ಸಾಂಸ್ಕೃತಿಕ ಕಲಾವಿದರ ಸಂಘಕ್ಕೆ ಆಯ್ಕೆ

ಚಿತ್ರದುರ್ಗ:

          ಪತ್ರಕರ್ತರ ಭವನದಲ್ಲಿ ಮೊನ್ನೆ ನಡೆದ ಕರ್ನಾಟಕ ರಾಜ್ಯ ಸಾಂಸ್ಕತಿಕ ಕಲಾವಿದರ ಸಂಘಕ್ಕೆ ಈ ಕೆಳಕಂಡಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

           ಸಂಘದ ರಾಜ್ಯಾಧ್ಯಕ್ಷ ಹೆಚ್.ಹೊನ್ನೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಸಾಂಸ್ಕತಿಕ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಎಂ.ನಿಂಗರಾಜ್‍ರವರನ್ನು ತೆಗೆದು ಅವರ ಬದಲಿಗೆ ಎಸ್.ರುದ್ರಮುನಿಯಪ್ಪನವರನ್ನು ಸಂಘದ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಯಿತು.

         ಗೌರವಾಧ್ಯಕ್ಷರಾಗಿ ಆನಂದಪ್ಪ, ಉಪಾಧ್ಯಕ್ಷರುಗಳಾಗಿ ಪಾಪಯ್ಯ, ನಾಗಪ್ಪ, ಶಿವರುದ್ರಪ್ಪ, ಶರಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಮಂಜುನಾಥ ಬಸ್ತಿಹಳ್ಳಿ, ಕಾರ್ಯದರ್ಶಿಯಾಗಿ ರಾಮಲಿಂಗಪ್ಪ ಡಿ.ಎಸ್.ಹಳ್ಳಿ, ಸಹ ಕಾರ್ಯದರ್ಶಿಯಾಗಿ ಸಣ್ಣಪಾಪಯ್ಯ ವರವು, ಸಂಘಟನಾ ಕಾರ್ಯದರ್ಶಿಯಾಗಿ ಮೂಡ್ಲಪ್ಪ ಕೆನ್ನಡ್ಲು ಇವರುಗಳನ್ನು ಆಯ್ಕೆ ಮಾಡಲಾಯಿತು.

         ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಮಲ್ಲಮ್ಮ, ಉಪಾಧ್ಯಕ್ಷರಾಗಿ ಈರಮ್ಮ, ಲಕ್ಷ್ಮಿದೇವಿ, ದುರುಗಮ್ಮ, ಜಿಲ್ಲಾ ಕಾರ್ಯದರ್ಶಿಯಾಗಿ ಯಲ್ಲಮ್ಮ, ಚಿತ್ರದುರ್ಗ ತಾಲೂಕು ಅಧ್ಯಕ್ಷರಾಗಿ ತಿಪ್ಪೇಸ್ವಾಮಿ, ಉಪಾಧ್ಯಕ್ಷರುಗಳಾಗಿ ಬಸವರಾಜಪ್ಪ ಸಜ್ಜನಕೆರೆ, ಮಾರಪ್ಪ ಕೆನ್ನಡ್ಲು, ಚಳ್ಳಕೆರೆ ತಾಲೂಕು ಅಧ್ಯಕ್ಷರಾಗಿ ಉಮೇಶ್, ಉಪಾಧ್ಯಕ್ಷರಾಗಿ ಚಂದ್ರಣ್ಣ, ಹಿರಿಯೂರು ತಾಲೂಕು ಅಧ್ಯಕ್ಷರಾಗಿ ಗುರುಮೂರ್ತಿ, ನಾಗರಾಜ್, ಮೊಳಕಾಲ್ಮುರು ತಾಲೂಕು ಅಧ್ಯಕ್ಷರಾಗಿ ಮಲ್ಲಿಕಾರ್ಜುನಪ್ಪ ಕೊಂಡ್ಲಹಳ್ಳಿ, ತುರುವನೂರು ಹೋಬಳಿ ಅಧ್ಯಕ್ಷರಾಗಿ ಕೆ.ಲೋಕೇಶ್ ಇವರುಗಳನ್ನು ನೇಮಕ ಮಾಡಲಾಯಿತು.

         ಕರ್ನಾಟಕ ರಾಜ್ಯ ಸಾಂಸ್ಕøತಿಕ ಕಲಾವಿದರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಏಕಾಂತಪ್ಪ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶಾಂತಕುಮಾರಿ, ರಾಜ್ಯ ಕಾರ್ಯದರ್ಶಿ ಟಿ.ತಿಪ್ಪೇಸ್ವಾಮಿ ಇವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link