ಅಂಧತ್ವ ನಿಯಂತ್ರಣ ಕಾರ್ಯಕ್ರಮ

ಸವಣೂರ

        ಸಮಾಜದದಲ್ಲಿ ಶಿಕ್ಷಣ,ಆರೋಗ್ಯ ಸರ್ವಕಾಲಿಕ ಉಚಿತವಾಗಿ ಸಿಗುವಂತಾಗಿ, ದೇಶದ ಅಭಿವೃದ್ಧಿಗೆ ಬಡವರ ಸೇವೆಗಾಗಿ ಯುವ ಜನಾಂಗ ಮುಂದಾಗಬೇಕು ಎಂದು ಡಾ, ಎಪಿಜೆ ಅಬ್ದುಲ್ ಕಲಾಂ ಪ್ರಾಕೃತಿಕ ಚಿಕಿತ್ಸೆ ಹಾಗೂ ಯೋಗ ಕೇಂದ್ರದ ಮುಖ್ಯಸ್ಥರು ಹಾಗೂ ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್‍ಸಾಬ ಬುಡಂದಿ ಹೇಳಿದರು.

        ನಗರದ ತಾಲೂಕ ಆಸ್ಪತ್ರೆಯಲ್ಲಿ ತಾಲೂಕ ವೈಧ್ಯಾಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ,ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ. ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ.ಅಮ್ಮಾ ಸಂಸ್ಥೆ(ರಿ)ಹಿರೇಮುಗದೂರ,ಕರ್ನಾಟಕ ರಾಜ್ಯ ಭೂ ಸಂಪತ್ತು ಸಂರಕ್ಷಣ ಸಮಿತಿ ಸವಣೂರ.ಡಾ, ಎಪಿಜೆ ಅಬ್ದುಲ್ ಕಲಾಂ ಪ್ರಾಕೃತಿಕ ಚಿಕಿತ್ಸೆ ಹಾಗೂ ಯೋಗ ಕೇಂದ್ರ ಹಾವೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ನೇತ್ರದಾನ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

        ಇಂದು ಆಧುನಿಕ ಯುಗದಲ್ಲಿ ಆರೋಗ್ಯವೇ ಭಾಗ್ಯ ಎಂಬಂತೆ ಎಲ್ಲ ಸಂಪತ್ತಿಗಿಂದ ಮನುಷ್ಯನ ಆರೋಗ್ಯ ಬಹಳ ಮುಖ್ಯ.ತಂತ್ರಜ್ಞಾನದಿಂದ ರೋಗಗಳ ಹರುಡುವುಕೆ ಹೆಚ್ಚಾಗಿದ್ದು ಬಡವರ,ಹಿಂದುಳಿದವರು ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಉಚಿತ ಆರೋಗ್ಯದ ಸಲಹೆ ಚಿಕಿತ್ಸೆ ನೀಡಲು ಸ್ವಲ್ಪ ಸಮಯವಾದರೂ ಮಿಸಲಿಡುವ ಮೂಲಕ ಸಾರ್ಧಕ ಬದುಕಿನೆಡೆಗೆ ಸಾಗಬೇಕು ಎಂದರು.

         ಕರ್ನಾಟಕ ರಾಜ್ಯ ಭೂ ಸಂಪತ್ತು ಸಂರಕ್ಷಣ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಮಲ್ಲಾಡದ ಹಾಗೂ ರೈತ ಸಂಘ ಮುಖಂಡ ಫಕ್ಕೀರೇಶ ಕಾಳಿ ಮಾತನಾಡಿ ಸಂಘಟನೆ ಅಂದರೆ ಕೇವಲ ಹೋರಾಟ ಮಾಡುವುದು ಅಲ್ಲ. ನಮ್ಮ ಸಂಘಟನೆಯ ಕುಟುಂಬದವರ ಆಶೋತ್ತರಗಳ ಇಡೇರಿಸುವ ಜವಾಬ್ದಾರಿಯು ಇದೆ. ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ನೇತ್ರದಾನ ಜಾಗೃತಿ ಶಿಬಿರ ಆಯೋಜನೆ ಮಾಡುವ ಮೂಲಕ ಸಮಾಜದ ಜನರ ಸೇವೆ ಮಾಡಲು ಅವಕಾಶ ನೀಡಿದಂತಾಗಿದೆ,ಹೀಗೆ ಇಂತಹ ಸಮಾಜಮುಖಿ ಕೆಲಸಗಳನ್ನು ಮುಂದುವರಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಶ್ರೀ ಹಡಪದ ಅಪ್ಪಣ್ಣ ವಿವಿದ್ಯೋದ್ದೇಶಗಳ ಸಂಘದ ಅಧ್ಯಕ್ಷ ಶಿದ್ಲಿಂಗಪ್ಪ ಅಜ್ಜಣ್ಣನವರ.

         ಶಿವಮೊಗ್ಗದ ಶಂಕರ ಆಸ್ಪತ್ರೆಯ ಡಾ.ಅಮರಾವತ, ಶಿಬಿರದ ಸಂಚಾಲಕ ತ್ಯಾಗರಾಜ. ಶಂಕರ ನಾಯ್ಕ . ಪ್ರದೀಪ . ಸವಿತಾ . ಶೋಭಾ . ಪಲ್ಲವಿ.ಶಿಲ್ಪ. ಅಮ್ಮಾ ಸಂಸ್ಥೆ(ರಿ)ಯ ಪದಾಧಿಕಾರಿಗಳು ಇದ್ದರು.ಈ ಶಿಬಿರದಲ್ಲಿ 220 ಜನರು ಭಾಗಿಯಾಗಿ 122 ಹಿರಿಯರು ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link