ಬೆಂಗಳೂರು
ಕಾರಿನಲ್ಲಿ ಹೋಗುತ್ತಿದ್ದ ಕುಖ್ಯಾತ ರೌಡಿ ಲಕ್ಷ್ಮಣನನ್ನು ಹಾಡುಹಗಲೇ ಮಚ್ಚು ಲಾಂಗ್ನಿಂದ ಕೊಚ್ಚಿ ಕೊಲೆಗೈದ ಪ್ರಮುಖ ಆರೋಪಿ ಕ್ಯಾಟ್ ಮಂಜನನ್ನು ಉತ್ತರ ವಲಯದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೌಡಿ ಲಕ್ಷ್ಮಣನ ಕೊಲೆ ಕೃತ್ಯದಲ್ಲಿ ಕ್ಯಾಟ್ ಮಂಜ ಪ್ರಮುಖ ಆರೋಪಿಯಾಗಿದ್ದು ಈತನ ಜೊತೆ ಕೃತ್ಯವೆಸಗಿದ ನಾಲ್ಕೈದು ಮಂದಿ ಅಲ್ಲದೆ,10ಕ್ಕೂ ಹೆಚ್ಚು ಮಂದಿ ರೌಡಿಗಳು ಕೈ ಜೋಡಿಸಿದ್ದು ಅವರ ಸುಳಿವು ಆಧರಿಸಿ ಬಂಧಿಸಲು ವಿಶೇಷ ಪೊಲೀಸ್ ತಂಡಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ಹಳೆದ್ವೇಷದ ಹಿನ್ನೆಲೆಯಲ್ಲಿ ರೌಡಿ ಲಕ್ಷ್ಮಣನ ಕೊಲೆಯಾಗಿರುವುದು ಕಂಡುಬಂದಿದೆ.ಯಾವಾಗಲೂ ನಾಲ್ಕೈದು ಮಂದಿ ಸಹಚರರ ಜೊತೆ ಓಡಾಡುತ್ತಿದ್ದ ಲಕ್ಷ್ಮಣನನ್ನು ಒಂಟಿಯಾಗಿ ಕರೆಸಿಕೊಳ್ಳಲು ಮಹಿಳೆಯೊಬ್ಬರ ಸಹಾಯವನ್ನು ದುಷ್ಕರ್ಮಿಗಳು ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ಪೊಳೀಸ್ ತಂಡಗಗಳು ಕಲೆಹಾಕುತ್ತಿದೆ .
ಕಳೆದ 2005 ರಲ್ಲಿ ಲಕ್ಷ್ಮಣನ ಗ್ಯಾಂಗ್ ಮಂಜುನಾಥ್ ಅಲಿಯಾಸ್ ಮಚ್ಚನನ್ನು ಕೊಲೆಮಾಡಿತ್ತು. ಇದಲ್ಲದೆ, ರೌಡಿ ಚಟುವಟಿಕೆಗಳಲ್ಲಿ ಹವಾ ಸೃಷ್ಟಿಸಿ, ಇತರರಿಗೆ ತೊಂದರೆ ಕೊಡುತ್ತಿದ್ದ ರೌಡಿ ಲಕ್ಷ್ಮಣನನ್ನು ಮುಗಿಸಲು ಹಲವು ರೌಡಿಗಳು ಒಟ್ಟಾಗಿ ಸಂಚು ರೂಪಿಸಿ, ಲಕ್ಷ್ಮಣನನ್ನು ಒಂಟಿಯಾಗಿ ಬರುವಂತೆ ಮಾಡಿ ಕೃತ್ಯವೆಸಗಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಹಿರಿಯ ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ
ಭಯಾನಕ ಕೃತ್ಯ ಸೆರೆ
ಮಾರ್ಜಕ ಕಂಪನಿಯ ರಸ್ತೆಯ ರಿನೆಸಾನ್ಸ್ ಅಪಾರ್ಟ್ಮೆಂಟ್ ಬಳಿ ಕಳೆದ ಮಾ. 6 ರಂದು ಮಧ್ಯಾಹ್ನ 12.45ರ ವೇಳೆ ಇನ್ನೋವಾ ಕಾರಿನಲ್ಲಿ ಲಕ್ಷ್ಮಣ ಸಾಗುತ್ತಿದ್ದಾಗ ಆರ್ಎಂಸಿ ಯಾರ್ಡ್ ಕಡೆಯಿಂದ ಬಂದ ಕಾರು ಅಡ್ಡಗಟ್ಟಿದೆ. ತಕ್ಷಣ ಕಾರಿನಿಂದ ಲಾಂಗ್, ಮಚ್ಚು ಹಿಡಿದ ಆರು ಮಂದಿ ದುಷ್ಕರ್ಮಿಗಳು,ಕಾರಿನಲ್ಲಿದ್ದ ಲಕ್ಷ್ಮಣನನ್ನು ಕೆಳಗಿಳಿಸಿದ್ದಾರೆ.
ಕೂಡಲೇ ಲಕ್ಷ್ಮಣ ಮೇಲೆ ಮನಸೋಇಚ್ಛೆ ಮಚ್ಚು, ಲಾಂಗ್ಗಳಿಂದ ಹೊಡೆದು ಅಲ್ಲಿಂದ ಪರಾರಿಯಾಗಿದ್ದು, ಕೇವಲ 20 ನಿಮಿಷಗಳಲ್ಲಿ ನಡೆದಿರುವ ಈ ಭಯಾನಕ ಕೃತ್ಯ ರಿನೆಸಾನ್ಸ್ ಅಪಾರ್ಟ್ಮೆಂಟ್ ಮುಂಭಾಗ ಹಾಕಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪಾಪಿಗಳ ಲೋಕದಲ್ಲಿ ಹವಾ ಸೃಷ್ಟಿಸಿ ಪ್ರವರ್ಧಮಾನಕ್ಕೆ ಬಂದಿದ್ದ ರೌಡಿ ಲಕ್ಷ್ಮಣ ಯಾವ ರೀತಿ ಹೆಣವಾಗಿ ಹೋದ ಎನ್ನುವುದು ದೃಶ್ಯಾವಳಿಗಳು ತೋರಿಸುತ್ತವೆ
ಲಕ್ಷ್ಮಣ ಮನೆಯಿಂದ ಹೊರಬರುವಾಗ ಬಟ್ಟೆಯನ್ನು ಪ್ಯಾಕ್ ಮಾಡಿಕೊಂಡಿದ್ದು, ಅವರ ಹತ್ಯೆಹಿಂದೆ ಹೆಣ್ಣೊಬ್ಬಳು ಇದ್ದಾಳೆ ಎಂದು ಪತ್ನಿ ಚೈತ್ರಾ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಲಕ್ಷ್ಮಣ ಒಂಟಿಯಾಗಿ ಕಾರಿನಲ್ಲಿ ಬರುವ ವಿಷಯ ಆ ಮಹಿಳೆಯೊಬ್ಬಳಿಗೇ ಮಾತ್ರ ಗೊತ್ತಿರುವುದು ಕಂಡುಬಂದಿದೆ.
ಮಹಿಳೆಯನ್ನೇ ದಾಳವಾಗಿ ಬಳಸಿ ಕ್ಯಾಟ್ ಮಂಜ, ಇತರ ರೌಡಿಗಳು, ಲಕ್ಷ್ಮಣನ ಕಥೆ ಮುಗಿಸಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
