ಕೊರಟಗೆರೆ:-
ಯುವ ಸಮೂಹ ಮೋಜುಮಸ್ತಿಯ ಗೀಳಿಗೆ ಬಿದ್ದು, ಕಾನೂನು ಪರಿಪಾಲನೆಯ ಅರಿವಿಲ್ಲದೆ ಜೀವನ ಹಾಳು ಗೆಡವಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು, ನಮ್ಮದೇಶದ ಕಾನೂನಿಗೆ ಗೌರವಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು ಎಂದು ಕೊರಟಗೆರೆ ಸಿವಿಲ್ ನ್ಯಾಯಾಲಯದ ಸರಕಾರಿ ಅಭಿಯೋಜಕ ಷೇಕ್ ಮಹಮ್ಮದ್ ಅಲಿ ತಿಳಿಸಿದರು.
ಅವರು ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಯುವಸಮೂಹ ಕಾನೂನು ಪರಿಪಾಲನೆಯ ಕಡೆಗೆ ಗಮನ ಹರಿಸಿ ಸಮಾಜದಲ್ಲಿ ಯಾವುದೇ ರೀತಿಯ ಅಪರಾಧ ಚಟುವಟಿಕೆ ತಡೆಯುವಂತಾರಾಗ ಬೇಕು ಎಂದರು.
ಸಮಾಜದಲ್ಲಿ ಅಪರಾಧ ಚಟುವಟಿಕೆ ನಡೆಯುವ ಬಗ್ಗೆ ಸಾರ್ವಜನಿಕರುಜಾಗೃತೆ ವಹಿಸಿ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು . ಅಪರಾದ ನಡೆಯುವ ಮುನ್ನವೇಜಾಗೃತಿ ಮೂಡಿಸುವ ಕಾರ್ಯಕ್ರಮವೇ ಅಪರಾದ ತಡೆ ಮಾಸಾಚರಣೆಯ ಮುಖ್ಯ ಉದ್ದೇಶವಾಗಿದೆ.ನಮ್ಮ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದೆ ಎಂದು ಹೇಳಿದರು.
ಆರಕ್ಷಕ ಉಪನಿರೀಕ್ಷಕ ಬಿ.ಸಿ.ಮಂಜುನಾಥ ಮಾತನಾಡಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರುವಂತಹ ಸಂಧರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ನೀಡುವಂತಹ ತಿಂಡಿ ತಿನಿಸುಗಳನ್ನು ಸ್ವೀಕರಿಸಬಾರದು, ಒಂಟಿ ಪ್ರಯಾಣಕಾಡು ಪ್ರದೇಶ ಅಥವಾ ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣಿಸುವಂತಹ ವಿದ್ಯಾರ್ಥಿಗಳು ಜಾಗೃತರಾಗಿದ್ದು, ಪೋಷಕರು ಇಲ್ಲವೇ ನಂಬಿಕಸ್ಥ ಜನರ ಜೊತೆ ಪ್ರಯಾಣಿಸಬೇಕು, ಒಂಟಿ ಮನೆಗಳು ಅಥವಾ ತೋಟದ ಮನೆ ಮಾಲಿಕರು ಬಂದೂಕು ಲೈಸೆನ್ಸ್ ಪಡೆದು ಖರೀದಿಸಿ ಎಚ್ಚರಿಕೆ ವಹಿಸಿ ಸಮಾಜ ಘಾತುಕ ಕೆಲಸಗಳಿಂದ ದೂರವಿರಬೇಕು ಎಂದರು.
