ದ್ವಿಚಕ್ರವಾಹನ ಸವಾರ ಆಯತಪ್ಪಿ ಬಿದ್ದು ಹಣೆಗೆ ಪೆಟ್ಟು

ಮಿಡಿಗೇಶಿ

       ಮಧುಗಿರಿ ತಾ. ಚಿನ್ನೇನಹಳ್ಳಿ ಗ್ರಾಮದ ಸಮೀಪ ಜ.17 ರಂದು ಬೆಳಗ್ಗೆ 11-20 ರ ಸಮಯದಲ್ಲಿ ಮಿಡಿಗೇಶಿ ಕಡೆಯಿಂದ ಮಧುಗಿರಿ ಕಡೆ, ಸಂಕಾಪುರ ಗ್ರಾಮಕ್ಕೆ ದ್ವಿಚಕ್ರ ವಾಹನ ಸ್ಕೂಟಿ ಕೆ.ಎ.06 ಕ್ಯೂ0066 ರ ವಾಹನದಲ್ಲಿ ಅಂಗವಿಕಲ (ಬಲಕಣ್ಣು ಕುರುಡು) ಶಿವಕುಮಾರ್ ಬಿನ್ ರಂಗಧಾಮಯ್ಯ ಎನ್ನುವ ವ್ಯಕ್ತಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಆಯತಪ್ಪಿ ಬಿದ್ದು(ಸ್ಕಿಡ್) ಹಣೆಗೆ ಪೆಟ್ಟಾಗಿರುತ್ತದೆ. ಶಿವಕುಮಾರನು ತಲೆಗೆ ಹೆಲ್ಮೆಟ್‍ನ್ನು ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿರುತ್ತಾನೆ. ಸದರಿ ಗಾಯಾಳುವನ್ನು ಕೆ.ಶಿಪ್ ಆಂಬ್ಯುಲೆನ್ಸ್‍ನಲ್ಲಿ ಮಧುಗಿರಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಮಿಡಿಗೇಶಿ ಪೊಲೀಸರು ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿದ್ದು, ಅಪಘಾತಕ್ಕೊಳಗಾದ ವಾಹನ ವಶಪಡಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿರುತ್ತಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link