ಮಣಿಪುರದ ಸಿಂಹಾಸನ ಕಳೆದು ಕೊಳ್ಳವ ಭೀತಿಯಲ್ಲಿ ಬಿಜೆಪಿ..!!

ಇಂಫಾಲ :

      ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಪಕ್ಷಗಳಲ್ಲಿ ಒಂದಾಗಿರುವ ಎನ್‌ಪಿಎಫ್ ತಾನು ಸರ್ಕಾರದಲ್ಲಿ ಮುಂದುವರಿಯಬೇಕೋ ಬೇಡವೋ ಎಂಬ ಬಗ್ಗೆ ನಿರ್ಧರಿಸಲು ತನ್ನ ನಾಯಕರ ಸಭೆಯನ್ನು ಕರೆದಿದ್ದು.ಬಿಜೆಪಿ ತನ್ನ ಆಲೋಚನೆ, ಸಲಹೆ, ಸೂಚನೆಗಳಿಗೆ ಕಿವಿಗೊಡುತ್ತಿಲ್ಲ ಎಂದು ಎನ್‌ಪಿಎಫ್ ಆರೋಪಿಸಿದೆ.

     ಆದರೆ ಎನ್‌ಪಿಎಫ್ ನ ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಮೈತ್ರಿ ಸರ್ಕಾರ ಸಾಂಗವಾಗಿ ನಡೆಯಲು ತಾನು ಮಿತ್ರಪಕ್ಷವಾದ ಎನ್‌ಪಿಎಫ್ ಗೆ ಎಲ್ಲ ರೀತಿಯ ಸಹಕಾರ, ಸೌಕರ್ಯಗಳನ್ನು ನೀಡಿದ್ದೇನೆ ಎಂದು ತಿಳಿಸಿದೆ.

   ಎನ್‌ಪಿಎಫ್ ನ ರಾಜ್ಯ ಘಟಕದ ಅಧ್ಯಕ್ಷ ಅವಾಂಗ್‌ಬೋ ನೇವಮಯಿ ಅವರು “ಬಿಜೆಪಿ ತನ್ನ ಮಿತ್ರ ಪಕ್ಷಗಳನ್ನು ಕಡೆಗಣಿಸಿ ಅವುಗಳಿಗೆ ಯಾವುದೇ ಮಹತ್ವ ನೀಡುತ್ತಿಲ್ಲ’ ಎಂದು ಆರೋಪಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap