6.5 ಕೋಟಿ ಜನರಿಗೆ ಒಳಿತಾದರೆ ಅದೇ ಖುಷಿ : ಎಂ.ಚಂದ್ರಪ್ಪ

ಚಿತ್ರದುರ್ಗ;

   ನಾನು ಯಡಿಯೂರಪ್ಪ ಅವರ ಅತ್ಯಂತ ನಿಷ್ಟಾವಂತ ಬೆಂಬಲಿಗ. ನನಗೂ ಮಂತ್ರಿಯಾಗಬೇಕು ಎನ್ನುವ ಆಸೆ ಇತ್ತಾದರೂ, ಅವರನ್ನು ಕೇಳಿಯೇ ಇಲ್ಲ. ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎನ್ನುವ ಆಸೆ ಇತ್ತು. ಇದು ಈಡೇರಿದೆ. ನಾಡಿನ ಆರುವರೆ ಕೋಟಿ ಜನರಿಗೆ ಒಳ್ಳೆಯದಾಗುವುದಾದರೆ ಅದಕ್ಕಿಂತ ಖುಷಿ ಬೇರೆಯಿಲ್ಲ. ಹೀಗೆಂದವರು ಬಿಜೆಪಿಯ ಹಿರಿಯ ನಾಯಕ, ಹೊಳಲ್ಕೆರೆಯ ಶಾಸಕ ಎಂ.ಚಂದ್ರಪ್ಪ.

    ಜಿಲ್ಲೆ ಮತ್ತು ನನ್ನ ಹೊಳಲ್ಕೆರೆ ಕ್ಷೇತ್ರದ ಅಭಿವೃದ್ದಿಯ ದೃಷ್ಟಿಯಿಂದ ಮಂತ್ರಿಯಾಗಬೇಕು ಎನ್ನುವ ಆಸೆ ಇದೆ. ಕಾರ್ಯಕರ್ತರು ಮತ್ತು ಬೆಂಬಲಿಗರೂ ನಿರೀಕ್ಷಿಸಿದ್ದರು. ಆದರೆ ಏನು ಮಾಡಲಿ ? ರಾಜಕೀಯ ಪರಿಸ್ಥಿತಿ ಬೇರೆಯದೇ ಆಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾರೆ. ಇದರಿಂದ ಆರುವರೆ ಕೋಟಿ ಜನರಿಗೆ ಒಳ್ಳೆಯದಾಗುವುದಾದರೆ ಅದಕ್ಕಿಂತ ಖುಷಿ ಬೇರೆಯಿಲ್ಲ ಎಂದು ಹೇಳಿದರು
ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಮಂತ್ರಿ ಪದವಿ ಕೇಳಿಯೇ ಇಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿರಬೇಕು.

    ರಾಜ್ಯದಲ್ಲಿ ಉತ್ತಮ ಆಡಳಿತ ನೀಡಬೇಕು. ಆಮೂಲಕ ನನ್ನ ಕ್ಷೇತ್ರದ ಅಭಿವೃದ್ದಿಯಾಗಬೇಕು. ಅದಕ್ಕಾಗಿ ಮಂತ್ರಿ ಪದವಿ ಸಿಕ್ಕಿಲ್ಲವೆಂದು ಬೇಸರ ಮಾಡಿಕೊಳ್ಳದೆ ಪರಿಸ್ಥಿತಿ ಅರಿತು ಮುನ್ನಡೆಯುತ್ತಿದ್ದೇನೆ ಎಂದು ಹೇಳಿದರು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿರುವುದರಿಂದ ಹೊಳಲ್ಕೆರೆ ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಅವಕಾಶ ಸಿಕ್ಕಿದೆ.

    ಈ ಅವಕಾಶವನ್ನು ದಬ್ಳಕರೆ ಮಾಡಿಕೊಂಡು ಕ್ಷೇತ್ರದ ಸಮಗ್ರ ಅಭಿವೃದ್ದಿಯ ಕಡೆ ಚಿಂತನೆ ಮಾಡುವುದೇ ನನ್ನ ಗುರಿ. ಅದನ್ನು ಬಿಟ್ಟು ಮಂತ್ರಿ ಪದವಿಗಾಗಿ ಲಾಭಿ ಮಾಡಲು ಹೋಗುವುದಿಲ್ಲವೆಂದು ಎಂ.ಚಂದ್ರಪ್ಪ ಸ್ಪಷ್ಟ ಪಡಿಸಿದ್ದಾರೆ ಶಾಸಕನಾಗಿಯೇ ನನ್ನ ಕ್ಷೇತ್ರಕ್ಕೆ ಸಮ್ಮೀಶ್ರ ಸರ್ಕಾರದಲ್ಲಿ ಹೋರಾಟ ಮಾಡಿ ಹೆಚ್ಚಿನ ಅನುದಾನ ತಂದು ಅಭಿವೃದ್ದಿ ಕೆಲಸ ಮಾಡಿದ್ದೇನೆ.

