ಶಿರಾ
ಸಾರಿಗೆ ಬಸ್ಸನ್ನು ತೊಳೆಯಲು ಬಸ್ಸನ್ನು ನಿಲ್ಲಿಸುವ ವೇಳೆ ಹ್ಯಾಂಡ್ ಬ್ರೇಕ್ ಹಾಕದ ಪರಿಣಾಮ ಚಾಲಕನಿಗೆ ಬಸ್ಸಿನ ಬಾಗಿಲು ತಗುಲಿ ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.ಶಿರಾ ಸಾರಿಗೆ ಘಟಕದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಂದ್ರ (38) ಎಂಬಾತ ಘಟಕದಲ್ಲಿ ಬಸ್ಸನ್ನು ತೊಳೆಸುವ ಸಲುವಾಗಿ ಬಸ್ ವಾಷಿಂಗ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದಾರೆ. ಹ್ಯಾಂಡ್ ಬ್ರೇಕ್ ಹಾಕದೆ ಕೆಳಗಿಳಿದ ಪರಿಣಾಮ ಬಸ್ಸು ಮುಂದಕ್ಕೆ ಚಲಿಸಿದೆ.
ಬಸ್ಸಿನ ಬಾಗಿಲು ಆತನಿಗೆ ತಗುಲಿ ತೀವ್ರವಾದ ಗಾಯಗಳಾಗಿ ನಾಗೇಂದ್ರಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/09/sira-photo-number-529.gif)