ಚಿತ್ರದುರ್ಗ
ಜಿಲ್ಲಾ ಆರೋಗ್ಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಯಾಸಪುರ ಇವರ ಸಹಯೋಗದೊಂದಿಗೆ, ಕ್ಯಾಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ಒಳ ಮತ್ತು ಹೊರ ಪ್ರಾಂಗಣದಲ್ಲಿ ಸ್ವಚ್ಛತಾ ಶನಿವಾರದ ಪ್ರಯುಕ್ತ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ, ನಾಗರೀಕರು, ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು ಎನ್.ಎಸ್.ಮಂಜುನಾಥ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಡಾ.ಶೈಲ.ವಿ.ಕೊಳ್ಳಿ ರವರು ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಸ್ವಚ್ಛತೆ ಮೊದಲು ನಮ್ಮಿಂದ ಪ್ರಾರಂಭವಾಗಿ ಸಮುದಾಯದ ಮನೆ ಮನ ಮಟ್ಟಿ ಅವರ ವರ್ತನೆಯಲ್ಲಿ ಬದಲಾವಣೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ನವೀನ್, ಶಂಕರ್, ತಸ್ಸಕೀಯಾ ಹೈದರ್, ದೇವೀರಮ್ಮ, ಮಂಜುಳಮ್ಮ, ಜಾನ್ಸಿ, ಕಿರಿಯ ಆರೋಗ್ಯ ಸಹಾಯಕರು, ಗುರುಶಾಂತಮ್ಮ, ಲಕ್ಷ್ಮಿಬಾಯಿ, ನಾಗವೇಣಿ ಆಶಾ ಕಾರ್ಯಕರ್ತೆಯರು ಜಿಲ್ಲಾಮಟ್ಟದಿಂದ ಕರಕಪ್ಪ ಮೇಟಿ, ಸಾವಿತ್ರಮ್ಮ, ಗಾಯತ್ರಮ್ಮ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
