ಹೊಸದುರ್ಗ:
ಪ್ರತಿ ಹಳ್ಳಿಯಲ್ಲೂ ಇರುವ ಸಣ್ಣ ಸಣ್ನ ಕಟ್ಟೆಗಳನ್ನು ಜೀರ್ಣೋದ್ದಾರ ಮಾಡಿ ನೀರನ್ನು ಇಂಗಿಸಿವ ಕೆಲಸವನ್ನು ಪ್ರತಿಯೊಬ್ಬ ಭಾರತೀಯನು ಮಾಡಬೇಕಾದಅಗತ್ಯತೆಇದೆಎಂದುಡಾ.ಶಾಂತವೀರ ಸ್ವಾಮೀಜಿ ಹೇಳಿದರು.ಶಿರಾ ತಾಲ್ಲೂಕಿನರಾಮಲಿಂಗಪುರಗ್ರಾಮದ ಶ್ರೀ ಮುದ್ದುವೀರ ಸ್ವಾಮಿಗದ್ದುಗೆ ಮಠದಲ್ಲಿ ನಡೆದ ಸುಜ್ಞಾನ ಸಂಗಮ ಹುಣ್ಣಿಮೆ ಸತ್ಸಂಗಕಾರ್ಯಕ್ರವiದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಪ್ರಕೃತಿಯ ಮೇಲೆ ಮಾನವ ಮಾಡಿದಕ್ರೌರ್ಯ, ಅತ್ಯಾಚಾರ, ಅರಣ್ಯ ನಾಶದಿಂದಆದಪರಿಣಾಮ ಮಾನವನ ಬದುಕು ಸಂಕಷ್ಟ ಸಿಲುಕಿದೆ.ಕೆರೆ ಕಟ್ಟೆಗಳನ್ನು ಸಂರಕ್ಷಿಸಿ ಪೋಷಿಸುವ ಅನಿವಾರ್ಯ ನಿರ್ಮಾಣವಾಗಿದೆ.ನಮ್ಮ ಹಿರಿಯರು ಪ್ರತಿ ಹೊಲದ ಬದುವಿನಲ್ಲಿ ಹತ್ತು ಹಲವು ಮರಗಳನ್ನು ಬೆಳೆಸಿದಂತೆ ನಾವುಗಳು ಇಂದು ಆ ಕೆಲಸವನ್ನು ಪುನಃ ಸ್ಥಾಪಿಸಬೇಕಾದಅಗತ್ಯತೆಇದೆಎಂದರು.
ಪ್ರಕೃತಿಯನ್ನು ಪ್ರೀತಿಸದೇ ಬೆಳೆಸದೇ ಕೇವಲ ಪ್ರಕೃತಿಯನ್ನು ಬಳಸಿ ಹಾಳು ಮಾಡುತ್ತಿರುವುದು ಮಾನವನೇಎಲ್ಲ ಕರ್ಮಗಳಿಗೆ ಕಾರಣ.ಪ್ರಕೃತಿಯನ್ನು ಪ್ರೀತಿಸಿ ಬೆಳೆಸದೆ ಇದ್ದರೆ ಭಾರತ ಬರಡು ಭೂಮಿಯಾಗಿ ಮರಳುಗಾಡು ಆಗುವ ಎಲ್ಲಾ ಸಾಧ್ಯತೆಗಳಿವೆ. ಚಿತ್ರದುರ್ಗ, ತುಮಕೂರು ಅವಳಿ ಜಿಲ್ಲೆಗಳಿಗೆ ಭದ್ರಾ ಮೇಲ್ದಂಡೆಯೋಜನೆಯೇ ಪರಿಹಾರ.ಜಿಲ್ಲೆಯಎಲ್ಲಾ ಮಠಾಧೀಶರು ರಾಜಕಾರಿಣಿಗಳು, ಹೋರಾಟಗಾರರು ಸರ್ಕಾರದ ಮೇಲೆ ಒತ್ತಡತಂದುಕಾಮಗಾರಿಯನ್ನು ನಿಗಧಿತ ಸಮಯದೊಳಗೆ ಮುಗಿಸಲು ಹೋರಾಟವನ್ನು ತೀರ್ವಗೊಳಿಸುವ ಅಗತ್ಯವಿದೆಎಂದುಕರೆ ನೀಡಿದರು.
ಬಾಗಲುಕೋಟೆಯ ಶ್ರೀಅನ್ನದಾನ ಭಾರತೀ ಮಹಾಸ್ವಾಮಿಗಳು, ಅಲ್ಲಮ ಪ್ರಭು ಪೀಠದ ತಿಪ್ಪೆರುದ್ರಸ್ವಾಮಿಗಳು, ರಂಗಪ್ಪ, ರಮೇಶ್ಗುಟ್ಟೆ, ಗಿರೀಶ್, ದಾಸೋಹಿಗಳಾದ ನಾಗರಾಜ್, ಶಿವಣ್ಣ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
