ಜಗಳೂರು:
ಅಂಧ ಮಕ್ಕಳ ಹಸಿವು, ಸೂರು ನೀಡಲು ಗಾಯನ ಕಾರ್ಯಕ್ರಮಗಳಿಂದ ಹಣಸಂಗ್ರಹಣೆ ಮಾಡುತ್ತಿದ್ದೇವೆ ಎಂದು ತುಮಕೂರಿನ ಅರುಣೋದಯ ಅಂಧ ವಿಕಲಚೇತನರ ಅಧ್ಯಕ್ಷ ಸುರೇಶ್ ಅವರು ಹೇಳಿದರು.
ಪಟ್ಟಣದ ಮಹಾತ್ಮ ಗಾಂಧಿ ವೃತ್ತ,ಹಾಗೂ ಹಳೇ ಬಸ್ ನಿಲ್ದಾಣ ಸೇರಿದಂತೆ ವಿವಿಧ ಪ್ರಮುಖ ಬೀದಿಗಳಲ್ಲಿ ಅರುಣೋದಯ ಸಂಸ್ಥೆಯವತಿಯಿಂದ ನಡೆಸಿದ ಗಾಯನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ನಮ್ಮ ತಂಡ ಕಳೆದ 2ವರ್ಷದಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಿ ಹಲವಾರು ಜಾನಪದ,ಸಿನಿಮಾ,ಮತ್ತು ಭಕ್ತಿಗೀತೆಗಳನ್ನು ಹಾಡುವ ಮೂಲಕ ಸಾರ್ವಜನಿಕರನ್ನು ಮನರಂಜಿಸುವ ಮೂಲಕ ನಮ್ಮ ತಂಡ ದೇಣಿಗೆ ಡಬ್ಬಿಗಳಲ್ಲಿ ಹಣ ಸಂಗ್ರಹಿಸಿ ಸ್ಥಳಿಯವಾಗಿ ವಸತಿ,ಊಟ,ವಾದ್ಯಗಳ ರಿಪೇರಿ,ಮತ್ತು ಇತರೆ ಖರ್ಚುವೆಚ್ಚಗಳನ್ನು ಭರಿಸಿಕೊಂಡು ಉಳಿದ ಹಣವನ್ನು ಸಂಸ್ಥೆಯಲ್ಲಿ ಅಬ್ಯಾಸ ಮಾಡುತ್ತಿರುವ ಅಂಧ ಮಕ್ಕಳ ಏಳ್ಗಿಗೆಗಾಗಿ ಬಳಕೆ ಮಾಡಲಾಗುತ್ತದೆ ಎಂದರು.
ಒಟ್ಟು ತಂಡದಲ್ಲಿ 7ಕ್ಕೂ ಹೆಚ್ಚು ಸದಸ್ಯರುಗಳನ್ನೊಳಗೊಂಡಿದ್ದು ನಮ್ಮ ಸಂಸ್ಥೆಯಲ್ಲಿ 20 ಕ್ಕೂ ಹೆಚ್ಚು ಮಕ್ಕಳು ವಾಸವಾಗಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸುರೇಶ್ ಸುಹೇಲ್ ಸೇರಿದಂತೆ ಇದ್ದರು.ಅಂಧ ವಿಕಲಚೇತನರ ಅಧ್ಯಕ್ಷ ಸುರೇಶ್ ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
