ಪೇದೆ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು…!!

ಬೆಂಗಳೂರು

        ಹಾಡಹಗಲೇ ಮುಖ್ಯ ಪೇದೆಯೊಬ್ಬರ ಮನೆಗೆ ನುಗ್ಗಿ 40 ಸಾವಿರ 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದ್‍ರಾವ್ ವೃತ್ತದ ಪೊಲೀಸ್ ವಸತಿಗೃಹದಲ್ಲಿನಡೆದಿದೆ.

        ಹೆಬ್ಬಾಳ ಸಂಚಾರ ಠಾಣೆಯ ಪೊಲೀಸ್ ಮುಖ್ಯಪೇದೆ ವೆಂಕಟೇಶ್ ಅವರು ಶನಿವಾರ ಬೆಳಿಗ್ಗೆ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದರು ಸಂಜೆ ವೇಳೆ ವೇಳೆ ಮನೆ ಬೀಗ ಒಡೆದಿರುವುದನ್ನು ಕಂಡ ಅಕ್ಕಪಕ್ಕದ ಮನೆಯವರು ಕೂಡಲೇ ವೇಂಕಟೇಶ್ ಅವರಿಗೆ ವಿಷಯ ತಿಳಿಸಿದ್ದು ಮನೆಗೆ ಬಂದು ನೋಡಿದಾಗ ಕಳವು ನಡೆದಿರುವುದು ಕಂಡುಬಂದಿದೆ.

        ಬೀಗ ಹೊಡೆದು ಒಳನುಗ್ಗಿದ್ದ ದುಷ್ಕರ್ಮಿಗಳು ಮನೆಯೊಳಗಿದ್ದ 7 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 40 ಸಾವಿರ ನಗದು ಹಣ ಕದ್ದು ಪರಾರಿಯಾಗಿದ್ದಾರೆ.ವಸತಿಗೃಹದಲ್ಲಿ ಸರಿಯಾದ ಬೀದಿ ದೀಪ, ಬೀಟ್ ವ್ಯವಸ್ಥೆ ಮತ್ತು ಭದ್ರತೆ ಇಲ್ಲವೆಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link