ಜಿಂದಾಲ್ ಗೆ ಭೂಮಿ ವಿಚಾರ : ಕ್ಯಾಬಿನೆಟ್ ಉಪಸಮಿತಿಗೆ ಬಿಟ್ಟ ವಿಚಾ3ರ : ಡಾ. ಶಾಮನೂರು ಶಿವಶಂಕರಪ್ಪ

ಬೆಂಗಳೂರು

    ಜಿಂದಾಲ್‍ಗೆ ಭೂಮಿ ಕೊಡುವ ವಿಚಾರದ ಬಗ್ಗೆ ಕ್ಯಾಬಿನೆಟ್‍ಉಪಸಮಿತಿ ನಿರ್ಣಯ ಕೈಗೊಳ್ಳಲಿದೆ. ಬಿಜೆಪಿಯವರು ಈ ಬಗ್ಗೆ ಪಾದಯಾತ್ರೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಮಾಡುವುದಾದರೆ ಮಾಡಲಿ, ಯಾರು ಬೇಡ ಅಂತಾರೆಇದರಿಂದ ರೋಗ-ರುಜಿನಿ ಎಲ್ಲಾ ಹೋಗುತ್ತವೆ ಎಂದು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ವ್ಯಂಗ್ಯವಾಡಿದ್ದಾರೆ.

    ದಾವಣಗೆರೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್‍ಗೆ ಜಾಗ ನೀಡುವ ವಿಚಾರ ಈ ಹಿಂದೆ ಬಿಜೆಪಿಯವರೇ ಮಾಡಿದ್ದು, ಈಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕ್ಯಾಬಿನೆಟ್ ಉಪಸಮಿತಿ ಜಾಗ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಲಿದೆ. ಬಿಜೆಪಿಯವರು ಬೇಕಿದ್ದರೆ ಪಾದಯಾತ್ರೆ ಮಾಡಿಕೊಳ್ಳಲಿ ಎಂದರು.

    ಲಿಂಗಾಯಿತ ಪ್ರತ್ಯೇಕ ಧರ್ಮಕ್ಕಾಗಿ ಜಾಗತಿಕ ಲಿಂಗಾಯಿತ ಮಹಾಸಭಾ ಸುಪ್ರಿಂಕೋರ್ಟ್‍ಗೆ ಹೋಗುವ ವಿಚಾರ ಹಿನ್ನೆಲೆಯಲ್ಲಿ ವೀರಶೈವ ಮತ್ತು ಲಿಂಗಾಯಿತ ಎರಡೂ ಒಂದೇ. ಈಗ ಮಾತನಾಡುವವರು ಆಮೇಲೆ ಮನೆಯಲ್ಲಿ ಕೂರುತ್ತಾರೆ, ಅವರಿಗೆ ಎಲ್ಲಿ ನ್ಯಾಯ ಸಿಗುತ್ತೋ ಅಲ್ಲಿಯೇ ಹೋಗಲಿ ಎಂದು ಶಾಮನೂರು ಪ್ರತಿಕ್ರಿಯೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap