ಎಂಬ್ರಾಯ್ಡಿರಿ ಮತ್ತು ಕಂಪ್ಯೋಟರ್ ತರಬೇತಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

ಕೊರಟಗೆರೆ:-

       ಮಹಿಳೆಯರು ಕುಟುಂಬದ ಆರ್ಥಿಕ ಅಭಿವೃದ್ದಿಗಾಗಿ ಕೌಶಲ್ಯ ತರಬೇತಿ ಪಡೆಯುವ ಮೂಲಕ ಸ್ವಾವಲಂಬಿ ಜೀವನ ನಡೆಸುವಂತಾಗಬೇಕುಎಂದು ಸಂಸದಎಸ್.ಪಿ.ಮುದ್ದಹನುಮೇಗೌಡತರಬೇತಿ ಮಹಿಳೆಯರಿಗೆ ಕಿವಿಮಾತು ಹೇಳಿದರು.

         ಅವರು ಪಟ್ಟಣದಲ್ಲಿ ಬೀಮ್‍ ಗ್ರಾಮೀಣಾಭಿವೃಧ್ದಿ ಸಂಸ್ಥೆ ಏರ್ಪಡಿಸಿದ್ದ ಉಚಿತ ಹೊಲಿಗೆ, ಎಂಬ್ರಾಯ್ಡಿರಿ ಮತ್ತು ಕಂಪ್ಯೋಟರ್ ತರಬೇತಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾಕುಟುಂಬದಆರ್ಥಿಕ ಸದೃಡತೆಗೆಗ್ರಾಮೀಣ ಪ್ರದೇಶದಯುವಕಯುವತಿಯರುಕೌಶಲ್ಯತರಬೇತಿ ಪಡೆದುಕೊಳ್ಳುವ ಅನಿವಾರ್ಯತೆಇದೆಎಂದರು.

      ಆರ್ಥಿಕವಾಗಿ ಹಿಂದುಳಿದ ಗ್ರಾಮೀಣಯುವಕ, ಯುವತಿಯರಿಗೆ ಹಾಗೂ ಮಹಿಳೆಯರಿಗೆ ಸ್ವಾಲಂಬನೆ ಜೀವನ ನಿರ್ವಹಿಸಲು ಕಂಪ್ಯೋಟರ್‍ತರಬೇತಿಯೊಂದಿಗೆ ಹೊಲಿಕೆ ಮತ್ತುಕಸೂತಿ ತರಬೇತಿಗಳನ್ನು ಎನ್.ಜಿ.ಓ ಮುಖಾಂತರಉಚಿತವಾಗಿ ನೀಡುತ್ತಿರುವ ಬೀಮ್‍ಗ್ರಾಮೀಣಾಭಿವೃಧ್ದಿ ಸಂಸ್ಥೆಯ ಸಾಮಾಜಿಕ ಸೇವೆ ಪ್ರಸ್ತುತ ಸಮಾಜದಲ್ಲಿಅತ್ಯಂತಅವಶ್ಯಕವಾಗಿರುವುದು ಶ್ಲಾಘನೀಯವಿಚಾರವಾಗಿದೆಎಂದು ಪ್ರಶಂಸೆ ವ್ಯಕ್ತಪಡಿಸಿದರು.

      ಜಿ.ಪಂ. ಸದಸ್ಯ ಪ್ರೇಮಾಮಹಾಲಿಂಗಪ್ಪ ಮಾತನಾಡಿಆದುನಿಕಜಗತ್ತಿನಲ್ಲೂ ಸಹ ಗ್ರಾಮೀಣಭಾಗದಲ್ಲಿ ಬಹುತೇಕ ಹೆಣ್ಣು ಮಕ್ಕಳನ್ನು ಎಸ್.ಎಸ್.ಎಲ್.ಸಿ ವರೆಗೂ ಓದಿಸಿ ವಿದ್ಯಾಭ್ಯಾಸವನ್ನು ಮೊಟಕು ಗೊಳಿಸಿ ಮದುವೆ ಮಾಡುವುದು ಸಾಮಾನ್ಯವಾಗಿದೆಆದರೆಕುಟುಂಬದಲ್ಲಿ ಆ ಹೆಣ್ಣು ಮಗಳು 4 ಗೋಡೆಗಳ ಮಧ್ಯ ಸೀಮಿತವಾಗಿದ್ದು ಅಂತಹ ಮಹಿಳೆ ಯರು ಮನೆಯಲ್ಲಿಅಥವಾ ಹೊರಗಡೆದುಡಿದುಕುಟುಂಬ ನಿರ್ವಹಣೆಗೆ ಸಹಾಯವಾಗಿ ನಿಲ್ಲುವುದರೊಂದಗೆಕುಟುಂಬದಲ್ಲಿಯೂ ಸಹ ಆಕೆಗೆ ಪ್ರತ್ಯೇಕವಾದಗೌರವಯುತ ಸ್ಥಾನದಲ್ಲಿ ಬದುಕಲು ಸಹಕಾರಿಯಾಗಲಿದೆಎಂದರು.

