ಬರಗೂರು
ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗದಲ್ಲಿ ಆಂಧ್ರ ಪೋಲೀಸರು ಚೆಕ್ ಪೋಸ್ಟ್ ನಿರ್ಮಾಣಕ್ಕೆ ಮುಂದಾಗಿದ್ದಾಗ, ಕರ್ನಾಟಕದ ಪಟ್ಟನಾಯಕನ ಹಳ್ಳಿ ಪೋಲೀಸರು ಅದನ್ನು ತಡೆದ ಬಗ್ಗೆ ವರದಿಯಾಗಿದೆ. ಸಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಲಕ್ಕನಹಳ್ಳಿ ಗೇಟ್ನ ಗಡಿಭಾಗದ ರಾಜ್ಯಕ್ಕೆ ಸೇರಿದ ನೆಲದಲ್ಲಿ, ಮಡಕಶಿರಾ ತಾಲ್ಲೂಕಿನ ಅಮರಾಪುರ ಪೋಲೀಸರು ಗಡಿ ರಸ್ತೆಗೆ ಆರ್ಚ್ ಮತ್ತು ಚೆಕ್ ಪೋಸ್ಟ್ ಕೊಠಡಿ ನಿರ್ಮಾಣ ಮಾಡಿ, ರಸ್ತೆಯಲ್ಲಿ ಸಂಚರಿಸುವಂತಹ ವಾಹನಗಳನ್ನು ತಪಾಸಣೆ ಮಾಡಲು ಮುಂದಾಗಿದ್ದರು.
ರಾಜ್ಯದ ರಸ್ತೆಯಲ್ಲಿ ಆಂಧ್ರಪ್ರದೇಶದ ಪೋಲೀಸರು ತಪಾಸಣೆ ಮಾಡಲು ಹೇಗೆ ಸಾಧ್ಯ ಎಂದು ಸಾರ್ವಜನಿಕರು ಸ್ಥಳೀಯ ಪೋಲೀಸರಿಗೆ ಮಾಹಿತಿ ನೀಡಿದ್ದರು. ಆಗÀ ಪಟ್ಟನಾಯಕನಹಳ್ಳಿ ಪಿಎಸ್ಐ ನಿರ್ಮಲ ಸ್ಥಳ ಪರಿಶೀಲನೆ ಮಾಡಿ ಆಂಧ್ರ ಪೋಲೀಸ್ ಮತ್ತು ಕಂದಾಯ ಅಧಿಕಾರಿಗಳಿಗೆ ಇದು ರಾಜ್ಯಕ್ಕೆ ಸೇರಿದ ರಸ್ತೆ. ಇಲ್ಲಿ ನೀವು ತಪಾಸಣೆ ಮಾಡಲು ಅಧಿಕಾರ ಇಲ್ಲ ಎಂದು ತಿಳಿಸಿ, ಪೋಲೀಸರನ್ನು ತೆರವು ಗೊಳಿಸಿದ್ದಾರೆ. ಪೋಲೀಸರ ಕಾರ್ಯದಕ್ಷತೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಾರ್ವಜನಿಕರು, ನಮ್ಮ ನೆಲದಲ್ಲಿ ಆಂಧ್ರ ಪೋಲೀಸರು ಅಕ್ರಮವಾಗಿ ಚೆಕ್ ಪೋಸ್ಟ್ ನಿರ್ಮಾಣ ಮಾಡುವುದನ್ನು ತಪ್ಪಿಸಿದ್ದಕ್ಕಾಗಿ ಜಿಲ್ಲಾ ಪೋಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
