ಪಶುಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ

ಚಿತ್ರದುರ್ಗ;

     ನಗರದ ಜೆಸಿಆರ್ ಬಡಾವಣೆಯಲ್ಲಿ ಶನಿವಾರ 22ನೇ ವಾರ್ಡ್ ಜೆಸಿಆರ್ ವಿಪಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದಿಂದ ಪಶುಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು.

     ಪಶುಕಪ್ಷಿಗಳಿಗೆ ಕುಡಿಯುವ ನೀರಿನ ಬವಣೆ ಇರುತ್ತದೆ ಆದ್ದರಿಂದ ನಾವು ಸಾಧ್ಯವಾದಷ್ಟು ಪ್ರತಿ ಮನೆಯ ಮುಂದೆ ಸಣ್ಣ ನೀರಿನ ತೊಟ್ಟಿಯನ್ನು ಇಟ್ಟು ಪಶು ಮತ್ತು ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಈ ನೀಟ್ಟಿನಲ್ಲಿ 22ನೇ ವಾರ್ಡ್ ಜೆಸಿಆರ್ ವಿಪಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಬಡಾವಣೆಯಲ್ಲಿ ಆಯ್ದ ಭಾಗಗಳಲ್ಲಿ ನೀರಿನ ತೋಟ್ಟಿಗಳನ್ನು ಇಟ್ಟು ಪಶುಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯದರ್ಶಿ ಸುರೇಶ್ ಬಾಬು ತಿಳಿಸಿದ್ದಾರೆ.

     ಸಂಘದ ಅಧ್ಯಕ್ಷ ಮುರುಘೆಶ್ ಗೌಡ್ರು, ಉಪಾಧ್ಯಕ್ಷೆ ರಾಮಾದೇವಿ, ಎಚ್.ವಿ.ಕೃಷ್ಣಪ್ಪ, ಶೈಲಾ ಮಂಜುನಾಥ, ಗೀತ ಈಶ್ವರಪ್ಪ, ಕಲಾ, ಉತ್ತನಪಾದ ರೆಡ್ಡಿ, ರಮೇಶ್ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link