ರೈತರು ಯಾವುದೇ ಮಜಾ ಮಾಡಲು ಸಾಲ ಮಾಡಿಲ್ಲ:ಹನುಮಂತಪ್ಪ ದೀವಿಗಿಹಳ್ಳಿ

ಹಾವೇರಿ :

    ಇಲ್ಲಿನ ತಹಶೀಲ್ದಾರ ಕಛೇರಿಯಲ್ಲಿ ರೈತರ ಸಮಸ್ಯೆಗಳ ಪರಿಹಾರ ಕ್ರಮಕ್ಕಾಗಿ ಉಪವಿಭಾಗಾಧಿಕಾರಿಗಳಾದ ಎನ್.ತಿಪ್ಪೇಸ್ವಾಮಿಯವರ ಅಧ್ಯಕ್ಷತೆಯಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರ ಸಭೆ ಜರುಗಿತು. ಉ.ಕ ರೈತ ಸಂಘದ ಮುಖಂಡ ಹನುಮಂತಪ್ಪ ದೀವಿಗಿಹಳ್ಳಿ ಮಾತನಾಡಿ ಈ ಹಿಂದೆ ಹಲವಾರು ಪ್ರತಿಭಟನೆಗಳ ಮೂಲಕ ರೈತ ಸಂಘಟನೆಗಳು ಜಿಲ್ಲೆಯ ರೈತರ ಪರವಾಗಿ ಹೋರಾಟ ಮಾಡುತ್ತಾ ಬರುತ್ತಿದ್ದು, ಅನ್ನದಾತನ ಸಮಸ್ಯೆಗಳಿಗೆ ಸರ್ಕಾರದ ಅಧಿಕಾರಿಗಳಿಂದ ಸರಿಯಾದ ಮಾರ್ಗದರ್ಶನ ಸಿಕ್ಕಿಲ್ಲ.

      ಜಿಲ್ಲೆಯ ಬ್ಯಾಂಕ್ ಹಾಗೂ ಖಾಸಗಿ ಪೈನಾನ್ಸ್ ಕಂಪನಿಗಳು ರೈತರ ಸಾಲದ ಮರು ಪಾವತಿ ಮಾಡುವಂತೆ ನೋಟಿಸನ್ನು ನೀಡದ್ದವು. ಬರಗಾಲದ ಈ ಸಂದರ್ಭದಲ್ಲಿ ರೈತರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಸರ್ಕಾರದ ಮುಖ್ಯಮಂತ್ರಿಗಳು ರೈತರಿಗೆ ಯಾವುದೇ ಬ್ಯಾಂಕ್- ಖಾಸಗಿ ಕಂಪನಿಗಳು ನೋಟಿಸ್ ನೀಡುವಂತಹ ಕ್ರಮಕ್ಕೆ ಮುಂದಾಗಬಾರದು ಎಂದು ಹೇಳಿದರೂ ರೈತರ ಕಷ್ಟ ಲೆಕ್ಕ ಹಾಕದೆ ಸಾಲ ಮರುಪಾವತಿ ಮಾಡಲು ಮುಂದಾಗುತ್ತಿರುವುದು ಖೇದಕರ.

      ರೈತರು ಯಾವುದೆ ಮಜಾ ಮಾಡಲು ಸಾಲ ಮಾಡಿಲ್ಲ. ಜೀವನ ನಡೆಸಲು ಹಣದ ತೊಂದರೆಯಿಂದ ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ.ರೈತರಿಗೆ ಯಾವುದೆ ರೀತಿಯ ತೊಂದರೆ ಕೊಡಬಾರದು. ಮುದ್ರಾ ಯೋಜನೆಗೆ ಸಾಲ ಕೊಡಲು ಬ್ಯಾಂಕುಗಳು ವಿಳಂಬ ಮಾಡದೆ ಹೈನುಗಾರಿಕೆಗೆ ಸಾಲ ನೀಡುವಂತೆ ಹೇಳಿದರು. ಉಪವಿಭಾಗಾಧಿಕಾರಿಗಳಾದ ಎನ್.ತಿಪ್ಪೇಸ್ವಾಮಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಬ್ಯಾಂಕ್ ಹಾಗೂ ಪೈನಾನ್ಸ್ ಕಂಪನಿಯವರು ರೈತರಿಗೆ ಯಾವುದೇ ಕಡ್ಡಾಯ ಸಾಲವಸೂಲಾತಿ ಮಾಡಬಾರದು.

       ರೈತರ ಜೊತೆ ಸ್ಪಂದಿಸಿ ಯಾವುದೇ ರೀತಿ ಸಾಲವಸೂಲಾತಿಗಾಗಿ ಕಿರಿಕುಳ ನೀಡಬಾರದು. ಇಂತಹ ಘಟನೆ ನಡೆದರೆ ದೂರವಾಣಿಯ ಮೂಲಕ ನಮ್ಮ ಗಮನಕ್ಕೆ ತನ್ನಿರಿ ಅವರ ಮೇಲೆ ಸೂಕ್ತ ಕ್ರಮಕ್ಕೆ ಕೈಗೊಳ್ಳಲಾಗುವುದು. ಎಲ್ಲ ಖಾಸಗಿ ಪೈನಾನ್ಸ್ ಕಂಪನಿಯ ಮುಖ್ಯಸ್ಥರ ಸಭೆಯನ್ನು ನಾಲ್ಕೈದು ದಿನಗಳಲ್ಲಿ ಮತ್ತೆ ಸಭೆ ಸೇರಿ ಅವರಿಗೆ ನಿರ್ದೆಶನ ನೀಡಲಾಗುವುದು ಎಂದು ಹೇಳಿದರು. ರೈತರ ಮುಖಂಡರಾದ ಚಂದ್ರಶೇಖರ ಉಪ್ಪಿನ.ಫಕ್ಕಿರೇಶ ಕಾಳಿ.

         ಜಗದೀಶ ಕೂಸಗೂರ.ಸಿದ್ದಪ್ಪ ನೂಲಗೇರಿ.ಚಂದ್ರು ಗುತ್ತೂರ.ಹನುಮಂತಪ್ಪ ಸುಣಗಾರ.ಬಿ ಡಿ ಪಾಟೀಲ.ಮಂಜಯ್ಯ ಹಿರೇಮಠ.ಬಸವರಾಜ ಪಾಣಿಗಟ್ಟಿ. ಫಕ್ಕಿರಪ್ಪ ಒಡಯಂಪೂರ ಅನೇಕರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link