ಬೆಂಗಳೂರು
ಕಂಪನಿಯಲ್ಲಿನ ಮೋಸವನ್ನು ಹೊರಗೆರಳೆದ ಮ್ಯಾನೇಜರ್ ಬೈಕ್ನಲ್ಲಿ ಹೋಗುವಾಗ ಹಿಂಬಾಲಿಸಿ ಸಹೋದ್ಯೋಗಿಗಳೇ ಹಲ್ಲೆಗೆ ಯತ್ನಿಸಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗರುಡಾಚಾರ್ಪಾಳ್ಯದಲ್ಲಿ ನಡೆದಿದೆ.
ಗರುಡಾಚಾರ್ ಪಾಳ್ಯದ ರಾಜ್ಮನೆ ಇಂಡಸ್ಟ್ರಿಸ್ನಲ್ಲಿ ಪರ್ಚೇಸಿಂಗ್ ಮ್ಯಾನೇಜರ್ ಅಶ್ವಿನ್ ಹಲ್ಲೆ ಸಹೋದ್ಯೋಗಿಗಳ ಹಲ್ಲೆಯತ್ನದಿಂದ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಂಪನಿಯಲ್ಲಿ ಕೆಲವರಿಂದ ಆಗುತ್ತಿದ್ದ ಮೋಸವನ್ನು ಪತ್ತೆ ಮಾಡಿ ಆಡಳಿತ ಮಂಡಳಿಯ ಗಮನಕ್ಕೆ ತರಲು ಮುಂದಾಗಿದ್ದರು.
ಇದನ್ನು ಹೀಗೆ ಬಿಟ್ಟರೆ ತಮಗೆ ಮುಂದೆ ತೊಂದರೆ ಎಂದು ಭಾವಿಸಿದ ಸಹೋದ್ಯೋಗಿಗಳು ಅಶ್ವಿನ್ಗೆ ಬುದ್ದಿ ಕಲಿಸಲು ಸಂಚು ರೂಪಿಸಿ ಕಳೆದ ಡಿ. 25ರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬೈಕ್ನಲ್ಲಿ ಹೋಗುತ್ತಿದ್ದ ಅಶ್ವಿನ್ನನ್ನು ಹಿಂಬಾಲಿಸಿ ಹಲ್ಲೆ ನಡೆಸಲು ಮುಂದಾಗಿದ್ದಾರೆ.ಬೈಕ್ ನಿಲ್ಲಿಸದೇ ಅದೇಗೊ ಅಶ್ವಿನ್ ಬಚಾವಾಗಿದ್ದರು. ಬಳಿಕ ಈ ಕುರಿತು ಕಂಪನಿ ಆಡಳಿತ ಮಂಡಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಅಶ್ವಿನ್ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂರು ದಿನಗಳ ಕಾಲ ಅಶ್ವಿನ್ ಮೇಲೆ ಹಲ್ಲೆ ನಡೆದಿದ್ದ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದಾಗ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಲು ಯತ್ನಿಸಿರುವುದು ಆತನ ಸಹೋದ್ಯೋಗಿಗಳಾಗಿದ್ದ ನಾಗರಾಜು, ಶ್ರೀಕಾಂತ್, ಪ್ರಕಾಶ್ ಎನ್ನುವುದು ಪತ್ತೆಯಾಗಿದ್ದು ಪರಾರಿಯಾಗಿರುವ ಅವರ ಪತ್ತೆಗಾಗಿ ಶೋಧ ನಡೆಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
