ವಿದ್ಯುತ್ ತಂತಿ ತುಳಿದು ರೈತನ ಧಾರುಣ ಸಾವು

ತಿಪಟೂರು :

      ತಾಲ್ಲೂಕಿನ ನೊಣವಿನಕೆರೆ ಹೋಬಳಿ ಆಲ್ಬೂರು ಗ್ರಾಮದಲ್ಲಿ ಗದ್ದೆಗೆ ನೀರುಹಾಯಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ತಂತಿ ತುಳಿದು ಮೃತಪಟ್ಟಿರುವ ಘಟನೆ ಸಂಭವಿಸಿದೆ.

       ಆಲ್ಬೂರು ಗ್ರಾಮದ ರೈತ ಕೃಷ್ಣೇಗೌಡ (50) ದಿನನಿತ್ಯದಂತೆ ತಮ್ಮ ಗದ್ದೆಗೆ ನೀರುಹಾಯಿಸಲು ಹೋಗುವ ಸಂರ್ಭದಲ್ಲಿ ವಿದ್ಯುತ್ ಲೈನ್ ತುಂಡಾಗಿ ಬಿದ್ದಿರುವದನ್ನು ನೋಡದೆ ಅಚಾನಕ್ಕಾಗಿತುಳಿದು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಪಕ್ಕದ ಗದ್ದೆಯವರು ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನಿಸಿ ನೊಣವಿನಕೆರೆ ನೊಣವಿನಕೆರೆ ಬೆಸ್ಕಾಂ ಕಛೇರಿಗೆ ಕರೆಮಾಡಿ ತಿಳಿಸಿದಾಗ ಲೈನ್‍ಮೆನ್ ಬಂದಾಗ ಅಲ್ಲಿ ಕೃಷ್ಣೇಗೌಡ ಮಟ್ಟಿರುವುದನ್ನು ಕಂಡಿದ್ದಾರೆ. ಮೃತನು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದು, ಪ್ರಕರಣ ನೊಣವಿನಕೆರೆ ಠಾಣೆಯಲ್ಲಿ ದಾಖಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link