ದಾವಣಗೆರೆ:
ತಾಲೂಕಿನ ಎಲೆಬೇತೂರು ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ ನವದೆಹಲಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಹಯೋಗದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನ ನಡೆಯಿತು.
ಶಿವಮೊಗ್ಗದ ಶ್ರೀ ಆನಂದೇಶ್ವರಿ ಕಲಾ ಸಂಘ ವತಿಯಿಂದ ಹೆಣ್ಣು ಮಕ್ಕಳಿಗೆ ಶಿಕ್ಷಣ. ಹೆಣ್ಣು ಮಕ್ಕಳ ದೌರ್ಜನ್ಯ ತಡೆಗಟ್ಟುವುದು. ಹೆಣ್ಣು ಮಕ್ಕಳನ್ನು ಉಳಿಸಿ ಶಿಕ್ಷಣ ಕಲಿಸಿ, ಪಲ್ಸ್ ಪೋಲಿಯೋ ಲಸಿಕಾ, ಮಾತೃ ವಂದನಾ ಇತರೆ ಯೋಜನೆಗಳ ಕುರಿತು ಜೋಗಿ ಜನಪದ ಹಾಡುಗಳನ್ನು ಪ್ರಸ್ತುತ ಪಡೆಸಲಾಯಿತು.ಈ ಸಂದರ್ಭದಲ್ಲಿ ಶಿಶು ಅಭಿವೃದ್ದಿ ಇಲಾಖೆ ಮೇಲ್ವಿಚಾರಕರಾದ ಕುಸುಮಬಾಯಿ, ಪತ್ರಕರ್ತ ಎಂ.ಷಡಾಕ್ಷರಪ್ಪ, ಸುಧಾ, ಹನುಮಂತಮ್ಮ, ಅನ್ನಪೂರ್ಣ, ಕವಿತಾ ಮತ್ತಿತರರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