ಷದ ಗಂಡಸು, ಪಾವಗಡದ ರೈನ್‍ಗೇಜ್ ಬಡಾವಣೆಯ 72 ವರ್ಷದ ಪುರುಷ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅಲ್ಲದೆ, ಕೊರೊನಾ ಸೋಂಕು ಖಚಿತವಾಗಿದ್ದ ಮೂವರು ಅನ್ಯ ಕಾರಣದಿಂದ ಅಸುನೀಗಿದ್ದಾರೆ. ಗುಬ್ಬಿ ತಾಲ್ಲೂಕು ವಡ್ಡರಹಳ್ಳಿಯ 70 ವರ್ಷದ ಗಂಡಸು, ತುಮಕೂರು ತಾಲ್ಲೂಕು ಸೋರೆಕುಂಟೆ ಗ್ರಾಮದ 42 ವರ್ಷದ ಪುರುಷ ಹಾಗೂ ಪಾವಗಡದ ಶ್ರೀನಿವಾಸ ಬಡಾವಣೆಯ 72 ವರ್ಷದ ಗಂಡಸು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. ಇವರ ಗಂಟಲು ದ್ರವ ಪರೀಕ್ಷೆ ಮಾಡಿದ್ದಾಗ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಹೇಳಿದ್ದಾರೆ.

     ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಭಾನುವಾರ 176 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 6877 ಮಂದಿ ಗುಣಮುಖರಾದಂತಾಗಿದೆ. ಆದರೆ, ಜಿಲ್ಲೆಯಲ್ಲಿ 2 117ಸೋಂಕು ಸಕ್ರಿಯ ಪ್ರಕರಣಗಳಿವೆ. ಭಾನುವಾರ ವರದಿಯಾದ 328 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 170 ಜನರಿಗೆ ಸೋಂಕು ಖಚಿತವಾಗಿದೆ. ಪಾವಗಡ ತಾಲ್ಲೂಕಿನ 27, ಮಧುಗಿರಿ ತಾಲ್ಲೂಕಿನ 22, ,ಶಿರಾ ತಾಲ್ಲೂಕಿನಲ್ಲಿ 21, ಗುಬ್ಬಿ ತಾಲ್ಲೂಕಿನಲ್ಲಿ 21, ತುರುವೇಕೆರೆ ತಾಲ್ಲೂಕಿನಲ್ಲಿ 20, ಕುಣಿಗಲ್ ತಾಲ್ಲೂಕಿನ 16, ತಿಪಟೂರು ತಾಲ್ಲೂಕಿನ 14, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 13, ಕೊರಟಗೆರೆ ತಾಲ್ಲೂಕಿನ 4 ಜನರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಸೋಂಕಿತರಲ್ಲಿ 215 ಪುರುಷರು, 113 ಮಹಿಳೆಯರು, ಇಬ್ಬರು ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ 48 ಜನರಿದ್ದಾರೆ.
ಇದೂವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 9215 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 3414, ಪಾವಗಡ ತಾ. 864, ತಿಪಟೂರು ತಾ. 844, ಕುಣಿಗಲ್ ತಾ. 661, ಶಿರಾ ತಾ. 655, ಗುಬ್ಬಿ ತಾ. 638, ಮಧುಗಿರಿ ತಾ. 616, ಚಿಕ್ಕನಾಯಕನಹಳ್ಳಿ ತಾ. 560, ತುರುವೇಕೆರೆ ತಾ. 527, ಕೊರಟಗೆರೆ ತಾ. 436 ಪ್ರಕರಣ ವರದಿಯಾಗಿವೆ.

    ಈವರೆಗೂ ಕೊರೊನಾ ಸೋಂಕು ತಗುಲಿದ 9215 ಜನರಲ್ಲಿ 200 ಜನ ಮೃತಪಟ್ಟಿದ್ದಾರೆ. ತುಮಕೂರು ತಾಲ್ಲೂಕಿನ 122, ಕುಣಿಗಲ್ ತಾಲ್ಲೂಕಿನಲ್ಲಿ 14, ಪಾವಗಡ ತಾಲ್ಲೂಕಿನ 13, ಗುಬ್ಬಿ ತಾಲ್ಲೂಕಿನಲ್ಲಿ 11, ತಿಪಟೂರು ತಾಲ್ಲೂಕಿನ 9, ಶಿರಾ ತಾಲ್ಲೂಕಿನ 8, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 7, ಕೊರಟಗೆರೆ ತಾಲ್ಲೂಕಿನಲ್ಲಿ 6, ತುರುವೇಕೆರೆ ತಾಲ್ಲೂಕು 5, ಮಧುಗಿರಿ ತಾಲ್ಲೂಕಿನಲ್ಲಿ 5 ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ.

    ಸೋಂಕಿತರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಇದೂವರೆಗೆ 9215 ಮಂದಿಗೆ ಸೋಂಕು ತಗುಲಿದೆ, ಇವರಲ್ಲಿ 6877 ಮಂದಿ ಗುಣಮುಖರಾಗಿದ್ದಾರೆ..

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link