ಗಡಿಗ್ರಾಮಗಳಲ್ಲಿ ಪೊಲೀಸ್ ಚೆಕ್‍ಪೋಸ್ಟ್ ಸ್ಥಾಪನೆ

ಬರಗೂರು

     ಸಿರಾ ತಾಲ್ಲೂಕಿನ ಆಂಧ್ರದ ಗಡಿ ಪ್ರದೇಶಗಳಲ್ಲಿ ಸಂಪರ್ಕ ರಸ್ತೆಗಳನ್ನು ಪೊಲೀಸ್ ಚೆಕ್ ಪೋಸ್ಟ್ ಹಾಕುವ ಮೂಲಕ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಆಂಧ್ರ ಭಾಗದಲ್ಲಿ ಕೊರಾನ ವೈರಸ್ ಹೆಚ್ಚಿದ ಹಿನ್ನೆಲೆಯಲ್ಲಿ ಜನರ ರಕ್ಷಣೆಗಾಗಿ ಸಿರಾ ಶಾಸಕ ಬಿ.ಸತ್ಯನಾರಾಯಣ, ಹುಲಿಕುಂಟೆ ಕ್ಷೇತ್ರದ ಜಿಪಂ ಸದಸ್ಯ ಎಸ್.ರಾಮಕೃಷ್ಣÀ ಮತ್ತು ಸಾರ್ವಜನಿಕರ ಒತ್ತಾಯದ ಮೇರೆಗೆ ತಾಲ್ಲೂಕಿನ ಆಂಧ್ರÀ್ರ ಗಡಿ ಗ್ರಾಮವಾದ ದೊಡ್ಡಬಾಣಗೆರೆಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ.

     ಗುರುವಾರ ಡಿವೈಎಸ್‍ಪಿ ಕುಮಾರಪ್ಪ ಚೆಕ್‍ಪೋಸ್ಟ್‍ಗೆ ಚಾಲನೆ ನೀಡಿ ಮಾತನಾಡಿ, ಈ ಭಾಗದಲ್ಲಿ ಚೆÀಕ್ ಪೋಸ್ಟ್ ತೆರೆಯಲಾಗಿದೆ. ಅಂತೆಯೆ ಪ್ರತಿಯೊಬ್ಬರು ಸಹಕಾರ ನೀಡುವ ಮೂಲಕ ಯಾವುದೇ ಸಮಸ್ಯೆ ಬಾರದಂತೆ ಇರಲಿ ಎಂದರು. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಪಿಎಸ್‍ಐ ವಿ.ನಿರ್ಮಲ, ಬರಗೂರು ಉಪಠಾಣಾ ಮುಖ್ಯ ಪೇದೆ ಜುಂಜಣ್ಣ, ರೇವಣ್ಣ, ಸ್ಥಳೀಯರಾದ ಸತೀಶ್ ಕುಮಾರ್, ಆಶೋಕ್, ಶಿವಲಿಂಗಯ್ಯ, ಗ್ರಾಪಂ ಸದಸ್ಯ ರಂಗಸ್ವಾಮಯ್ಯ, ಅರುಣಾಕ್ಷಿ ನಟರಾಜು, ಸುರೇಶ್, ಬಿಜಿ ಈರಣ್ಣ, ರಾಮಣ್ಣ, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap