ಶಿವರಾತ್ರಿ ಆಚರಣೆಗೆ ದೇವನಗರಿಯಲ್ಲಿ ಭರದ ಸಿದ್ಧತೆ

ದಾವಣಗೆರೆ:

         ಮಹಾಶಿವರಾತ್ರಿ ಆಚರಣೆಗೆ ಬೇಕಾದ ಪದಾರ್ಥಗಳನ್ನು ಭಾನುವಾರವೇ ಖರೀದಿಸಿದ ಜನತೆ ಶಿವರಾತ್ರಿ ಆಚರಣೆ ಹಾಗೂ ಜಾಗರಣೆ ನಡೆಸಲು ಭರದ ಸಿದ್ಧತೆ ನಡೆಸುತ್ತಿದ್ದ ದೃಶ್ಯ ನಗರದಲ್ಲಿ ಕಂಡು ಬಂತು

        ಸಾಮಾನ್ಯವಾಗಿ ಶಿವರಾತ್ರಿ ಎಂದಾಕ್ಷಣ ಕಣ್ಣೆದುರಿಗೆ ಬುರವುದೇ ಜಾಗರಣೆ, ಶಿವನಾಮ ಸ್ಮರಣೆ ಹಾಗೂ ಉಪವಾಸ. ಉಪವಾಸ ಆಚರಣೆ ಮಾಡಿ ಜಾಗರಣೆ ಮಾಡುವ ಭಕ್ತರು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ, ಜಾಗರಣೆಯ ವೇಳೆಯಲ್ಲಿ ಕಲ್ಲಂಗಡಿ, ಕರಬೂಜಾ ಸೇರಿದಂತೆ ಥರಹೇವಾರಿ ಹಣ್ಣುಗಳನ್ನು ಸೇವಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಾದ ಪಿಬಿ ರಸ್ತೆ, ಹದಡಿ ರಸ್ತೆ, ಹಳೇ ಬಸ್ ನಿಲ್ದಾಣ, ರಾಜನಹಳ್ಳಿ ಹನುಮಂತಪ್ಪನ ಚೌಟ್ರಿ ಸೇರಿದಂತೆ ಹಲವೆಡೆ ಕಲ್ಲಂಗಡಿ, ಕರಬೂಜಾಗಳ ರಾಶಿಗಳು ಕಂಡುಬಂದವು. ಜಾಗರಣೆಗೆ ಬೇಕಾಗಿರುವ ಹಣ್ಣು ಹಂಪಲ, ತಿಂಡಿ ತಿನಿಸು ಬೇಕಾದ ಪದಾರ್ಥಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

         ನಗರದ ಪ್ರವಾಸಿ ಮಂದಿರ ರಸ್ತೆ, ಕೆಇಬಿ ವೃತ್ತ, ಹಳೇಪೇಟೆ, ಕಾಯಿಪೇಟೆ. ಮಾರ್ಕೆಟ್, ಅರುಣ ಟಾಕೀಸ್ ವೃತ್ತ, ಗುಂಡಿ ವೃತ್ತ, ರಾಜನಹಳ್ಳಿ ಛತ್ರದ ಮುಂಭಾಗ, ಶಾಮನೂರು ರಸ್ತೆ, ಹದಡಿ ರಸ್ತೆ, ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿದೆಡೆ ವ್ಯಾಪಾರಸ್ಥರು ಹಬ್ಬದ ಹಿನ್ನೆಲೆಯಲ್ಲಿ ಲೋಡುಗಟ್ಟಲೇ ಕಲ್ಲಂಗಡಿ ಹಣ್ಣು ಸಂಗ್ರಹ ಮಾಡಿಕೊಂಡು ಭರ್ಜರಿ ವ್ಯಾಪಾರ ನಡೆಸಲು ಮುಂದಾಗಿದ್ದಾರೆ.

            ಶಿವರಾತ್ರಿಯಂದು ಶಿವನಾಮ ಜಪ ಮಾಡಿದರೆ, ಜನ್ಮ-ಜನ್ಮಗಳ ಮೋಕ್ಷ ಸಿಗುತ್ತದೆ ಎಂಬ ಕಾರಣಕ್ಕೆ ಹಿಂದೂ ಬಾಂಧವರು ಹಬ್ಬದಂದು ದಿನವಿಡೀ ಶಿವನಾಮ ಸ್ಮರಣೆಯಲ್ಲಿ ಮಗ್ನರಾಗುರುತ್ತಾರೆಈ ಹಬ್ಬವನ್ನು ಆಚರಿಸುವಾಗ ಶಿವಾರ್ಚನೆ, ಉಪವಾಸ, ಜಾಗರಣೆ ಈ ಮೂರು ಮುಖ್ಯವಾದವು ನಿಯಮಗಳನ್ನು ಅನುಸರಿಸಿದವನು ಶಿವನ ಅನುಗ್ರಹ ಪಡೆಯಬಹುದು ಎಂಬುದು ಭಕ್ತರ ನಂಬಿಕೆ. ಶಿವರಾತ್ರಿಯಂದು ಶಿವಲಿಂಗಕ್ಕೆ ಬಲ್ವಪತ್ರೆ ಸಮರ್ಪಿಸುವುದು, ಹಾಲು-ಜೇನಿನ, ಸಕ್ಕರೆ-ಹಾಲಿನ ಅಭಿಷೇಕ ದೇವನಗರಿಯ ಬಹುತೇಕ ದೇವಸ್ಥಾನಗಳಲ್ಲಿ ನಡೆಯಲಿದೆ.

