ಅಣಕು ಸಂಸತ್ತಿನಲ್ಲಿ ಪ್ರಜ್ವಲಿಸಿದ ಭಾರತದ ಬಾವಿ ಪ್ರಜೆಗಳು

ತಿಪಟೂರು:

         ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಪ್ರತಿಪಕ್ಷ. ಸರ್ಕಾರದ ವೈಫಲ್ಯಕ್ಕೆ ಸಿಡಿಮಿಡಿಗೊಂಡ ಸಂಸದರು, ಎಲ್ಲದಕ್ಕೂ ಸಮಜಾಯಿಷಿ ನೀಡಿದ ಸಚಿವರು. ಆರೋಪ ಪ್ರತ್ಯಾರೋಪದ ಕಾಲಹರಣದ ಸನ್ನಿವೇಶ ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಣಕು ಯುವ ಸಂಸತ್ತಿನಲ್ಲಿ ನಡೆಯಿತು.

        ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಕೌಟಲ್ಯ ವೇದಿಕೆ ವತಿಯಿಂದ ಕಾಲೇಜಿನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಇಂದು ರಾಜ್ಯಶಾಸ್ತ್ರದ ವಿದ್ಯಾರ್ಥಿಗಳಿಂದ ನಡೆದ ಯುವ ಅಣಕು ಸಂಸತ್ತು ಮುಖ್ಯಾಂಶಗಳು.ಸರಕು ಮತ್ತು ಸೇವೆಗಳ ತೆರಿಗೆಯಲ್ಲಿ ಸರ್ಕಾರವು ರಿಯಾಯಿತಿಯನ್ನು ಪರಿಗಣೆ ಮಾಡಿದೆಯೇ? ಸಾರ್ವಜನಿಕ ಸ್ಥಳಗಳು, ಶಾಲಾ-ಕಾಲೇಜು ಮತ್ತು ಇತರ ಸ್ಥಳಗಳಲ್ಲಿ ಮಹಿಳೆಯ ಭದ್ರತೆಗಾಗಿ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಮಾರುಕಟ್ಟೆಯಲ್ಲಿ ಸಿಗದೆ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

        ಈ ಹಿನ್ನೆಯಲ್ಲಿ ರೈತರನ್ನು ಸಂಕಷ್ಟದಿಂದ ಹೋರ ತರಲು ಬೆಂಬಲ ಬೆಲೆ ನೀಡಲು ಕ್ರಮ ಕೈಗೊಂಡಿದೆಯೇ? ಉನ್ನತ ಶಿಕ್ಷಣದಲ್ಲಿ ಉದ್ಯೋಗ ಮಟ್ಟ ಹೆಚ್ಚಿಸಲು. ಕೌಶಲ್ಯ ಆಧಾರಿತ ಶಿಕ್ಷಣ ನೀಡಲು ಯಾವ ಕ್ರಮ ಕೈಗೊಂಡಿದೇ?ವಿದ್ಯಾರ್ಥಿಗಳು ಸದನದಲ್ಲಿ ಮೆಜು ಗುದ್ದಿ ಮಾತನಾಡುತ್ತಿದ್ದರೆ, ಜನನಾಯಕರನ್ನೆ ಮೀರಿಸುವಂತ್ತಿತ್ತು ಮಕ್ಕಳು ಮಾತಿನ ವರಸೆ. ಆಂಗೀಕಾಭಿನಯ ಜನಪ್ರತಿನಿಧಿಗಳನ್ನು ನಾಚಿಸುವಂತಿತ್ತು.

