ಬಳ್ಳಾರಿ
ರಾಷ್ಟ್ರ ರಾಜಕಾರಣದಲ್ಲಿ ಈ ಚುನಾವಣೆ ನಿರ್ಣಾಯಕ ಚುನಾವಣೆ. ಒಂದೆಡೆ ಮತೀಯ ಹಾಗೂ ಸರ್ವಾಧಿಕಾರಿ ಹಾಗೂ ಭ್ರಷ್ಟ ಶಕ್ತಿ ಮೋದಿ ಮತ್ತು ಬಿಜೆಪಿ, ಇನ್ನೊಂದೆಡೆ ದೇಶದ ಐಕ್ಯತೆ ಕಾಪಾಡುವ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ನಡುವೆ ಚುನಾವಣಾ ಸಂಘರ್ಷ ನಡೀತಾ ಇದೆ ಎಂದು ಸಂಸದ ವಿ.ಎಸ್ ಉಗ್ರಪ್ಪ ಹೇಳಿದ್ದಾರೆ.
ಬಳ್ಳಾರಿಯಲ್ಲಿ ನೂತನ ಮನೆಗೆ ಗೃಹ ಪ್ರವೇಶ ಮಾಡಿದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮೋದಿ ವಿರುದ್ಧ ಅಲೆ ದೇಶದಲ್ಲಿದೆ. ಜಾತ್ಯಾತೀತ ಶಕ್ತಿಯ ಪರವಾಗಿ ಅಲೆ ಇದೆ. ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳೋದು ಗ್ಯಾರಂಟಿ. ಬಿಜೆಪಿಯವ್ರು ಯಡವಟ್ಟುಗಳ ಮೇಲೆ ಯಡವಟ್ಟು ಮಾಡಿಕೊಳ್ತಿದ್ದಾರೆ.
ಅವರು ನೀಡಿದ ಎಲ್ಲ ಭರವಸೆಗಳು ಹುಸಿಯಾಗಿವೆ. ಜನರನ್ನ ಏನಾದ್ರೂ ಮಾಡಿ, ಮರಳು ಮಾಡೋಣ ಅಂತಾ ಪುಲ್ವಾಮಾ ದಾಳಿಯನ್ನು ರಾಜಕೀಯ ಮಾಡಲು ಹೋದ್ರು. ದೇಶದ ಸೈನಿಕರ ತ್ಯಾಗ ಹಾಗೂ ಸಾಧನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಅಂತಾ ಕಾನೂನು ಇದೆ.
ಇದಕ್ಕೆ ಬಿಜೆಪಿಗೆ ಚುನಾವಣಾ ಆಯೋಗ ಛೀಮಾರಿ ಹಾಕಿದೆ. ಮೋದಿಗೆ ಜನಬೆಂಬಲ ಕಡಿಮೆ ಆಗಿದೆ. ಕರ್ನಾಟಕದಲ್ಲಿ ಅವರು ಸೋಲೋದು ಗೋಡೆ ಬರಹದಷ್ಟೇ ಸ್ಪಷ್ಟವಾಗಿ ಕಾಣ್ತಿದೆ ಎಂದು ಸಂಸದ ಉಗ್ರಪ್ಪ ವಾಗ್ದಾಳಿ ನಡೆಸಿದರು.ಬಿಜೆಪಿಯವರು ಸಾಚಾ ಜನನಾ?ಅವರು ದುಡ್ಡನ್ನ ಬಳಸ್ತಾ ಇಲ್ವಾ? ಬಿಜೆಪಿಯವರ ಮೇಲೆ ಐಟಿ ದಾಳಿ ಯಾಕಾಗ್ತಿಲ್ಲ? ನನಗೆ ಐಟಿ ನೋಟೀಸ್ ಬಂದಿದ್ದ ಕ್ಕೆ ಮೂರು ಸಲ ಉತ್ತರ ಕೊಟ್ಟಿದ್ದೇನೆ.
ನಾನು ಫ್ರೀ ಮತ್ತು ಫೇರ್ ಚುನಾವಣೆ ಬಯಸೋನು. ಕಳೆದ ಚುನಾವಣೆಗಿಂತ ಉತ್ತಮ ವಾತಾವರಣ ನನ್ನ ಪರ ಇದೆ. ಮಹಾರಾಷ್ಟ್ರದಲ್ಲಿ ಐಟಿ ದಾಳಿ ಯಾಕೆ ಆಗ್ತಾ ಇಲ್ಲ ? ನಮ್ಮ ಅಭ್ಯರ್ಥಿ ಹತ್ತಿರ ಹಣ ಇದೆ. ಕಾಂಗ್ರೆಸ್ ಅಭ್ಯರ್ಥಿ ಬಳಿ ಹಣ ಇಲ್ಲ ಅಂತಾ ಬಳ್ಳಾರಿ ಜನ ಮಾತಾಡ್ತಿದ್ದಾರೆ.
ಹಾಗಾದ್ರೆ ಇದು ಐಟಿಯವರಿಗೆ ಕಾಣ್ತಾ ಇಲ್ವಾ? ಅವರಿಗೆ ಈ ಬಗ್ಗೆ ಮಾಹಿತಿ ಇಲ್ವಾ? ದೇವೇಂದ್ರಪ್ಪ ಹಣವಂತ ಮನುಷ್ಯ ಅಂತಾ ಜನ ಮಾತಾಡ್ತಾರೆ. ಈ ಬಗ್ಗೆ ಐಟಿಗೆ ಮಾಹಿತಿ ಇಲ್ವಾ? ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ. ಆದ್ರೆ ರಾಜಕೀಯವಾಗಿ ಟಾರ್ಗೆಟ್ ಮಾಡೋದು ಸರಿಯಲ್ಲ. ನೀವು ಐಟಿ ರೇಡ್ ಮಾಡಿಸಬಹುದು. ಆದ್ರೆ ಜನ ಮತದಾನದ ಮೇಲೆ ಕ್ರಮ ಕೈಗೊಳ್ಳಿ ಆದರೆ ರಾಜಕೀಯ ವಾಗಿ ಟಾರ್ಗೆಟ್ ಮಾಡೋದು ಸರಿಯಲ್ಲ.
ನೀವು ಐಟಿ ರೇಡ್ ಮಾಡಿಸಬಹುದು.ಆದ್ರೆ ಜನರು ಮತದಾನದ ಮೂಲಕ ರೇಡ್ ಮಾಡಿ ಮನೆಗೆ ಕಳಿಸ್ತಾರೆ ಎಂದು ಉಗ್ರಪ್ಪ ಕಿಡಿಕಾರಿದರು.ಇದೇ ವೇಳೆ ವಿ ಎಸ್ ಉಗ್ರಪ್ಪ ನವರ ನೇತೃತ್ವದಲ್ಲಿ ಟಾಪಲ್ ಗಣೇಶ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಯಾದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಮಾಜಿ ಹುಣ್ಣೆ ನೇಕಾರರ ನಮ್ಮ ಅದ್ಯಕ್ಷ ಜಿ ಕೃಷ್ಣ ಕಾಂಗ್ರೆಸ್ ನ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