ದೈವ ಮತ್ತು ದೇವರ ಪೂಜೆಅಂತ ವಂಚಿಸುವ ತಂಡಗಳ ಬಗ್ಗೆ ಮತ್ತು ಕಡಿಮೆ ದರದಲ್ಲಿ ಮನೆಯ ಸಾಮಾನು ಸರಬರಾಜು ಮಾಡುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು . ಹಬ್ಬ ಹರಿದಿನ ಮತ್ತು ಸಮಾರಂಭಗಳಿಗೆ ತೆರಳುವ ವೇಳೆ ಮಹಿಳೆಯರು ತಮ್ಮ ಆಭರಣಗಳನ್ನು ಪ್ರದರ್ಶನ ಮಾಡಬಾರದು .ಶಾಲೆಗೆ ತೆರಳುವ ಮಕ್ಕಳ ಬಗ್ಗೆ ಪೋಷಕರು ತಿಂಗಳಿಗೊಮ್ಮೆ ಶಾಲೆಗೆ ತೆರಳಿ ಪರಿಶೀಲನೆ ನಡೆಸಬೇಕುಎಂದು ಸೂಚನೆ ನೀಡಿದರು.
ಅಪರಾದ ತಡೆ ಮಾಸಾಚರಣೆ ಪ್ರಯುಕ್ತ ಕೊರಟಗೆರೆ ಪೊಲೀಸ್ ಇಲಾಖೆಯಿಂದ ಕೊರಟಗೆರೆ ಪಟ್ಟಣ, ತೋವಿನಕರೆ, ತುಂಬಾಡಿ, ಕ್ಯಾಮೇನಹಳ್ಳಿ, ಹೊಳವನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಮತ್ತು ಶಾಲೆಯಲ್ಲಿ ಸಭೆ ನಡೆಸಿ ಅಪರಾದ ತಡೆಯುವ ಬಗ್ಗೆ ಕಾರ್ಯಕ್ರಮ ನಡೆಸಲಾಗಿದೆ . ವಿದ್ಯಾರ್ಥಿಗಳಿಂದ ಮುಖ್ಯ ರಸ್ತೆಯಲ್ಲಿ ಜಾಥಾ ಹಮ್ಮಿಕೊಂಡು ಕರ ಪತ್ರ ಹಂಚಿಸಿ ಪ್ಲೇಕ್ಸ್ ಮತ್ತು ಬ್ಯಾನರ್ಗಳ ಮೂಲಕ ಅರಿವು ಮೂಡಿಸಲಾಗಿದೆ ಎಂದು ಹೇಳಿದರು.
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿಅಪರಿಚಿತ ವ್ಯಕ್ತಿಗಳಿಂದ ದರೋಡೆಅಥವಾ ಸುಲಿಗೆ ಕಳವು ಯತ್ನಗಳ ಬಗ್ಗೆ ಕಂಡು ಬಂದಲ್ಲಿ ತಕ್ಷಣ ಮಧುಗಿರಿ ಡಿವೈಎಸ್ಪಿ-9480802924, ಕೊರಟಗೆರೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ-08138-232136, ಕೊರಟಗೆರೆ ವೃತ್ತ ಸಿಪಿಐ-9480802954, ವೃತ್ತ ಪಿಎಸ್ಐ-9480802988ಗೆ ಸಾರ್ವಜನಿಕರು ಕರೆ ಮಾಡಿ ತಿಳಿಸಿ ಅಪರಾದ ತಡೆಗಟ್ಟಲು ಮತ್ತು ಪತ್ತೆ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಎಸೈ ರಾಮಕೃಷ್ಣಯ್ಯ, ಮುಖ್ಯ ಪೇದೆಗಳಾದ ಲಕ್ಷ್ಮೀನಾರಾಯಣ್, ಸೋಮನಾಥ, ಪ್ರಶಾಂತ, ಚಂದ್ರಶೇಖರ, ಗೋವಿಂದನಾಯ್ಕ, ರಂಗನಾಥ, ಆನಂದ, ತ್ರೀವೇಣಿ, ಮಮತ, ಶಿಲ್ಪಾ, ಸರಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಕಾಳಿದಾಸ ಪ್ರೌಢಶಾಲೆಯ ಶಿಕ್ಷಕರು ಜೊತೆ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