          ಕಬ್ಬು ಬೆಳೆಗಾರರು ಸೂಕ್ತ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕಾರ್ಖನೆಗಳಿಂದ ಬಾಕಿ ವೇತನ ನೀಡಿಲ್ಲ ಬೆಂಬಲ ಬೆಲೆಯನ್ನು ಸರ್ಕಾರ ಶ್ರೀಫ್ರವಾಗಿ ನೀಡಬೇಕು. ಸೂಕ್ತ ಸಮಯದಲ್ಲಿ ರಸಗೊಬ್ಬರ ಪೂರೈಕೆ ಆಗುತ್ತಿಲ್ಲ ಎಂಬ ಅನೇಕ ಪ್ರಶ್ನೆಗಳ ಮೂಲಕ ವಿದ್ಯಾರ್ಥಿಗಳು ಬೆಳಕು ಚೆಲಿದ್ದರು. ಜತೆಗೆ ಮಸುದೆ ಮಂಡನೆ, ಚರ್ಚೆ, ಸಮರ್ಥನೆ, ಅಂಗೀಕಾರಗಳ ಚಿತ್ರಣಗಳು ಎಲ್ಲರನ್ನು ಬೆರಗುಗೊಳಿಸುವಂತೆ ಮೂಡಿಬಂತು. ಸಭಾಧ್ಯಕ್ಷರಾಗಿದ್ದ ಸುಮಿತ್ರ ವಿ.ಸಿ. ಮತ್ತು ಪ್ರಧಾನ ಮಂತ್ರಿ ರೂಪ.ಎಂ. ಅವರ ಮಾತುಗಳು ನೈಜತೆಯನ್ನು ಮೀರಿಸುವಂತೆ ಇತ್ತು.

         ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಎಂ.ರಾಜಣ್ಣ ಅವರು ನಿಜವಾದ ಸಂಸತ್ತು ಸಭೆಯ ಚಿತ್ರಣವನ್ನು ವಿದ್ಯಾರ್ಥಿಗಳು ರೂಪಿಸಿದ್ದಾರೆ ಎಂದು ವಿದ್ಯಾರ್ಥಿಗಳನ್ನು ಶ್ಲಾಘಿಸಿದ ಅವರು ಇಂತಹ ಪ್ರಚಲಿತ ವಿಷಯಗಳ ಕುರಿತು ಹೆಚ್ಚು ಚರ್ಚೆ ನಡೆದಾಗ ವಿದ್ಯಾರ್ಥಿಗಳ ಒಳ್ಳೆಯ ನಾಗರಿಕರಾಗುತ್ತಾರೆ ಎಂದು ತಿಳಿಸಿದರು.

          ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಈರಯ್ಯ ಅವರ ನಿರ್ದೇಶನದಲ್ಲಿ ನಡೆದ ಯು ಸಂಸತ್ತಿನ ಸಭೆಯಲಿ ಗೃಹ ಮತ್ತು ಹಣಕಾಸು ಸಚಿವರಾಗಿ ಧನಂಜಯ. ಜೆ, ವಿರೋಧ ಪಕ್ಷದ ನಾಯಕರಾಗಿ ದರ್ಶನ್. ಹೆಚ್.ಇ ಸೇರಿದಂತೆ ಗಾಯಿತ್ರಿ.ಹೆಚ್.ವಿ, ನಿಶ್ಚಿತ.ಹೆಚ್.ಎಸ್, ರಾಧಾಮಣಿ.ಎಂ.ಈ, ಕಿರಣ್.ಹೆಚ್.ಡಿ ಮತ್ತಿತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಐ.ಕ್ಯೂ.ಎ.ಸಿ ಸಂಚಾಲಕರಾದ ಪ್ರೊ.ಎಸ್.ಆರ್.ನಾಗಭೂಷಣ್, ನ್ಯಾಕ್ ಸಂಚಾಲಕರಾದ ಡಾ.ಕೆ.ಬಿ.ಸರಸ್ವತಿ, ಡಾ.ಡಿ.ಆರ್.ಹೊನ್ನಾಂಜಿನಯ್ಯ, ಪ್ರೊ. ಪಿ.ಅರಣ್ ಕುಮಾರ್, ಪ್ರೊ.ಎ.ಎಸ್.ಜಗದೀಶ್, ಪ್ರೊ.ನರಸಿಂಹರಾಜು, ಪ್ರೊ.ಲಕ್ಷೀರಂಗಯ್ಯ, ಡಾ.ಮಮತ ಅವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link