ಮನಸ್ಸಿನ ಹತೋಟಿಯಿಂದ ಉನ್ನತ ಸಾಧನೆ ಮಾಡಲು ಸಾಧ್ಯ

ಹೊಸದುರ್ಗ

        ಮನಸ್ಸಿನ ಹತೋಟಿಯಿಂದ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಕುಂಚಿಟಿಗ ಮಠದ ಪೀಠಾಧ್ಯಕ್ಷಡಾ.ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.

         ಪಟ್ಟಣದಕುಂಚಿಟಿಗ ಮಹಾಸಂಸ್ಥಾನದಲ್ಲಿ ಬುಧವಾರ ನಡೆದ ಸುಜ್ಞಾನ ಸಂಗಮ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು.

       ಮನುಷ್ಯನಿಗೆ ಕಣ್ಣುಗಳೇ ದೊಡ್ಡ ಶತ್ರು.ಸಮಾಜದಲ್ಲಿ ನಮ್ಮಕಣ್ಣಿನದೃಷ್ಠಿಕೋನ ಸರಿಯಿಲ್ಲದಿದ್ದರೇ ಸಾಕಷ್ಟು ಅವಗುಣಗಳಿಗೆ ನಾವುಗಳು ಗುರಿಯಾಗಿಬಿಡುತ್ತೇವೆ. ದೇಹದ ಹೆಬ್ಬಾಗಲಾಗಿರುವಕಣ್ಣನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಾದರೇ, ಮೊದಲು ಮನಸ್ಸು ಜಾಗೃತವಾಗಿರಬೇಕು ಚಂಚಲ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಲು ಧ್ಯಾನ, ಯೋಗ, ಭಕ್ತಿಅಗತ್ಯಎಂದರು.

         ದೇಶಕ್ಕೆಅನ್ನ ನೀಡುವರೈತರನ್ನು ಪ್ರತಿನಿತ್ಯ ಸ್ಮರಿಸುವ ಮೂಲಕ ನಮ್ಮೆಲ್ಲಾ ಕೆಲಸಗಳನ್ನು ಪ್ರಾರಂಭಿಸಬೇಕಿದೆ. ಪ್ರತಿಯೊಬ್ಬ ಪ್ರಜೆಯೂ ಯಾವುದಾದರೂ ರೂಪದಲ್ಲಿ ಸಮಾಜದಖುಣವನ್ನುತೀರಿಸುವ ಕೆಲಸ ಮಾಡಬೇಕು. ಹುಟ್ಟಿನಜನ್ಮ ಸಾರ್ಥಕವಾಗಬೇಕಾದರೇ, ಸತ್ಯ, ಪ್ರಾಮಾಣಿಕತೆಯ ಹಾದಿಯಲ್ಲಿ ಸಾಗಬೇಕು. ಬಸವಾದಿ ಶರಣರ ಮಾರ್ಗದಲ್ಲಿ ಬದುಕಿನ ಶ್ರೇಷ್ಠತೆಯನ್ನು ಕಂಡುಕೊಳ್ಳಲು ಶ್ರಮಿಸಬೇಕುಎಂದರು.

         ಜಿಪಂ ಮಾಜಿ ಸದಸ್ಯ ಬಿ.ಎಸ್.ದ್ಯಾಮಪ್ಪಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿನಓತ್ತಡಕ್ಕೆ ಓಳಗಾಗಿರುವ ಮಾನವನಿಗೆಧಾರ್ಮಿಕ ಮತ್ತು ಸಾಂಸ್ಕತಿಕ ಕಾರ್ಯಕ್ರಮಗಳು ಮನಸ್ಸಿನ ನೆಮ್ಮದಿ ಹೆಚ್ಚಿಸಿ ಆಹ್ಲಾದಕರವಾತಾವರಣ ನಿರ್ಮಿಸುತ್ತವೆ. ಶ್ರೀಗಳ ಕಾಯಕನಿಷ್ಠೆ ನಮಗೆಲ್ಲಾ ಪ್ರೇರಣೆಎಂದರು.

        ಶಿಕ್ಷಕ ಶಿವಮೂರ್ತಿ ಉಪನ್ಯಾಸಕುರಿತು ಮಾತನಾಡಿ, ಗುರುವಿನ ಮಾಗದರ್ಶನದಿಂದ ಯಶಸ್ವಿ ಜೀವನ ನಡೆಸಬಹುದಾಗಿದ್ದು, ಭಗವಂತನಅನುಗ್ರಹ ಸಿಗಲು ಗುರುವಿನ ಆರ್ಶೀವಾದ ತುಂಬಾ ಮುಖ್ಯಎಂದರು.ಚನ್ನಗಿರಿ ಮಂಜು, ಹೊಳಲ್ಕೆರೆ ತಾಲೂಕು ವಕೀಲರ ಸಂಘಕ್ಕೆ ನೂತನಅಧ್ಯಕ್ಷರಾಗಿಆಯ್ಕೆಯಾಗಿರುವರಂಗನಾಥ್, ಉಪಾಧ್ಯಕ್ಷಜಗದೀಶ್‍ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ಜಿಪಂ ಮಾಜಿ ಸದಸ್ಯ ಶಿವಕುಮಾರ್, ಓಂಕಾರಪ್ಪ, ಯೋಗೇಶ್ ಮಂಜುನಾಥ್ ಮತ್ತಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link