ತುರುವೇಕೆರೆ
ತೋಟಕ್ಕೆ ಎಮ್ಮೆ ಮೇಯಿಸಲು ತೆರಳಿದ್ದ ರೈತನೋರ್ವ ತೋಟದ ಪಕ್ಕದಲ್ಲಿದ್ದ ತೊರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಆನೆಮೆಳೆ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಮೃತ ಈರಣ್ಣ(65) ಪ್ರತಿ ದಿನದಂತೆ ಎಮ್ಮೆ ಮೇಯಿಸಲು ತನ್ನ ತೋಟಕ್ಕೆ ತೆರಳಿದ್ದಾರೆ. ತೋಟದ ಪಕ್ಕದಲ್ಲಿ ತೊರೆ ಹರಿಯುತ್ತಿದ್ದು ಎಮ್ಮೆಗಳು ಮೇಯಲು ತೊರೆ ದಾಟಿ ಹೋಗಿವೆ. ಎಮ್ಮೆಗಳನ್ನು ಒಡೆದುಕೊಂಡು ಬರಲು ಬಟ್ಟೆ ಬಿಚ್ಚಿಟ್ಟು ತೋರೆಗೆ ಇಳಿದು ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳ ಹಾಗೂ ಪೊಲೀಸರು ಈರಣ್ಣನ ಮೃತ ದೇಹದ ಶೋದ ಕಾರ್ಯ ಮುಂದುವರೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