         ಶಿವರಾತ್ರಿ ಹಿನ್ನೆಲೆಯಲ್ಲಿ ನಗರದ ಪಾತಾಳ ಲಿಂಗೇಶ್ವರ ದೇವಸ್ಥಾನ, ಲಿಂಗೇಶ್ವರ ದೇವಸ್ಥಾನ. ವಿದ್ಯಾನಗರದ ಶ್ರೀಈಶ್ವರ ದೇವಾಲಯ, ವಿನೋಬ ನಗರದ ಶಂಭುಲಿಂಗೇಶ್ವರ, ಶ್ರೀಮಾರ್ಕಂಡೇಶ್ವರಸ್ವಾಮಿ, ಮಹಾರಾಜಪೇಟೆಯಲ್ಲಿರುವ ವಿಠಲಮಂದಿರ, ಕೆಟಿಜೆ ನಗರದ ಶ್ರೀಮಲ್ಲಿಕಾರ್ಜುನ ದೇವಸ್ಥಾನ, ಹಳೇ ಬೇತೂರು ರಸ್ತೆಯಲ್ಲಿರುವ ಶ್ರೀಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿರುವ ದೇವರ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗುತ್ತಿದ್ದು, ಈ ಎಲ್ಲ ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ ನಡೆಯಲಿದೆ.

       ಮಹಾಶಿವರಾತ್ರಿಯ ಅಂಗವಾಗಿ ನಗರದ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಸಂಘ, ಸಂಸ್ಥೆಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

ಶಂಕರ ಸೇವಾ ಸಮಿತಿ :

         ನಿಜಲಿಂಗಪ್ಪ ಬಡಾವಣೆಯಲ್ಲಿನ ಶ್ರೀ ಶಂಕರ ಸೇವಾ ಸಮಿತಿ ವತಿಯಿಂದ ಶ್ರೀ ಗಣಪತಿ, ಶ್ರೀ ಶಾರದಾಂಬಾ, ಶ್ರೀ ಚಂದ್ರಮೌಳೀಶ್ವರ ಮತ್ತು ಶ್ರೀ ಶಂಕರಾಚಾರ್ಯ ದೇವಸ್ಥಾನಗಳ ಆಶ್ರಯದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ಸಂಜೆ 6.30ರಿಂದ ಹಮ್ಮಿಕೊಳ್ಳಲಾಗಿದೆ. ರುದ್ರಾಭಿಷೇಕ ಮತ್ತಿತರರೇ ಪೂಜಾ ವಿಧಿವಿಧಾನಗಳು ನಡೆಯಲಿವೆ.

ಭಕ್ತಿ ಸಂಗೀತೋತ್ಸವ 

        ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿವಗೋಷ್ಠಿ ಸಮಿತಿ ಆಶ್ರಯದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ದತ್ತಿ ಉಪನ್ಯಾಸದ ಅಡಿಯಲ್ಲಿ ಕನ್ನಡ ನಾಡು-ನುಡಿ ಬಿಂಬಿಸುವ ಭಕ್ತಿಪ್ರಧಾನ ಸಂಗಿತೋತ್ಸವ ಕಾರ್ಯಕ್ರಮವನ್ನು ಮಾ.4ರ ಸಂಜೆ 7ಗಂಟೆಗೆ ನಗರದ ತರಳಬಾಳು ಬಡಾವಣೆಯ ಶ್ರೀ ಮರುಳಸಿದ್ಧೇಶ್ವರ ದೇವಸ್ಥಾನದ ಶ್ರೀ ಶಿವಕುಮಾರಸ್ವಾಮಿ ಮಹಾಮಂಟಪದ ಆವರಣದಲ್ಲಿ ಏರ್ಪಡಿಸಲಾಗಿದೆ. ಶಿವಗೋಷ್ಠಿ ಸಮಿತಿಯ ಅಧ್ಯಕ್ಷ ಎಂ.ಬಿ. ಸೋಮಶೇಖರಗೌಡ್ರು ಉದ್ಘಾಟಿಸುವರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ  ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಕೋಗಿಲೆ ರಾಜ್ಯಪ್ರಶಸ್ತಿ ಪುರ¸ ಸಂಗೀತಾ ರಾಘವೇಂದ್ರ, ಗಾಯಕರಾದ ಓ.ಎಸ್.ಖುದ್ದೂಸ್, ಜಾನಪದ ಕಲಾವಿದ ಸಿ.ಹೆಚ್. ಉಮೇಶ್ ಚಿನ್ನಸಮುದ್ರ ಸಂಗೀತೋತ್ಸವದಲ್ಲಿ ಭಾಗವಹಿಸುವರು.

     ಸಾಂಸ್ಕೃತಿಕ ಕಾರ್ಯಕ್ರಮ 

         ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘ ವತಿಯಿಂದ ಎಸ್‍ಕೆಪಿ ರಸ್ತೆಯಲ್ಲಿನ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆಗಳು ನಡೆಯಲಿದೆ. ಸಂಜೆ 7ಗಂಟೆಯಿಂದ 8ಗಂಟೆವರೆಗೆ ಫಳಾರದ ವ್ಯವಸ್ಥೆ. ರಾತ್ರಿ 10.30ರಿಂದ ಪುಟ್ಟರಾಜ ಗವಾಯಿಗಳ ಆಶ್ರಮದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link