       ಬೆಂಗಳೂರು ಮೈಟ್ಡ್ರೀ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಅಬ್ರಹಾಂ ಮೂಸಸ್ ಮಾತನಾಡಿಕೊರಟಗೆರೆ ಪಟ್ಟಣದಲ್ಲಿಗ್ರಾಮೀಣ ಬಡಯುವಕಯುವತಿಯರಿಗೆಉಚಿತತರಬೇತಿ ನೀಡುತ್ತಿರುವುದುಅವರ ಸ್ವಾವಲಂಬಿ ಜೀವನಕ್ಕೆ ಸಹಕಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಅವಶ್ಯಕವಾದ ಬ್ಯೂಟಿ ಪಾರ್ಲರ್‍ತರಬೇತಿ ಮತ್ತುಗ್ರಾಮೀಣ ಪ್ರದೇಶದಯುವಕಯುವತಿಯರಿಗೆಕ್ರೀಡೆಯಲ್ಲಿತರಬೇತಿಯನ್ನು ನೀಡುವ ಕೆಲಸ ಮಾಡಲಾಗುವುದುಎಂದರು.

         ಪ.ಪಂ. ಸದಸ್ಯಎ.ಡಿ,ಬಲರಾಮಯ್ಯ ಮಾತನಾಡಿಗ್ರಾಮೀಣ ಬಡಕುಟುಂಬದ ಮಹಿಳೆಯರಿಗೆ ಲಕ್ಷಾಂತರ ರೂಗಳ ವೆಚ್ಚದಲ್ಲಿ ಉಚಿತವಾಗಿ ತರಬೇತಿ ನೀಡುತ್ತಾ ಸೇವೇಸಲ್ಲಿಸುತ್ತಿರುವ ಬೀಮ್‍ಗ್ರಾಮೀಣಾಭಿವೃಧ್ದಿ ಸಂಸ್ಥೆ ತರಬೇತಿಕೇಂದ್ರವನ್ನು ಬಾಡಿಗೆಕಟ್ಟಡದಲ್ಲಿ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಕೊರಟಗೆರೆ ಪಟ್ಟಣದಲ್ಲಿಇಂತಹ ಸಂಸ್ಥೆಗಳಿಗೆ ಉಚಿತ ನಿವೇಶನ ಹಾಗೂ ಕಟ್ಟಡಒದಗಿಸುವ ಭರವಸೆ ನೀಡಿದರು.

        ಕಾರ್ಯಕ್ರಮದಲ್ಲಿ ಬಾಕ್‍ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ತಾಲೂಕುಕಾರ್ಯನಿತರ ಪತ್ರಕರ್ತರ ಸಂಘದಅಧ್ಯಕ್ಷ ಕೆ.ವಿ.ಪುರುಷೋತ್ತಮ್, ಎನ್.ಪದ್ಮನಾಭ್, ಬೀಮ್ ಸಂಸ್ಥೆಯಅಧ್ಯಕ್ಷರವಿಕುಮಾರ್, ಕಾರ್ಯದರ್ಶಿ ಶೋಭಾ, ಶಿಕ್ಷಕಿಯರಾದ ಶ್ರೀದೇವಿ, ಶಿಲ್ಪ, ಲೀಲಾವತಿ, ನಾಗಮಣಿ, ಫ್ಹರತ್ತ್‍ಉನ್ನಿಸಾ ಸೇರಿದಂತೆಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link