ಹಾಸನ
ಪ್ರಮುಖ ಒಕ್ಕಲಿಗರ ನಾಯಕ ದೇವೇಗೌಡ ಅವರು ಒಕ್ಕಲಿಗರ ಸಂಘದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಚುನಾವಣೆ ನಡೆಸುವ ಒಕ್ಕಲಿಗರ ಸಂಘಕ್ಕೆ ನಾಚಿಕೆ ಆಗಬೇಕು, ಕೆಎಲ್ಇ ಸೇರಿದಂತೆ ಲಿಂಗಾಯತ ಸಂಸ್ಥೆಗಳು ಹೇಗೆ ನಡೆಯುತ್ತಿವೆ ಎಂದು ಅವರೊಮ್ಮೆ ನೋಡಬೇಕು’ ಎಂದು ದೇವೇಗೌಡ ಆಕ್ರೋಶದಿಂದ ಹೇಳಿದರು.
ಒಕ್ಕಲಿಗರ ಸಂಘದ ಆಡಳಿತಾಧಿಕಾರಿ ಅಶೋಕ್ ಅವರನ್ನು ವರ್ಗಾಯಿಸಿದ್ದಕ್ಕೆ ಅಸಮಾಧಾನ ಹೊರಹಾಕಿದ ಅವರು, ಉತ್ತಮ ಕೆಲಸ ಮಾಡಿದ್ದ ಅಶೋಕ್ ಅವರ ಸ್ಥಾನಕ್ಕೆ ಶಂಕರಲಿಂಗೇಗೌಡ ಅವರನ್ನು ನೇಮಿಸಲಾಗಿದೆ. ಶಂಕರಲಿಂಗೇಗೌಡ ನೇಮಕಕ್ಕೆ ಅಸಮಾಧಾನವಿಲ್ಲ ಆದರೆ ಅಶೋಕ್ ಅವರನ್ನು ಬದಲಾಯಿಸಿದ್ದು ಏಕೆ? ಅವರ ವಿರುದ್ಧ ಇದ್ದ ದೂರು ಏನು? ದೂರು ಕೊಟ್ಟವರು ಯಾರು ಎಂದು ಬಹಿರಂಗಪಡಿಸಲಿ ಎಂದು ದೇವೇಗೌಡ ಒತ್ತಾಯ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/03/573659-1555001403.gif)