ಬದುಕಿನ ನೆಮ್ಮದಿಗೆ ಆಶ್ರಮಗಳೇ ಬುನಾದಿ : ಚಿದಾನಂದ ಭಾರತಿ ಸ್ವಾಮಿಜಿ

ಪ.ನಾ.ಹಳ್ಳಿ

     ಸಿದ್ಧಾರೂಡರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಶುದ್ದ ಮನಸ್ಸಿನಿಂದ ಸಾಮಾಜಿಕ ಸೇವಾ ಕೈಂಕರ್ಯಗಳನ್ನು ಮಾಡುವ ಅಗತ್ಯವಿದೆ. ಬದುಕಿನ ನೆಮ್ಮದಿಗಾಗಿ ಆಶ್ರಮಗಳು ಭದ್ರ ಬುನಾದಿ ಹಾಕುತ್ತವೆ. ಅಧ್ಯಾತ್ಮಿಕತೆ ಮನುಷ್ಯನಿಗೆ ಸಹನೆ ಮತ್ತು ತಾಳ್ಮೆಯ ಪಾಠ ಕಲಿಸುತ್ತದೆ ಎಂದು ಶ್ರೀಸಿದ್ದರೂಡ ಸೇವಾ ಆಶ್ರಮದ ಚಿದಾನಂದ ಭಾರತಿ ಸ್ವಾಮಿಜಿ ಹೇಳಿದರು.

     ಶಿರಾ ತಾಲೂಕಿನ ಹುಲುಕುಂಟೆ ಹೋಬಳಿಯ ಪೂಜಾರ ಮುದ್ದನಹಳ್ಳಿ ಶ್ರೀಸಿದ್ಧಾರೂಡ ಸೇವಾ ಆಶ್ರಮದಲ್ಲಿ ಭಾನುವಾರ ನಡೆದ ಶುದ್ದ ಕುಡಿಯುವ ಕುಡಿಯುವ ನೀರಿನ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

     ಇತರರ ಕಷ್ಟಕ್ಕೆ ಸ್ಪಂಧಿಸುವ, ಸಮಾಜವನ್ನು ಉತ್ತಮ ಮಾರ್ಗದೆಡೆ ಮುನ್ನಡೆಸುವ ಶಾಲೆ, ಆಶ್ರಮ, ಅಸ್ಪತ್ರೆ, ದೇವರ ಸನ್ನೀಧಾನಗಳಿಗೆ ಶುದ್ದ ಜೀವ ಜಲ ನೀಡುವ ಕಾರ್ಯವೇ ನಿಜಾವಾದ ಸಮಾಜ ಸೇವೆ ಎಂದರು.

      ಖ್ಯಾತ ವೈದ್ಯ ಸಮಾಜ ಸೇವಕ ಡಾ.ಸಿ.ಎಂ.ರಾಜೇಶ್‍ಗೌಡ ಮಾತನಾಡಿ ಮಳೆ ಬಂದಂತಹ ಸಂಧರ್ಭದಲ್ಲಿ ನೀರನ್ನು ತಮ್ಮ ಜಮೀನಿನಲ್ಲಿ ಇಂಗಿಸುವಂತ ಕೆಲಸವನ್ನು ಪ್ರತಿ ರೈತರು ಮಾಡಬೇಕು ಇದರಿಂದ ಅಂತರ್ಜಲ ಹೆಚ್ಚಳವಾಗಿ ನೀರಿನ ಬವಣೆ ನೀಗುತ್ತದೆ. ನೀರು ಮನುಷ್ಯ ಆರೋಗ್ಯ ಕಾಪಾಡುವ ಜೀವಜಲ ನೀರಿನ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಹೊಣೆ.

      ಶಿರಾ ತಾಲೂಕಿನ ಸರ್ಕಾರಿ ಶಾಲೆಗಳ ಮಕ್ಕಳ ಆರೋಗ್ಯದ ದೃಷ್ಠಿಯಿಂದ ತಾಲೂಕಿನ ಪ್ರತಿಯೊಂದು ಸರ್ಕಾರಿ ಪ್ರೌಢಶಾಲೆಗೆ ಶುದ್ದ ಕುಡಿಯುವ ನೀರಿನ ಘಟಕ ನೀಡುವ ಕಾರ್ಯ ಯೋಜನೆಯನ್ನು ರೂಪಿಸಲಾಗಿದ್ದು ಶೀಘ್ರವೇ ನಮ್ಮ ದುಡಿಮೆಯ ಸ್ವಂತ ಹಣದಲ್ಲಿ ಘಟಕಗಳನ್ನು ಸ್ಥಾಪನೆ ಮಾಡುತ್ತೆನೆ ಎಂದರು.

      ಮುಖಂಡರಾದ ರಂಗನಾಥಪ್ಪ, ನಾಗಣ್ಣ, ಕೆರೆಯಾಗಲಹಳ್ಳಿ ಶಿವಣ್ಣ, ವಸಂತಕುಮಾರ್, ಜಗದೀಶ್, ರಾಮಣ್ಣ, ನಾಗೇಂದ್ರ, ಬಿ.ಹೆಚ್.ಸುರೇಶ್, ಕರೇಕ್ಯಾತನಹಳ್ಳಿ ಜಗದೀಶ್, ಮಹೇಂದ್ರ, ತಾವರೆಕರೆ ದೇವರಾಜು, ಮುದ್ದರಾಜು ಸೇರಿದಂತೆ ಹಲವಾರು ಭಕ್ತರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link