ರಾಣೇಬೆನ್ನೂರು ಸಂತೆ ಹಾಗೂ ರೈಲ್ವೆ ನಿಲ್ದಾಣದಲ್ಲಿ ಸಿಇಓ ಅವರಿಂದ ಮತಜಾಗೃತಿ

ಹಾವೇರಿ

       ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಜಾಗೃತಿ ಕಾರ್ಯಕ್ರಮ ಅಂಗವಾಗಿ ಜಿಲ್ಲಾ ಸ್ವೀಪ ಸಮಿತಿ ಅಧ್ಯಕ್ಷರಾದ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ರೈಲ್ವೆ ಪ್ರಯಾಣಿಕರು ಹಾಗೂ ಸಂತೆ ವ್ಯಾಪಾರಿಗಳು, ಸಾರ್ವಜನಿಕರನ್ನು ಭೇಟಿ ಮಾಡಿ ಮತದಾನ ಮಾಡುವಂತೆ ಮನವಿ ಮಾಡಿಕೊಂಡರು.

         ಭಾನುವಾರ ಬೆಳಿಗ್ಗೆ ರಾಣೇಬೆನ್ನೂರು ನಗರದ ರೈಲ್ವೆ ನಿಲ್ದಾಣಕ್ಕೆ ತೆರಳಿ ಪ್ರಯಾಣಿಕರಿಗೆ ಮತದಾನ ಜಾಗೃತಿಯ ಕರಪತ್ರಗಳನ್ನು ವಿತರಿಸಿ ಮತದಾನದ ಮಹತ್ವ ಕುರಿತಂತೆ ವಿವರಿಸಿದರು. ಇದೇ ಎಪ್ರಿಲ್ 23 ರಂದು ನಡೆಯುವ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಮತಚಲಾಯಿಸುವಂತೆ ಅರಿವು ಮೂಡಿಸಿದರು. ಎಲ್ಲ ಪ್ರಯಾಣಿಕರಿಗೂ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.

        ಭಾನುವಾರದ ಸಂತೆಯಲ್ಲಿ ಪ್ರತಿ ಅಂಗಡಿ ಮತ್ತು ಸಂತೆಗೆ ಆಗಮಿಸಿದ ವಾಪಾರಸ್ಥರ ಅಂಗಡಿಗಳಿಗೆ ತೆರಳಿ ಮತದಾನ ಜಾಗೃತಿಯ ಕರಪತ್ರವನ್ನು ವಿತರಿಸಿ, ತಾವು ಯಾವುದೇ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರೂ ಸಹ ಎಪ್ರಿಲ್ 23 ರಂದು ಬಿಡುವುದು ಮಾಡಿಕೊಂಡು ಮತದಾನ ಮಾಡಿ. ಒಂದೊಂದು ಮತವೂ ಅಮೂಲ್ಯವಾದದ್ದು. ಎಲ್ಲರೂ ಮತದಾನ ಮಾಡಿದರೆ ಶೇ.100 ರಷ್ಟು ಮತದಾನದ ಗುರಿ ತಲುಪಬಹುದು. ಆರೋಗ್ಯಕರವಾದ ಆಡಳಿತ ವ್ಯವಸ್ಥೆಗೆ ಪ್ರಜಾಪ್ರಭುತ್ವದಲ್ಲಿ ಎಲ್ಲ ಸಮುದಾಯ, ವಿವಿಧ ವೃತ್ತಿ ಬಾಂಧವರು ಮತದಾನದಲ್ಲಿ ಪಾಲ್ಗೊಂಡರೆ ನಿಜವಾದ ಪ್ರಜಾಪ್ರಭುತ್ವದ ಆಶಯ ಗೆಲ್ಲುತ್ತದೆ ಎಂದು ಹೇಳಿದರು.ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು, ತಾಲೂಕು ಸ್ವೀಪ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link