   ಈಗ ನಮ್ಮ ನಾಯಕರೇ ಮುಖ್ಯಮಂತ್ರಿಯಾಗಿರುವಾಗ ಅನುದಾನ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುವಂತಿಲ್ಲ. ಕೇಳಿದಷ್ಟು ಹಣ ಕೊಡುತ್ತಾರೆ. ಹೊಸ ಹೊಸ ಯೋಜನೆಗಳಿಗೆ ಇನ್ನು ಮುಂದೆ ಚಾಲನೆ ನೀಡಲು ಆನೆ ಬಲಬಂದಂತಾಗಿದೆ ಎಂದರು ನನ್ನ ನಿಷ್ಠೆ , ಅಭಿವೃದ್ದಿ ಬಗೆಗಿನ ಛಲ, ಸಾಮಥ್ರ್ಯ ಎಲ್ಲವೂ ನಮ್ಮ ನಾಯಕರಾಗಿರುವ ಯಡಿಯೂರಪ್ಪ ಸೇರಿ ಪಕ್ಷದ ನಾಯಕರಿಗೂ ಗೊತ್ತಿದೆ. ರಾಜಕೀಯ ಪರಿಸ್ಥಿತಿ ಕೂಡಿ ಬಂದರೆ ಮಂತ್ರಿ ಭಾಗ್ಯ ತಾನಾಗಿಯೇ ಬರಲಿದೆ. ಅದಕ್ಕಾಗಿ ಸಿಎಂ ಮೇಲೆ ಒತ್ತಡ ಹಾಕುವುದಿಲ್ಲ ವೆಂದರು.

ಅಭಿವೃದ್ದಿಗೆ ಎಲ್ಲರೂ ಸಹಕರಿಸಬೇಕು:

   ರಾಜ್ಯದ ಅಭಿವೃದ್ದಿಯ ದೃಷ್ಟಿಯಿಂದ ಸದ್ಯದ ರಾಜಕೀಯ ಪರಿಸ್ಥಿತಿ ಅರ್ಥೈಸಿಕೊಂಡು ಯಡಿಯೂರಪ್ಪ ಅವರಿಗೆ ಸಹಕಾರ ನೀಡಬೇಕು. ಈ ಬಗ್ಗೆ ನಮ್ಮ ಎಲ್ಲಾ ಶಾಸಕರು ಮತ್ತು ಮುಖಂಡರು ಚಿಂತನೆ ಮಾಡಬೇಕು ಎಂದು ಎಂ.ಚಂದ್ರಪ್ಪ ಅವರು ಸಲಹೆ ನೀಡಿದ್ದಾರೆ ಮುಖ್ಯಮಂತ್ರಿಗಳಿಗೆ ನಿಶ್ಚಿಂತೆಯಾಗಿ ಕೆಲಸ ಮಾಡಲು ಎಲ್ಲರೂ ಅವಕಾಶ ಮಾಡಿಕೊಡಬೇಕು ಅವರವರ ಕ್ಷೇತ್ರಗಳ ಪ್ರಗತಿ ಕುರಿತು ನೀಲನಕ್ಷೆ ತಯಾರಿಸಿ ಅನುದಾನಕ್ಕೆ ಸಲ್ಲಿಸಬೇಕು. ಮುಖ್ಯಮಂತ್ರಿಗಳು ಈಗಾಗಲೇ ನನಗೂ ಸೇರಿದಂತೆ ಬಹುತೇಕ ಶಾಸಕರಿಗೆ ಏನೇನು ಬೇಕು ಎಂಬುದನ್ನು ಕೇಳಿದ್ದಾರೆಂದು ಹೇಳಿದರು.

   ಕ್ಷೇತ್ರದ ಅಭಿವೃದ್ದಿಗೆ ಮಂತ್ರಿಯೇ ಆಗಬೇಕೆಂದಿಲ್ಲ.ಈ ಹಿಂದೆ ನಾನು ಭರಮಸಾಗರ ಕ್ಷೇತ್ರದಲ್ಲಿ ಶಾಸಕನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಹೊಳಲ್ಕೆರೆಯಲ್ಲಿಯೂ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ನನಗೆ ನನ್ನ ಕ್ಷೇತ್ರದ ಅಭಿವೃದ್ದಿ ಅಷ್ಟೇ ಮುಖ್ಯವೆಂದು ಶಾಸಕ ಎಂ.ಚಂದ್ರಪ್ಪ ಪುನರುಚ್ಚರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link